ಬೆಂಗಳೂರು : ಕಾಂಗ್ರೆಸ್ನಲ್ಲಿ ಬಂಡಾಯ ಶಮನವಾಯಿತು ಎಂದುಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಅಸಮಾಧಾನ ಸ್ಫೋಟಿಸಿದೆ. ಈ ಬಾರಿ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರತ್ತಲೇ ಈ ಮುಖಂಡರು ಬಾಣ ಪ್ರಯೋಗಿಸಿದ್ದಾರೆ.
ಇಬ್ಬರು ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಲು ಸೀಮಿತವಾಗಿ ಸಂಪುಟ ವಿಸ್ತರಿಸಲು ಕಾಂಗ್ರೆಸ್ ಮುಂದಾಗಿದೆ. ಈ ನಿರ್ಧಾರದ ಹಿಂದೆ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಂಶವೇ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ. ಅತೃಪ್ತ ಶಾಸಕರ ಬಾಯಿ ಮುಚ್ಚಿಸಿದ್ದ ಕೈನಾಯಕರು ಸದ್ಯಕ್ಕೇನೂ ಸಮಸ್ಯೆಯಾಗದು ಎಂಬ ನಿರಾಳ ಭಾವದಲ್ಲಿದ್ದರು. ಆದರೆ, ರಾಮಲಿಂಗಾರೆಡ್ಡಿ ಅವರಂಥ ಹಿರಿಯರು ಮೌನ ಮುರಿಯುವುದರೊಂದಿಗೆ ಪ್ರದೇಶ ಕಾಂಗ್ರೆಸ್ನ ನೇತೃತ್ವ ವಹಿಸಿಕೊಂಡವರನ್ನು ಪ್ರಶ್ನೆ ಮಾಡಲು ಪಕ್ಷದಲ್ಲಿ ಮತ್ತೊಂದು ಗುಂಪು ಸೃಷ್ಟಿಯಾದಂತಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಸಿದ್ದು, ಗುಂಡೂರಾವ್ ವಿರುದ್ಧ ಬೇಗ್ ಹರಿಹಾಯ್ದಿದ್ದರು. ಇದೀಗ ರಾಮಲಿಂಗಾರೆಡ್ಡಿ 'ಪಕ್ಷದಲ್ಲಿ ಹಿರಿಯರ ಕಡೆಗಣನೆ ಆಗುತ್ತಿದೆ. ವಲಸಿಗರಿಗೆ ಮಣೆ ಹಾಕಲಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ. ರೆಡ್ಡಿ ನೋವಿನ ಜತೆಗೆ ತಾವಿರುವುದಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹೇಳಿದರೆ, ಮಾಜಿ ಸಚಿವ ವಿ.ಮುನಿಯಪ್ಪ, ಶಾಸಕ ಮುನಿರತ್ನ ಕೂಡ ದನಿಗೂಡಿಸಿದ್ದಾರೆ. ಇದರ ಬೆನ್ನಿಗೇ ಸಿದ್ದು ವಿರುದ್ಧ ರೋಷನ್ ಬೇಗ್ ಇನ್ನೊಂದು ಸುತ್ತಿನ ಕೋಪತಾಪ ಪ್ರದರ್ಶಿಸಿದ್ದಾರೆ.
ಇದೇ ಗುರುವಾರ ಸಂಪುಟ ವಿಸ್ತರಿಸಿ ಪಕ್ಷೇತರರಾದ ಶಂಕರ್ ಮತ್ತು ನಾಗೇಶ್ಗೆ ಅವಕಾಶ ನೀಡಲು ಕೈನಾಯಕರು ತೀರ್ಮಾನಿಸಿದ್ದಾರೆ. ಕೆಲ ತಿಂಗಳ ಬಳಿಕ ಸಂಪುಟ ಪುನಾರಚಿಸಿ 10ರಿಂದ 15 ಮಂದಿಗೆ ಮಂತ್ರಿ ಸ್ಥಾನ ನೀಡುವುದಾಗಿ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಬಹುತೇಕ ತಿಳಿಯಾಗಿದೆಯೆಂದು ಭಾವಿಸಲಾಗಿತ್ತು. ಈಗ ಹಿರಿಯರು ದನಿಯೆತ್ತುವುದರೊಂದಿಗೆ ಕಾಂಗ್ರೆಸ್ನ ಜಗಳ ಮತ್ತೆ ಬೀದಿಗೆ ಬಂದಂತಾಗಿದೆ. ಸಚಿವ ಸ್ಥಾನ ಕೈತಪ್ಪುವುದು ಖಾತರಿಯಾದ್ದರಿಂದ ಒಳಗೊಳಗೇ ಕುದಿಯುತ್ತಿದ್ದ ಅತೃಪ್ತರಿಗೂ ಈ ಚಟುವಟಿಕೆ ಮುಂದುವರಿಸಲು ಪುನಃ ಧೈರ್ಯ ಬಂದಂತಾಗಿದೆ. ಇದು ಯಾವ ಮಟ್ಟಕ್ಕೂ ಹೋಗುವ ಸಾಧ್ಯತೆಯಿದೆ. ಹಾಗಾಗಿ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರವೂ ತಲೆಕೆಳಗಾಗಬಹುದು.
