ಬೆಂಗಳೂರು: ರಾಜ್ಯ ಕಾಂಗ್ರೆಸ್ ಸಾರಥಿಗಳಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರತ್ಯೇಕ ಯಾತ್ರೆ ಪ್ರಸ್ತಾಪಕ್ಕೆ ಕಡಿವಾಣ ಹಾಕಿರುವ ಹೈಕಮಾಂಡ್ ಜಂಟಿ ಯಾತ್ರೆ ಕೈಗೊಳ್ಳಲು ತಾಕೀತು ಮಾಡಿದೆ. ಅದರಂತೆ ಜನವರಿ ಮೊದಲ ವಾರದಿಂದ ಕಾಂಗ್ರೆಸ್ ನಾಯಕರ ಸಾಮೂಹಿಕ ಯಾತ್ರೆ ಪ್ರಾರಂಭವಾಗಲಿದೆ. ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲನಾಯಕರು ಒಟ್ಟಿಗೆ ಪ್ರವಾಸ ಕೈಗೊಳ್ಳಲಿದ್ದು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. 45 ರಿಂದ 50 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಈ ಮೂಲಕ ಯಾವುದೇ ಗೊಂದಲವಿಲ್ಲದೆ ಒಗ್ಗಟ್ಟಿನ ಸಂದೇಶದೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದು ಕಾಂಗ್ರೆಸ್ ಕಾರ್ಯಸೂಚಿ. ದಿಲ್ಲಿಅಂಗಳದಲ್ಲಿ ಸೋಮವಾರ ನಡೆದ ಮಹತ್ವದ ಸಭೆಯಲ್ಲಿಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ನ ಪ್ರಮುಖರು ಭಾಗಿಯಾಗಿದ್ದರು. ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದಿಡುವ ಉದ್ದೇಶದಿಂದ ಕಾಂಗ್ರೆಸ್ ಈ ಸಭೆ ನಡೆಸಿದ್ದು ಗಮನಾರ್ಹ.
ಈ ಬಗ್ಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಲೆಕ್ಷನ್ ರೋಡ್ಮ್ಯಾಪ್ಗಾಗಿ ಸಭೆ ನಡೆಸಲಾಯಿತು. ಮುಂದಿನ 75 ದಿನಗಳ ಕಾಲ ಚುನಾವಣೆ ಕುರಿತ ಸಂಘಟನಾ ಸಭೆ, ಸಮಾವೇಶಗಳು ನಡೆಯಲಿವೆ. ಇದರ ಭಾಗವಾಗಿ ಜನವರಿ ಮೊದಲ ವಾರದಿಂದ ಪಕ್ಷದ ನಾಯಕರ ಜಂಟಿ ಯಾತ್ರೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಪ್ರವಾಸಕ್ಕೆ ತಯಾರಾಗಿದ್ದರು
ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಹೊರಡಲು ತಯಾರಾಗಿದ್ದರು. ಒಟ್ಟಿಗೇ ಪ್ರವಾಸ ಮಾಡುವಂತೆ ಈ ಮೊದಲೇ ಹೈಕಮಾಂಡ್ ಸೂಚಿಸಿದ್ದರೂ ಗೊಂದಲ ಬಗೆಹರಿದಿರಲಿಲ್ಲ. ಜನವರಿ ಮೊದಲ ವಾರದಿಂದ ಉತ್ತರ ಕರ್ನಾಟಕದಿಂದ ಪ್ರವಾಸ ಹೊರಡಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ಸುಸಜ್ಜಿತ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಶಿವಕುಮಾರ್ ಕೂಡ ಯಾತ್ರೆಗಾಗಿ ಸಿದ್ಧತೆಯಲ್ಲಿದ್ದರು. ಈ ರೀತಿ ಪ್ರತ್ಯೇಕ ಯಾತ್ರೆಯಿಂದ ಒಡಕಿನ ಸಂದೇಶ ಹೋಗಲಿದೆ ಎಂಬ ಅಂಶವನ್ನು ಪಕ್ಷದ ಇತರ ಮುಖಂಡರೇ ಹೈಕಮಾಂಡ್ ಗಮನಕ್ಕೆ ತಂದಿದ್ದರು. ದಿಲ್ಲಿ ಸಭೆಯಲ್ಲಿಈ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ''ಒಗ್ಗಟ್ಟು ಪ್ರದರ್ಶಿಸಿ. ಒಟ್ಟಿಗೇ ಯಾತ್ರೆ ಮಾಡಿ,'' ಎಂಬ ಸ್ಪಷ್ಟ ನಿರ್ದೇಶನವನ್ನು ಈ ಸಭೆಯಲ್ಲಿ ನೀಡಲಾಗಿದೆ.
ಅಧಿವೇಶನ ಮುಗಿದೊಡನೆ ಚುನಾವಣೆ ಸಿದ್ಧತೆಬೆಳಗಾವಿ ಅಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಚುನಾವಣೆ ಸಿದ್ಧತೆ ಸಂಬಂಧಿತವಾದ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಳ್ಳಲಿದೆ. ಈ ನಿಟ್ಟಿನಲ್ಲಿಸಾಲು ಸಾಲು ಸಮಾವೇಶ ನಡೆಸುವಂತೆ ಪ್ರದೇಶ ಕಾಂಗ್ರೆಸ್ಗೆ ಹೈಕಮಾಂಡ್ ಸೂಚಿಸಿದೆ. ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಡಿ.30ರಂದು ವಿಜಯಪುರದಲ್ಲಿ ಬೃಹತ್ ಸಮಾವೇಶ, ಮಹದಾಯಿ ಯೋಜನೆಗಾಗಿ ಜ.2ರಂದು ಹುಬ್ಬಳ್ಳಿಯಲ್ಲಿಸಭೆ, ಜ.8ರಂದು ದಲಿತ ಸಮಾವೇಶ, ನಂತರ ಒಬಿಸಿ ಸಮಾವೇಶ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ನ ಪ್ರಮುಖರು ಭಾಗಿಯಾಗಿದ್ದರು. ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದಿಡುವ ಉದ್ದೇಶದಿಂದ ಕಾಂಗ್ರೆಸ್ ಈ ಸಭೆ ನಡೆಸಿದ್ದು ಗಮನಾರ್ಹ.
