ಆ್ಯಪ್ನಗರ

ಲಿಂಗಾಯತ ಶಾಸಕರ ಮೇಲೆ ಕಾಂಗ್ರೆಸ್ ನಿಗಾ

ಲಿಂಗಾಯತ ಶಾಸಕರಿಗೆ ಬಿಜೆಪಿ ಗಾಳ ಹಾಕುವ ಆತಂಕದ ಹಿನ್ನೆಲೆಯಲ್ಲಿ ಲಿಂಗಾಯತ ಶಾಸಕರ ಬಂದೋಬಸ್ತ್‌ ಹೊಣೆಯನ್ನು ಸಮುದಾಯದ ನಾಯಕರಿಗೇ ಕಾಂಗ್ರೆಸ್‌ ವಹಿಸಿದೆ.

Vijaya Karnataka 18 May 2018, 10:09 am
ಬೆಂಗಳೂರು : ಲಿಂಗಾಯತ ಶಾಸಕರಿಗೆ ಬಿಜೆಪಿ ಗಾಳ ಹಾಕುವ ಆತಂಕದ ಹಿನ್ನೆಲೆಯಲ್ಲಿ ಲಿಂಗಾಯತ ಶಾಸಕರ ಬಂದೋಬಸ್ತ್‌ ಹೊಣೆಯನ್ನು ಸಮುದಾಯದ ನಾಯಕರಿಗೇ ಕಾಂಗ್ರೆಸ್‌ ವಹಿಸಿದೆ.
Vijaya Karnataka Web shamanur shivashankarappa


ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ್‌ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಈ ಸಂಬಂಧ ಹೈಕಮಾಂಡ್‌ ಪ್ರತಿನಿಧಿಗಳಾದ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸಭೆ ನಡೆಸಿದರು.

ಶಾಮನೂರು ಸೇರಿದಂತೆ ಲಿಂಗಾಯತ ಸಮುದಾಯದ ಪ್ರಮುಖರನ್ನು ಕರೆಸಿಕೊಂಡು ಮಾತುಕತೆ ನಡೆಸಿದ ಅವರು, ಬಿಜೆಪಿಯವರು ಲಿಂಗಾಯತ ಶಾಸಕರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುಲು ಮುಂದಾಗಿದ್ದಾರೆ. ಹಾಗಾಗಿ ಸಮುದಾಯದ ಶಾಸಕರನ್ನು ಪಕ್ಷದ ಜತೆಗಿರುವಂತೆ ನೋಡಿಕೊಳ್ಳುವಂತೆ ಸೂಚಿಸಿದರು ಎನ್ನಲಾಗಿದೆ.

ಕನಕಪುರದ ಪಡೆಯ ಬಿಗಿ ಪಹರೆ

ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌ ಶಾಸಕರಿಗೆ ಕನಕಪುರದ ಪಡೆಯ ಬಿಗಿ ಕಾವಲು ಹಾಕಲಾಗಿತ್ತು.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಸ್ವಲ್ಪ ಹೊತ್ತಿನಲ್ಲೆ ರೆಸಾರ್ಟ್‌ ಸುತ್ತ ಅಳವಡಿಸಿದ್ದ ಪೊಲೀಸ್‌ ಬಂದೋಬಸ್ತನ್ನು ಹಿಂಪಡೆಯಲಾಯಿತು. ಇದರ ಬೆನ್ನಿಗೇ ಕನಕಪುರದ ಕಾಂಗ್ರೆಸ್‌ ಕಾರ್ಯಕರ್ತರು, ಪಕ್ಷದ ಶಾಸಕರ ಪಹರೆಗೆ ನಿಂತರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ''ನಮ್ಮ ಶಾಸಕರಿಗೆ ಪೊಲೀಸ್‌ ಕಾವಲಿನ ಅವಶ್ಯಕತೆಯಿಲ್ಲ. ನಮ್ಮ ಕಾರ್ಯಕರ್ತರೇ ಅವರ ಜತೆಗಿರುತ್ತಾರೆ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