ಅತೃಪ್ತಿಯೇನು?
ದೋಸ್ತಿ ಸರಕಾರ ರಚಿಸುವಾಗಲೂ ತಮ್ಮ ಸಲಹೆ ಪಡೆದಿಲ್ಲ. ಪಕ್ಷ ಮತ್ತು ಸರಕಾರದಲ್ಲೂ ತಮ್ಮ ಅನುಭವವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಸಿದ್ದರಾಮಯ್ಯ ತಮ್ಮ ಸುತ್ತ ಗುಂಪು ಕಟ್ಟಿಕೊಂಡು ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಧೋರಣೆಯಿಂದಲೇ ಲೋಕಸಭೆ ಚುನಾವಣೆಯಲ್ಲೂ ಪಕ್ಷ ನೆಲಕಚ್ಚಿದೆ. ಇಷ್ಟರ ಬಳಿಕವೂ ಆತ್ಮಾವಲೋಕನಕ್ಕೆ ಅವರು ಸಿದ್ಧರಿಲ್ಲ. ಉಸ್ತುವಾರಿ ವೇಣುಗೋಪಾಲ್ ಅವರನ್ನು ಜತೆಗಿಟ್ಟುಕೊಂಡು ಹೈಕಮಾಂಡ್ಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗುಂಡೂರಾವ್ ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಸಿದ್ದು ನಿರ್ದೇಶನ ಪಾಲಿಸುವುದಷ್ಟೇ ತಮ್ಮ ಕರ್ತವ್ಯವೆಂಬಂತೆ ವರ್ತಿಸುತ್ತಿದ್ದಾರೆ ಎಂಬ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿದೆ. ರೋಷನ್ ಬೇಗ್ ಬಹಿರಂಗವಾಗಿಯೇ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವು ಹಿರಿಯರು ಇದೇ ದಾರಿ ತುಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ದಿನೇಶ್ ಗುಂಡೂರಾವ್ ಡ್ಯಾಮೇಜ್ ಕಂಟ್ರೋಲ್ ಮಾಡುವ ಬಗ್ಗೆ ಚರ್ಚಿಸಿದರು.
ಬೇಗ್ ಕೆಂಡಾಮಂಡಲ
''ಲೋಕಸಭೆ ಚುನಾವಣೆಗೂ ಮುನ್ನ ನಾನೇ ಮುಂದಿನ ಸಿಎಂ ಎನ್ನುತ್ತಿದ್ದವರಿಗೆ ಫಲಿತಾಂಶ ಬಂದ ಮೇಲೆ ವಾಸ್ತವದ ಅರಿವಾಯಿತಾ? ನಂದೇ ನಡೆಯಬೇಕು, ನಾನು ಹೇಳಿದ್ದೇ ಆಗಬೇಕು ಎಂಬ ಇಗೊ ಇದ್ದವರಿಗದು ಈಗ ಇಳಿಯಿತಾ? ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲವೆಂದು ಹೇಳಿ ನಂತರ ನೀವೇ ಅವರನ್ನು ಸಿಎಂ ಮಾಡಿದ್ದನ್ನೂ ನೆನಪಿಸಿಕೊಳ್ಳಿ. ರಾಮಲಿಂಗಾರೆಡ್ಡಿ ಹೇಳಿದ್ದೆಲ್ಲವೂ ಸರಿ. ನಾನೂ ಅವರೊಂದಿಗೆ ಇರುತ್ತೇನೆ. ರೆಡ್ಡಿ, ಎಚ್.ಕೆ.ಪಾಟೀಲ್ ಅಂಥವರಿಗೆ ಸಚಿವ ಸ್ಥಾನ ನೀಡಬೇಕು. ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿಯಾಗಿದ್ದು ಪಕ್ಷ ಬಿಡುವುದಿಲ್ಲ. ಆದರೆ, ಈ ಸರಕಾರದಲ್ಲಿ ಥೂ...ಥೂ...ಥೂ... ನಾನಂತೂ ಮಂತ್ರಿಯಾಗಲ್ಲ. ಪಕ್ಷದಿಂದ ನನಗೆ ಕೊಟ್ಟ ನೋಟಿಸ್ಗೆ ಉತ್ತರಿಸುವುದಿಲ್ಲ,'' ಎಂದು ರೋಷನ್ ಬೇಗ್ ಹೇಳಿದ್ದಾರೆ.
''ಕೋಲಾರದಲ್ಲಿ ಮುನಿಯಪ್ಪ, ತುಮಕೂರಿನಲ್ಲಿ ದೇವೇಗೌಡರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣರಾದ ನಮ್ಮ ಪಕ್ಷದವರಿಗೇಕೆ ನೋಟಿಸ್ ಕೊಟ್ಟಿಲ್ಲ. ಇದೆಲ್ಲ ಗೊತ್ತಿದ್ದೂ ಸತ್ಯಶೋಧನ ಸಮಿತಿ ರಚಿಸಿದ್ದನ್ನು ನೋಡಿದರೆ ನಗು ಬರುತ್ತದೆ. ದಿನೇಶ್ ಗುಂಡೂರಾವ್ರಂಥ ಅಪ್ರಬುದ್ಧರು ರಾಹುಲ್ರಿಗೇ ಮಿಸ್ಗೈಡ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಹಿಂಪಡೆದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಮತ್ತು ಸಿಎಲ್ಪಿ ನಾಯಕ ಸಿದ್ದು ಅವರಿಂದ ರಾಜೀನಾಮೆ ತೆಗೆದುಕೊಳ್ಳಲಿ,'' ಎನ್ನುವುದು ಬೇಗ್ ಹೇಳಿಕೆ ಸಾರಾಂಶ.
-
ಹಿರಿಯರಿಗೆ ಸಚಿವ ಸ್ಥಾನ ನೀಡಿ
ದೂರದೃಷ್ಟಿಯ ಕೊರತೆ, ಹಿರಿಯರ ಕಡೆಗಣನೆ, ಸಚಿವರ ವೈಫಲ್ಯದಿಂದ ಪಕ್ಷಕ್ಕೆ ಸೋಲಾಗಿದೆ. ವಲಸಿಗರು ಮತ್ತು ಹೊಸಬರಿಗೆ ಮಣೆ ಹಾಕಲಾಗಿದ್ದು, ರಾಜ್ಯದ ಉಸ್ತುವಾರಿಗಳು, ಮುಂಚೂಣಿ ನಾಯಕರು ಆಂತರಿಕ ಸಮಸ್ಯೆ ನಿವಾರಿಸುವಲ್ಲಿ ಎಡವಿದ್ದಾರೆ. ನಮ್ಮದೇ ಸರಕಾರವಿದ್ದರೂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ವಿಶ್ವಾಸವಿರಲಿಲ್ಲ. ಈ ಸಮಸ್ಯೆ ನಿವಾರಣೆಗೆ ಹಿರಿಯರೆಲ್ಲ ಸೇರಿ ಚರ್ಚಿಸಬೇಕಿದೆ. ಹಿರಿಯ ಮುಖಂಡರು ಪಕ್ಷ ಬಿಡುವುದನ್ನೂ ತಡೆಯುವುದಕ್ಕೂ ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಹಿರಿಯರು ಪಕ್ಷದಲ್ಲಿ ಮುಂದುವರಿಯುವುದು ಕಷ್ಟವಾದೀತು. ಸಂಘಟನಾ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹಿರಿಯರ ಅನುಭವವನ್ನು ಸರಕಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು,'' ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಶ್ವನಾಥ್ ಗರಂ
ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎಚ್.ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ''ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಖೆಡ್ಡಾಕ್ಕೆ ಕೆಡವಿದರು. ಸಮನ್ವಯ ಸಮಿತಿಯನ್ನು ತಮ್ಮ ಕೈಗೊಂಬೆ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಲು ಇನ್ನೂ ಸಾಧ್ಯವಾಗಿಲ್ಲ. ಚುನಾವಣೆ ವೇಳೆ ಕಾಂಗ್ರೆಸ್-ಜೆಡಿಎಸ್ ನೀಡಿದ್ದ ಭರವಸೆಗಳನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ,'' ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ನಾನೇ ಮುಂದಿನ ಸಿಎಂ ಎನ್ನುತ್ತಿದ್ದವರಿಗೆ ಫಲಿತಾಂಶ ಬಂದ ಮೇಲೆ ವಾಸ್ತವದ ಅರಿವಾಯಿತಾ? ನಂದೇ ನಡೆಯಬೇಕು, ನಾನು ಹೇಳಿದ್ದೇ ಆಗಬೇಕು ಎಂಬ ಅಹಂ ಈಗ ಇಳಿಯಿತಾ?- ರೋಷನ್ ಬೇಗ್, ಕಾಂಗ್ರೆಸ್ ಶಾಸಕ
ದೂರದೃಷ್ಟಿಯ ಕೊರತೆ, ಹಿರಿಯರ ಕಡೆಗಣನೆ, ಸಚಿವರ ವೈಫಲ್ಯದಿಂದ ಪಕ್ಷಕ್ಕೆ ಸೋಲಾಗಿದೆ. ರಾಜ್ಯದ ಉಸ್ತುವಾರಿಗಳು, ಮುಂಚೂಣಿ ನಾಯಕರು ಆಂತರಿಕ ಸಮಸ್ಯೆ ನಿವಾರಿಸುವಲ್ಲಿ ಎಡವಿದ್ದಾರೆ- ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಶಾಸಕ
ರಾಮಲಿಂಗಾರೆಡ್ಡಿ ಜಂಟಲ್ಮ್ಯಾನ್ ರಾಜಕಾರಣಿ. ಇಂಥವರು ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್ನಲ್ಲಿ ಪರಿಸ್ಥಿತಿ ಹೇಗಿರಬೇಡ?! -ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ರಾಮಲಿಂಗಾರೆಡ್ಡಿ ಹಿರಿಯ ನಾಯಕರು. ಅವರು ಏನೇ ಹೇಳಿದ್ದರೂ ಜವಾಬ್ದಾರಿಯುತವಾಗಿಯೇ ಮಾತನಾಡಿರುತ್ತಾರೆ. ಅವರ ಭಾವನೆಗಳನ್ನು ಗೌರವಿಸಬೇಕು. ಅವರ ಸಲಹೆ ಸೂಚನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಮೈತ್ರಿಯಿಂದಾಗಿ ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತನಿಗೂ ನೋವಾಗಬಾರದು. ಮೈತ್ರಿ ಸರಕಾರ ಇನ್ನೂ ಚುರುಕಾಗಿ ಕೆಲಸ ಮಾಡಬೇಕಿದೆ- -ಎಂ.ಬಿ.ಪಾಟೀಲ್, ಗೃಹ ಸಚಿವ
ರಾಮಲಿಂಗಾರೆಡ್ಡಿ ಹಿರಿಯರು. ಅವರ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ. ರೆಡ್ಡಿ ಮತ್ತು ಬೇಗ್ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗೆಲ್ಲ ಸಚಿವರಾಗಿದ್ದಾರೆ. ಈ ಬಾರಿ ಮೈತ್ರಿ ಸರಕಾರವಾದ ಕಾರಣ ಅವಕಾಶ ಸಿಕ್ಕಿಲ್ಲ- -ಡಾ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ
ದಿಲ್ಲಿಗೆ ಹೋಗಿ ಲಾಬಿ ಮಾಡುವವರು, ಬ್ಲ್ಯಾಕ್ಮೇಲ್ ಮಾಡುವವರಿಗೆಲ್ಲ ಅವಕಾಶ ನೀಡಲಾಗುತ್ತದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಕಡೆಗಣಿಸುವುದು ಸರಿಯಲ್ಲ-
-ಮುನಿರತ್ನ, ರಾಜರಾಜೇಶ್ವರಿನಗರ ಶಾಸಕ
