ಆ್ಯಪ್ನಗರ

ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅನಿವಾರ್ಯ, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ: ಅಂಬರೀಶ್‌

ಕುಮಾರಸ್ವಾಮಿ ಅವರನ್ನು ಬಿಟ್ಟರೆ ಸರಕಾರ ಉಳಿಯುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆ

Vijaya Karnataka Web 5 Oct 2018, 4:07 pm
ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆಯೇ ಹೊರತು, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ ಎಂದು ಮಾಜಿ ಸಚಿವ ಅಂಬರೀಶ್‌ ಹೇಳಿದ್ದಾರೆ.
Vijaya Karnataka Web ambi


ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಬೀಳಿಸಿದರೆ, ಮುಂದೇನಾಗುತ್ತದೆ ಎಂಬುದನ್ನು ಕಾಂಗ್ರೆಸ್‌ ಅರಿತು ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರನ್ನು ಬಿಟ್ಟರೆ ಸರಕಾರ ಉಳಿಯುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆ ನೀಡಿದರು.

ಅಂಬರೀಶ್‌ ನಿವೃತ್ತಿ ಬಳಿಕ ಮಂಡ್ಯ ಕಾಂಗ್ರೆಸ್‌ ನಾವಿಕನಿಲ್ಲದ ದೋಣಿಯಂತೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಇಲ್ಲವಾದ ಮೇಲೆ, ಯಾರೂ ನಾಯಕರು ಹುಟ್ಟಿಕೊಳ್ಳಲಿಲ್ಲವೇ? ಅಂತೆಯೇ ಮಂಡ್ಯಕ್ಕೂ ನಾಯಕರು ಬರುತ್ತಾರೆ ಎಂದು ಹೇಳಿದ್ದಾರೆ.

ನನಗೆ ಪಕ್ಷದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಪುತ್ರ ಅಭಿಷೇಕ್‌ ನಾನು ಇರುವ ವರೆಗೂ ರಾಜಕೀಯಕ್ಕೆ ಬರುವುದಿಲ್ಲ. ಮಂಡ್ಯ ಜಿಲ್ಲೆಗೆ ನನ್ನ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಮಹಿಳಾ ಯುನಿವರ್ಸಿಟಿ, ಕೆರಗೋಡು ರಸ್ತೆ, ಮಂಡ್ಯ ಅಮೃತ ಮಹೋತ್ಸವ, ರಾಜ್ ಕುಮಾರ್ ಕಾರ್ಯಕ್ರಮ, ಎಸ್.ಎಂ.ಕೃಷ್ಣ ಕಾರ್ಯಕ್ರಮ, ಮೆಡಿಕಲ್ ಕಾಲೇಜು ಆಸ್ಪತ್ರೆ, ಶಾಲಾ ಕಾಲೇಜು ಹೀಗೆ ಹಲವಾರು ಮಹತ್ವದ ಕಾರ್ಯ ಮಾಡಿದ್ದೇನೆ. ಮುಂದೆ ಬರುವ ನಾಯಕರು ಇವನ್ನೆಲ್ಲ ಮಾಡಲಿ ಎಂದು ಅವರು ಹೇಳಿದರು.

ರಮ್ಯಾ ರಾಜೀನಾಮೆ

ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಗೆ ರಮ್ಯ ರಾಜಿನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಅವ್ರು ಸೊಸಿಯಲ್ ಮಿಡಿಯಾ ದ ಮುಖ್ಯಸ್ಥೆಯಾಗಿದ್ದರು. ಅವರ ಕೆಲಸವೇ ಎದುರಾಳಿಗಳ‌‌ ಕಾಲೆಳೆದು ನಮ್ಮ ಪಕ್ಷವನ್ನ ಮೇಲೆತ್ತೆವುದು ಆಗಿತ್ತು ಎಂದಷ್ಟೇ ಹೇಳಿದರು.

ರಫೀಕ್‌ ಕುಟುಂಬಕ್ಕೆ ಸಾಂತ್ವಾನ

2 ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಆಪ್ತ ರಫೀಕ್‌ ಮನೆಗೆ ತೆರಳಿದ ಅಂಬರೀಶ್‌, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ರಫೀಕ್‌ ನೆನೆದು ಭಾವುಕರಾದ ಅಂಬರೀಶ್‌, ನನ್ನ ಮೇಲೆ ರಫೀಕ್‌ಗೆ ಅತ್ಯಂತ ಪ್ರೀತಿ. ನಾನು ಅವನಿಗೆ ಊಟ ಬಟ್ಟೆ ಕೊಟ್ಟಿಲ್ಲ. ಜನ ಸಂಪಾದಿಸೋದರಲ್ಲಿ ಅವನು ಉತ್ತಮನಾಗಿದ್ದ. ರಫೀಕ್‌ ಕುಟುಂಬಕ್ಕೆ ಸಹಾಯ ಮಾಡುವೆ. ಅಂತೆಯೇ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವೆ. ನಾನು ಚುನಾವಣೆಗೆ ಸ್ಪರ್ಧಿಸಿಲ್ಲ ಎಂದು ರಫೀಕ್‌ ತುಂಬಾ ನೊಂದಿದ್ದ ಎಂದು ಭಾವುಕರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