ಈ ಬಗ್ಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಲೆಕ್ಷನ್ ರೋಡ್ಮ್ಯಾಪ್ಗಾಗಿ ಸಭೆ ನಡೆಸಲಾಯಿತು. ಮುಂದಿನ 75 ದಿನಗಳ ಕಾಲ ಚುನಾವಣೆ ಕುರಿತ ಸಂಘಟನಾ ಸಭೆ, ಸಮಾವೇಶಗಳು ನಡೆಯಲಿವೆ. ಇದರ ಭಾಗವಾಗಿ ಜನವರಿ ಮೊದಲ ವಾರದಿಂದ ಪಕ್ಷದ ನಾಯಕರ ಜಂಟಿ ಯಾತ್ರೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಪ್ರವಾಸಕ್ಕೆ ತಯಾರಾಗಿದ್ದರು
ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಹೊರಡಲು ತಯಾರಾಗಿದ್ದರು. ಒಟ್ಟಿಗೇ ಪ್ರವಾಸ ಮಾಡುವಂತೆ ಈ ಮೊದಲೇ ಹೈಕಮಾಂಡ್ ಸೂಚಿಸಿದ್ದರೂ ಗೊಂದಲ ಬಗೆಹರಿದಿರಲಿಲ್ಲ. ಜನವರಿ ಮೊದಲ ವಾರದಿಂದ ಉತ್ತರ ಕರ್ನಾಟಕದಿಂದ ಪ್ರವಾಸ ಹೊರಡಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ಸುಸಜ್ಜಿತ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಶಿವಕುಮಾರ್ ಕೂಡ ಯಾತ್ರೆಗಾಗಿ ಸಿದ್ಧತೆಯಲ್ಲಿದ್ದರು. ಈ ರೀತಿ ಪ್ರತ್ಯೇಕ ಯಾತ್ರೆಯಿಂದ ಒಡಕಿನ ಸಂದೇಶ ಹೋಗಲಿದೆ ಎಂಬ ಅಂಶವನ್ನು ಪಕ್ಷದ ಇತರ ಮುಖಂಡರೇ ಹೈಕಮಾಂಡ್ ಗಮನಕ್ಕೆ ತಂದಿದ್ದರು. ದಿಲ್ಲಿ ಸಭೆಯಲ್ಲಿಈ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ''ಒಗ್ಗಟ್ಟು ಪ್ರದರ್ಶಿಸಿ. ಒಟ್ಟಿಗೇ ಯಾತ್ರೆ ಮಾಡಿ,'' ಎಂಬ ಸ್ಪಷ್ಟ ನಿರ್ದೇಶನವನ್ನು ಈ ಸಭೆಯಲ್ಲಿ ನೀಡಲಾಗಿದೆ.
ಅಧಿವೇಶನ ಮುಗಿದೊಡನೆ ಚುನಾವಣೆ ಸಿದ್ಧತೆಬೆಳಗಾವಿ ಅಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಚುನಾವಣೆ ಸಿದ್ಧತೆ ಸಂಬಂಧಿತವಾದ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಳ್ಳಲಿದೆ. ಈ ನಿಟ್ಟಿನಲ್ಲಿಸಾಲು ಸಾಲು ಸಮಾವೇಶ ನಡೆಸುವಂತೆ ಪ್ರದೇಶ ಕಾಂಗ್ರೆಸ್ಗೆ ಹೈಕಮಾಂಡ್ ಸೂಚಿಸಿದೆ. ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಡಿ.30ರಂದು ವಿಜಯಪುರದಲ್ಲಿ ಬೃಹತ್ ಸಮಾವೇಶ, ಮಹದಾಯಿ ಯೋಜನೆಗಾಗಿ ಜ.2ರಂದು ಹುಬ್ಬಳ್ಳಿಯಲ್ಲಿಸಭೆ, ಜ.8ರಂದು ದಲಿತ ಸಮಾವೇಶ, ನಂತರ ಒಬಿಸಿ ಸಮಾವೇಶ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಲೆಕ್ಷನ್ ರೋಡ್ಮ್ಯಾಪ್ಗಾಗಿ ಸಭೆ ನಡೆಸಲಾಯಿತು. ಮುಂದಿನ 75 ದಿನಗಳ ಕಾಲ ಚುನಾವಣೆ ಕುರಿತ ಸಂಘಟನಾ ಸಭೆ, ಸಮಾವೇಶಗಳು ನಡೆಯಲಿವೆ. ಇದರ ಭಾಗವಾಗಿ ಜನವರಿ ಮೊದಲ ವಾರದಿಂದ ಪಕ್ಷದ ನಾಯಕರ ಜಂಟಿ ಯಾತ್ರೆ ಪ್ರಾರಂಭವಾಗಲಿದೆ