ಇಬ್ಬರು ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಲು ಸೀಮಿತವಾಗಿ ಸಂಪುಟ ವಿಸ್ತರಿಸಲು ಕಾಂಗ್ರೆಸ್ ಮುಂದಾಗಿದೆ. ಈ ನಿರ್ಧಾರದ ಹಿಂದೆ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಂಶವೇ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ. ಅತೃಪ್ತ ಶಾಸಕರ ಬಾಯಿ ಮುಚ್ಚಿಸಿದ್ದ ಕೈನಾಯಕರು ಸದ್ಯಕ್ಕೇನೂ ಸಮಸ್ಯೆಯಾಗದು ಎಂಬ ನಿರಾಳ ಭಾವದಲ್ಲಿದ್ದರು. ಆದರೆ, ರಾಮಲಿಂಗಾರೆಡ್ಡಿ ಅವರಂಥ ಹಿರಿಯರು ಮೌನ ಮುರಿಯುವುದರೊಂದಿಗೆ ಪ್ರದೇಶ ಕಾಂಗ್ರೆಸ್ನ ನೇತೃತ್ವ ವಹಿಸಿಕೊಂಡವರನ್ನು ಪ್ರಶ್ನೆ ಮಾಡಲು ಪಕ್ಷದಲ್ಲಿ ಮತ್ತೊಂದು ಗುಂಪು ಸೃಷ್ಟಿಯಾದಂತಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಸಿದ್ದು, ಗುಂಡೂರಾವ್ ವಿರುದ್ಧ ಬೇಗ್ ಹರಿಹಾಯ್ದಿದ್ದರು. ಇದೀಗ ರಾಮಲಿಂಗಾರೆಡ್ಡಿ 'ಪಕ್ಷದಲ್ಲಿ ಹಿರಿಯರ ಕಡೆಗಣನೆ ಆಗುತ್ತಿದೆ. ವಲಸಿಗರಿಗೆ ಮಣೆ ಹಾಕಲಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ. ರೆಡ್ಡಿ ನೋವಿನ ಜತೆಗೆ ತಾವಿರುವುದಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹೇಳಿದರೆ, ಮಾಜಿ ಸಚಿವ ವಿ.ಮುನಿಯಪ್ಪ, ಶಾಸಕ ಮುನಿರತ್ನ ಕೂಡ ದನಿಗೂಡಿಸಿದ್ದಾರೆ. ಇದರ ಬೆನ್ನಿಗೇ ಸಿದ್ದು ವಿರುದ್ಧ ರೋಷನ್ ಬೇಗ್ ಇನ್ನೊಂದು ಸುತ್ತಿನ ಕೋಪತಾಪ ಪ್ರದರ್ಶಿಸಿದ್ದಾರೆ.
ಇದೇ ಗುರುವಾರ ಸಂಪುಟ ವಿಸ್ತರಿಸಿ ಪಕ್ಷೇತರರಾದ ಶಂಕರ್ ಮತ್ತು ನಾಗೇಶ್ಗೆ ಅವಕಾಶ ನೀಡಲು ಕೈನಾಯಕರು ತೀರ್ಮಾನಿಸಿದ್ದಾರೆ. ಕೆಲ ತಿಂಗಳ ಬಳಿಕ ಸಂಪುಟ ಪುನಾರಚಿಸಿ 10ರಿಂದ 15 ಮಂದಿಗೆ ಮಂತ್ರಿ ಸ್ಥಾನ ನೀಡುವುದಾಗಿ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಬಹುತೇಕ ತಿಳಿಯಾಗಿದೆಯೆಂದು ಭಾವಿಸಲಾಗಿತ್ತು. ಈಗ ಹಿರಿಯರು ದನಿಯೆತ್ತುವುದರೊಂದಿಗೆ ಕಾಂಗ್ರೆಸ್ನ ಜಗಳ ಮತ್ತೆ ಬೀದಿಗೆ ಬಂದಂತಾಗಿದೆ. ಸಚಿವ ಸ್ಥಾನ ಕೈತಪ್ಪುವುದು ಖಾತರಿಯಾದ್ದರಿಂದ ಒಳಗೊಳಗೇ ಕುದಿಯುತ್ತಿದ್ದ ಅತೃಪ್ತರಿಗೂ ಈ ಚಟುವಟಿಕೆ ಮುಂದುವರಿಸಲು ಪುನಃ ಧೈರ್ಯ ಬಂದಂತಾಗಿದೆ. ಇದು ಯಾವ ಮಟ್ಟಕ್ಕೂ ಹೋಗುವ ಸಾಧ್ಯತೆಯಿದೆ. ಹಾಗಾಗಿ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರವೂ ತಲೆಕೆಳಗಾಗಬಹುದು.
