ಆ್ಯಪ್ನಗರ

ಕಾನೂನು ಹೋರಾಟ ಅಸ್ತ್ರದ ಮೇಲೆ ‘ಕೈ’ ವಿಶ್ವಾಸ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯ ಸಾರಿರುವ ಶಾಸಕರ ವಿರುದ್ಧದ ಕಾನೂನು ಹೋರಾಟದ ಅಸ್ತ್ರ ಮೈತ್ರಿ ಸರಕಾರಕ್ಕೆ ಜೀವದಾನ ನೀಡಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ ಪಾಳಯದಲ್ಲಿ ಮೂಡಿದೆ.

Vijaya Karnataka 14 Jul 2019, 5:00 am
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯ ಸಾರಿರುವ ಶಾಸಕರ ವಿರುದ್ಧದ ಕಾನೂನು ಹೋರಾಟದ ಅಸ್ತ್ರ ಮೈತ್ರಿ ಸರಕಾರಕ್ಕೆ ಜೀವದಾನ ನೀಡಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ ಪಾಳಯದಲ್ಲಿ ಮೂಡಿದೆ.
Vijaya Karnataka Web congress hopes on legal process
ಕಾನೂನು ಹೋರಾಟ ಅಸ್ತ್ರದ ಮೇಲೆ ‘ಕೈ’ ವಿಶ್ವಾಸ


ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಉಪಸ್ಥಿತಿಯಲ್ಲಿ ಶನಿವಾರ ರಾತ್ರಿ ಕಾಂಗ್ರೆಸ್‌ ಶಾಸಕರ ಸಭೆ ನಡೆಯಿತು. ಬಂಡಾಯ ಶಾಸಕರ ಅನರ್ಹತೆ ದೂರನ್ನು ಸ್ಪೀಕರ್‌ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದು, ಸಭಾಧ್ಯಕ್ಷರು ಮುಂದಿಡಲಿರುವ ಹೆಜ್ಜೆ ರಾಜ್ಯ ರಾಜಕಾರಣದಲ್ಲಿ ಮೈಲಿಗಲ್ಲು ಸೃಷ್ಟಿಸುವುದಂತೂ ಖಚಿತ. ಮುಖ್ಯವಾಗಿ, ಸುಪ್ರೀಂ ಕೋರ್ಟ್‌ ಮುಂದಿರುವ ಬಂಡಾಯ ಶಾಸಕರ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದ್ದು ಇತ್ಯರ್ಥವಾಗಲು ಕೆಲವು ತಿಂಗಳುಗಳೇ ಹಿಡಿಯಲಿವೆ. ಹೀಗಾಗಿ ಮೈತ್ರಿ ಸರಕಾರಕ್ಕೆ ಸದ್ಯಕ್ಕೆ ಯಾವ ಆತಂಕವೂ ಇಲ್ಲ ಎಂಬ ಖಚಿತ ವಿಶ್ವಾಸವನ್ನು ನಾಯಕರು ಪಕ್ಷದ ಶಾಸಕರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಮುಖ್ಯವಾಗಿ, ಸುಲಭವಾಗಿ ಸೋಲೊಪ್ಪಿಕೊಂಡು ಅಧಿಕಾರ ಬಿಟ್ಟುಕೊಟ್ಟರೆ ದೇಶದಲ್ಲಿ ಬಿಜೆಪಿ ಅಟ್ಟಹಾಸ ಬಿರುಸುಗೊಂಡು ದೇಶದ ಬೇರೆ ರಾಜ್ಯಗಳಲ್ಲೂ ಇದೇ ಮಾದರಿ ಚಟುವಟಿಕೆ ಆರಂಭವಾಗುತ್ತದೆ. ಹಾಗಾಗಿ ವೈಯಕ್ತಿಕ ಇಷ್ಟ -ಕಷ್ಟಗಳನ್ನು ಬದಿಗಿರಿಸಿ ಪಕ್ಷದ ಹಿತಾಸಕ್ತಿಗಾಗಿ ವರಿಷ್ಠರ ಸೂಚನೆಯಂತೆ ನಾವು ಹೋರಾಟ ಮುಂದುವರಿಸುವುದು ಅನಿವಾರ್ಯ ಎಂಬುದನ್ನು ವೇಣುಗೋಪಾಲ್‌ ಪಕ್ಷದ ಶಾಸಕರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