ಅತೃಪ್ತಿಯೇನು?
ದೋಸ್ತಿ ಸರಕಾರ ರಚಿಸುವಾಗಲೂ ತಮ್ಮ ಸಲಹೆ ಪಡೆದಿಲ್ಲ. ಪಕ್ಷ ಮತ್ತು ಸರಕಾರದಲ್ಲೂ ತಮ್ಮ ಅನುಭವವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಸಿದ್ದರಾಮಯ್ಯ ತಮ್ಮ ಸುತ್ತ ಗುಂಪು ಕಟ್ಟಿಕೊಂಡು ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಧೋರಣೆಯಿಂದಲೇ ಲೋಕಸಭೆ ಚುನಾವಣೆಯಲ್ಲೂ ಪಕ್ಷ ನೆಲಕಚ್ಚಿದೆ. ಇಷ್ಟರ ಬಳಿಕವೂ ಆತ್ಮಾವಲೋಕನಕ್ಕೆ ಅವರು ಸಿದ್ಧರಿಲ್ಲ. ಉಸ್ತುವಾರಿ ವೇಣುಗೋಪಾಲ್ ಅವರನ್ನು ಜತೆಗಿಟ್ಟುಕೊಂಡು ಹೈಕಮಾಂಡ್ಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗುಂಡೂರಾವ್ ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಸಿದ್ದು ನಿರ್ದೇಶನ ಪಾಲಿಸುವುದಷ್ಟೇ ತಮ್ಮ ಕರ್ತವ್ಯವೆಂಬಂತೆ ವರ್ತಿಸುತ್ತಿದ್ದಾರೆ ಎಂಬ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿದೆ. ರೋಷನ್ ಬೇಗ್ ಬಹಿರಂಗವಾಗಿಯೇ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವು ಹಿರಿಯರು ಇದೇ ದಾರಿ ತುಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ದಿನೇಶ್ ಗುಂಡೂರಾವ್ ಡ್ಯಾಮೇಜ್ ಕಂಟ್ರೋಲ್ ಮಾಡುವ ಬಗ್ಗೆ ಚರ್ಚಿಸಿದರು.
ಬೇಗ್ ಕೆಂಡಾಮಂಡಲ
''ಲೋಕಸಭೆ ಚುನಾವಣೆಗೂ ಮುನ್ನ ನಾನೇ ಮುಂದಿನ ಸಿಎಂ ಎನ್ನುತ್ತಿದ್ದವರಿಗೆ ಫಲಿತಾಂಶ ಬಂದ ಮೇಲೆ ವಾಸ್ತವದ ಅರಿವಾಯಿತಾ? ನಂದೇ ನಡೆಯಬೇಕು, ನಾನು ಹೇಳಿದ್ದೇ ಆಗಬೇಕು ಎಂಬ ಇಗೊ ಇದ್ದವರಿಗದು ಈಗ ಇಳಿಯಿತಾ? ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲವೆಂದು ಹೇಳಿ ನಂತರ ನೀವೇ ಅವರನ್ನು ಸಿಎಂ ಮಾಡಿದ್ದನ್ನೂ ನೆನಪಿಸಿಕೊಳ್ಳಿ. ರಾಮಲಿಂಗಾರೆಡ್ಡಿ ಹೇಳಿದ್ದೆಲ್ಲವೂ ಸರಿ. ನಾನೂ ಅವರೊಂದಿಗೆ ಇರುತ್ತೇನೆ. ರೆಡ್ಡಿ, ಎಚ್.ಕೆ.ಪಾಟೀಲ್ ಅಂಥವರಿಗೆ ಸಚಿವ ಸ್ಥಾನ ನೀಡಬೇಕು. ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿಯಾಗಿದ್ದು ಪಕ್ಷ ಬಿಡುವುದಿಲ್ಲ. ಆದರೆ, ಈ ಸರಕಾರದಲ್ಲಿ ಥೂ...ಥೂ...ಥೂ... ನಾನಂತೂ ಮಂತ್ರಿಯಾಗಲ್ಲ. ಪಕ್ಷದಿಂದ ನನಗೆ ಕೊಟ್ಟ ನೋಟಿಸ್ಗೆ ಉತ್ತರಿಸುವುದಿಲ್ಲ,'' ಎಂದು ರೋಷನ್ ಬೇಗ್ ಹೇಳಿದ್ದಾರೆ.
''ಕೋಲಾರದಲ್ಲಿ ಮುನಿಯಪ್ಪ, ತುಮಕೂರಿನಲ್ಲಿ ದೇವೇಗೌಡರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣರಾದ ನಮ್ಮ ಪಕ್ಷದವರಿಗೇಕೆ ನೋಟಿಸ್ ಕೊಟ್ಟಿಲ್ಲ. ಇದೆಲ್ಲ ಗೊತ್ತಿದ್ದೂ ಸತ್ಯಶೋಧನ ಸಮಿತಿ ರಚಿಸಿದ್ದನ್ನು ನೋಡಿದರೆ ನಗು ಬರುತ್ತದೆ. ದಿನೇಶ್ ಗುಂಡೂರಾವ್ರಂಥ ಅಪ್ರಬುದ್ಧರು ರಾಹುಲ್ರಿಗೇ ಮಿಸ್ಗೈಡ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಹಿಂಪಡೆದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಮತ್ತು ಸಿಎಲ್ಪಿ ನಾಯಕ ಸಿದ್ದು ಅವರಿಂದ ರಾಜೀನಾಮೆ ತೆಗೆದುಕೊಳ್ಳಲಿ,'' ಎನ್ನುವುದು ಬೇಗ್ ಹೇಳಿಕೆ ಸಾರಾಂಶ.
-
ಹಿರಿಯರಿಗೆ ಸಚಿವ ಸ್ಥಾನ ನೀಡಿ
ದೂರದೃಷ್ಟಿಯ ಕೊರತೆ, ಹಿರಿಯರ ಕಡೆಗಣನೆ, ಸಚಿವರ ವೈಫಲ್ಯದಿಂದ ಪಕ್ಷಕ್ಕೆ ಸೋಲಾಗಿದೆ. ವಲಸಿಗರು ಮತ್ತು ಹೊಸಬರಿಗೆ ಮಣೆ ಹಾಕಲಾಗಿದ್ದು, ರಾಜ್ಯದ ಉಸ್ತುವಾರಿಗಳು, ಮುಂಚೂಣಿ ನಾಯಕರು ಆಂತರಿಕ ಸಮಸ್ಯೆ ನಿವಾರಿಸುವಲ್ಲಿ ಎಡವಿದ್ದಾರೆ. ನಮ್ಮದೇ ಸರಕಾರವಿದ್ದರೂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ವಿಶ್ವಾಸವಿರಲಿಲ್ಲ. ಈ ಸಮಸ್ಯೆ ನಿವಾರಣೆಗೆ ಹಿರಿಯರೆಲ್ಲ ಸೇರಿ ಚರ್ಚಿಸಬೇಕಿದೆ. ಹಿರಿಯ ಮುಖಂಡರು ಪಕ್ಷ ಬಿಡುವುದನ್ನೂ ತಡೆಯುವುದಕ್ಕೂ ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಹಿರಿಯರು ಪಕ್ಷದಲ್ಲಿ ಮುಂದುವರಿಯುವುದು ಕಷ್ಟವಾದೀತು. ಸಂಘಟನಾ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹಿರಿಯರ ಅನುಭವವನ್ನು ಸರಕಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು,'' ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಶ್ವನಾಥ್ ಗರಂ
ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎಚ್.ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ''ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಖೆಡ್ಡಾಕ್ಕೆ ಕೆಡವಿದರು. ಸಮನ್ವಯ ಸಮಿತಿಯನ್ನು ತಮ್ಮ ಕೈಗೊಂಬೆ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಲು ಇನ್ನೂ ಸಾಧ್ಯವಾಗಿಲ್ಲ. ಚುನಾವಣೆ ವೇಳೆ ಕಾಂಗ್ರೆಸ್-ಜೆಡಿಎಸ್ ನೀಡಿದ್ದ ಭರವಸೆಗಳನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ,'' ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ನಾನೇ ಮುಂದಿನ ಸಿಎಂ ಎನ್ನುತ್ತಿದ್ದವರಿಗೆ ಫಲಿತಾಂಶ ಬಂದ ಮೇಲೆ ವಾಸ್ತವದ ಅರಿವಾಯಿತಾ? ನಂದೇ ನಡೆಯಬೇಕು, ನಾನು ಹೇಳಿದ್ದೇ ಆಗಬೇಕು ಎಂಬ ಅಹಂ ಈಗ ಇಳಿಯಿತಾ?- ರೋಷನ್ ಬೇಗ್, ಕಾಂಗ್ರೆಸ್ ಶಾಸಕ
ದೂರದೃಷ್ಟಿಯ ಕೊರತೆ, ಹಿರಿಯರ ಕಡೆಗಣನೆ, ಸಚಿವರ ವೈಫಲ್ಯದಿಂದ ಪಕ್ಷಕ್ಕೆ ಸೋಲಾಗಿದೆ. ರಾಜ್ಯದ ಉಸ್ತುವಾರಿಗಳು, ಮುಂಚೂಣಿ ನಾಯಕರು ಆಂತರಿಕ ಸಮಸ್ಯೆ ನಿವಾರಿಸುವಲ್ಲಿ ಎಡವಿದ್ದಾರೆ- ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಶಾಸಕ
ರಾಮಲಿಂಗಾರೆಡ್ಡಿ ಜಂಟಲ್ಮ್ಯಾನ್ ರಾಜಕಾರಣಿ. ಇಂಥವರು ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್ನಲ್ಲಿ ಪರಿಸ್ಥಿತಿ ಹೇಗಿರಬೇಡ?! -ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ರಾಮಲಿಂಗಾರೆಡ್ಡಿ ಹಿರಿಯ ನಾಯಕರು. ಅವರು ಏನೇ ಹೇಳಿದ್ದರೂ ಜವಾಬ್ದಾರಿಯುತವಾಗಿಯೇ ಮಾತನಾಡಿರುತ್ತಾರೆ. ಅವರ ಭಾವನೆಗಳನ್ನು ಗೌರವಿಸಬೇಕು. ಅವರ ಸಲಹೆ ಸೂಚನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಮೈತ್ರಿಯಿಂದಾಗಿ ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತನಿಗೂ ನೋವಾಗಬಾರದು. ಮೈತ್ರಿ ಸರಕಾರ ಇನ್ನೂ ಚುರುಕಾಗಿ ಕೆಲಸ ಮಾಡಬೇಕಿದೆ- -ಎಂ.ಬಿ.ಪಾಟೀಲ್, ಗೃಹ ಸಚಿವ
ರಾಮಲಿಂಗಾರೆಡ್ಡಿ ಹಿರಿಯರು. ಅವರ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ. ರೆಡ್ಡಿ ಮತ್ತು ಬೇಗ್ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗೆಲ್ಲ ಸಚಿವರಾಗಿದ್ದಾರೆ. ಈ ಬಾರಿ ಮೈತ್ರಿ ಸರಕಾರವಾದ ಕಾರಣ ಅವಕಾಶ ಸಿಕ್ಕಿಲ್ಲ- -ಡಾ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ
ದಿಲ್ಲಿಗೆ ಹೋಗಿ ಲಾಬಿ ಮಾಡುವವರು, ಬ್ಲ್ಯಾಕ್ಮೇಲ್ ಮಾಡುವವರಿಗೆಲ್ಲ ಅವಕಾಶ ನೀಡಲಾಗುತ್ತದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಕಡೆಗಣಿಸುವುದು ಸರಿಯಲ್ಲ-
-ಮುನಿರತ್ನ, ರಾಜರಾಜೇಶ್ವರಿನಗರ ಶಾಸಕ