ಬೆಂಗಳೂರು: ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಪ್ರಭಾತ್ ಕಾಂಪ್ಲೆಕ್ಸ್ನ 3ನೇ ಮಹಡಿಯಲ್ಲಿ ಅಕ್ರಮವಾಗಿ ಮತದಾರರ ವಿವರದ ಚೀಟಿ (ವೋಟರ್ಸ್ ಸ್ಲಿಪ್) ಮುದ್ರಣ ಮಾಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಖಲೀಲುಲ್ಲಾ ಸೇರಿದಂತೆ 14 ಜನರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 270 ಸಣ್ಣ ಗಾತ್ರದ ಪ್ರಿಂಟರ್ಗಳು, 3 ಲ್ಯಾಪ್ಟಾಪ್, 10 ಕಂಪ್ಯೂಟರ್, ಚಾರ್ಜರ್, ದಾಖಲೆಗಳು ಹಾಗೂ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ನಡೆಸಲಾಗುತ್ತಿದ್ದ ಕೊಠಡಿಗೆ ಬೀಗ ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳ ಹೆಸರು ಹಾಕಿ ವೋಟರ್ಸ್ ಸ್ಲಿಪ್ಗಳನ್ನು ಮುದ್ರಿಸುವುದಕ್ಕೆ ಅನುಮತಿ ಇಲ್ಲ. ಆದರೆ, ಆರೋಪಿಗಳು ಕೆಲ ವಾರಗಳಿಂದ ಮತದಾರರ ಪಟ್ಟಿ ಬಳಸಿಕೊಂಡು ಚುನಾವಣಾ ಆ್ಯಪ್ ಬಳಸಿ ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಸ್ಲಿಪ್ ಜೊತೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಮತ್ತು ಕ್ರಮ ಸಂಖ್ಯೆ ಇರುವ ಸ್ಲಿಪ್ಗಳನ್ನು ಸಿದ್ಧಪಡಿಸುತ್ತಿದ್ದರು. ಬಳಿಕ ಮತದಾರರ ಮನೆಗಳಿಗೆ ತೆರಳಿ ಸ್ಲಿಪ್ ನೀಡುವ ಉದ್ದೇಶ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
''ದಾವಣಗೆರೆ ಮೂಲದ ವಕೀಲ ಇಬ್ರಾಹಿಂ ಖಲೀಲುಲ್ಲಾ ಅವರು ಕಳೆದ ಅಕ್ಟೋಬರ್ನಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಇಟ್ಟುಕೊಂಡು, ಪ್ರತಿ ವಾರ್ಡ್ನಲ್ಲಿ ಸರ್ವೇ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಈಗ ಕ್ಷೇತ್ರದಲ್ಲಿ ವಾಸವಿಲ್ಲದವರನ್ನು ಪತ್ತೆ ಹಚ್ಚಿ (ಮನೆ ಖಾಲಿ ಮಾಡಿ ಬೇರೆ ಕಡೆ ವಾಸ ಮಾಡುತ್ತಿರುವ ಮತದಾರರನ್ನು ಸಂಪರ್ಕಿಸಲು ಅನುಕೂಲ ಆಗುವಂತೆ ) ಮತದಾನ ದಿನ ಕರೆದಕೊಂಡು ಬಂದು ಮತದಾನ ಮಾಡಿಸುವ ಯೋಜನೆ ಹಾಕಿದ್ದರು. ಅದಕ್ಕಾಗಿ 16 ಮಂದಿ ಡೇಟಾ ಎಂಟ್ರಿ ಅಪರೇಟರ್ ಇಟ್ಟುಕೊಂಡು ಕಂಪ್ಯೂಟರ್, ಪ್ರಿಂಟರ್ ಬಳಸಿ ಮಾಹಿತಿ ಕಲೆ ಹಾಕುತ್ತಿದ್ದರು'' ಎಂದು ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ತಿಳಿಸಿದರು.
''ನಕಲಿ ಗುರುತಿನ ಚೀಟ ಮುದ್ರಣ ಮಾಡುತ್ತಿರುವುದು ಪರಿಶೀಲನೆ ಮತ್ತು ವಿಚಾರಣೆ ವೇಳೆ ಕಂಡು ಬಂದಿಲ್ಲ,'' ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಜನಪ್ರತಿನಿಧಿಗಳ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಅಕ್ರಮವಾಗಿ ನಕಲಿ ಗುರುತಿನ ಚೀಟಿ ಮುದ್ರಣ ಮಾಡಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿ ನೇಮಕ ಮಾಡಿ ಚುನಾವಣೆ ಅಕ್ರಮ ನಡೆಸಲಾಗುತ್ತಿದೆ ಎಂದು ಬಿಜೆಪಿ ಸ್ಥಳೀಯ ಮುಖಂಡರು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಸೋಮವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಕೂಡ ಇದೇ ರೀತಿ ವೋಟರ್ ಸ್ಲಿಪ್ಮುದ್ರಣ ಮಾಡಿ ಮತದಾರರ ಮನೆ ಮನೆಗೆ ಹಂಚಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಅಭ್ಯರ್ಥಿಗಳ ಹೆಸರು ಹಾಕಿ ವೋಟರ್ಸ್ ಸ್ಲಿಪ್ಗಳನ್ನು ಮುದ್ರಿಸುವುದಕ್ಕೆ ಅನುಮತಿ ಇಲ್ಲ. ಆದರೆ, ಆರೋಪಿಗಳು ಕೆಲ ವಾರಗಳಿಂದ ಮತದಾರರ ಪಟ್ಟಿ ಬಳಸಿಕೊಂಡು ಚುನಾವಣಾ ಆ್ಯಪ್ ಬಳಸಿ ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಸ್ಲಿಪ್ ಜೊತೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಮತ್ತು ಕ್ರಮ ಸಂಖ್ಯೆ ಇರುವ ಸ್ಲಿಪ್ಗಳನ್ನು ಸಿದ್ಧಪಡಿಸುತ್ತಿದ್ದರು. ಬಳಿಕ ಮತದಾರರ ಮನೆಗಳಿಗೆ ತೆರಳಿ ಸ್ಲಿಪ್ ನೀಡುವ ಉದ್ದೇಶ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
''ದಾವಣಗೆರೆ ಮೂಲದ ವಕೀಲ ಇಬ್ರಾಹಿಂ ಖಲೀಲುಲ್ಲಾ ಅವರು ಕಳೆದ ಅಕ್ಟೋಬರ್ನಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಇಟ್ಟುಕೊಂಡು, ಪ್ರತಿ ವಾರ್ಡ್ನಲ್ಲಿ ಸರ್ವೇ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಈಗ ಕ್ಷೇತ್ರದಲ್ಲಿ ವಾಸವಿಲ್ಲದವರನ್ನು ಪತ್ತೆ ಹಚ್ಚಿ (ಮನೆ ಖಾಲಿ ಮಾಡಿ ಬೇರೆ ಕಡೆ ವಾಸ ಮಾಡುತ್ತಿರುವ ಮತದಾರರನ್ನು ಸಂಪರ್ಕಿಸಲು ಅನುಕೂಲ ಆಗುವಂತೆ ) ಮತದಾನ ದಿನ ಕರೆದಕೊಂಡು ಬಂದು ಮತದಾನ ಮಾಡಿಸುವ ಯೋಜನೆ ಹಾಕಿದ್ದರು. ಅದಕ್ಕಾಗಿ 16 ಮಂದಿ ಡೇಟಾ ಎಂಟ್ರಿ ಅಪರೇಟರ್ ಇಟ್ಟುಕೊಂಡು ಕಂಪ್ಯೂಟರ್, ಪ್ರಿಂಟರ್ ಬಳಸಿ ಮಾಹಿತಿ ಕಲೆ ಹಾಕುತ್ತಿದ್ದರು'' ಎಂದು ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ತಿಳಿಸಿದರು.
''ನಕಲಿ ಗುರುತಿನ ಚೀಟ ಮುದ್ರಣ ಮಾಡುತ್ತಿರುವುದು ಪರಿಶೀಲನೆ ಮತ್ತು ವಿಚಾರಣೆ ವೇಳೆ ಕಂಡು ಬಂದಿಲ್ಲ,'' ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಜನಪ್ರತಿನಿಧಿಗಳ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಅಕ್ರಮವಾಗಿ ನಕಲಿ ಗುರುತಿನ ಚೀಟಿ ಮುದ್ರಣ ಮಾಡಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿ ನೇಮಕ ಮಾಡಿ ಚುನಾವಣೆ ಅಕ್ರಮ ನಡೆಸಲಾಗುತ್ತಿದೆ ಎಂದು ಬಿಜೆಪಿ ಸ್ಥಳೀಯ ಮುಖಂಡರು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಸೋಮವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಕೂಡ ಇದೇ ರೀತಿ ವೋಟರ್ ಸ್ಲಿಪ್ಮುದ್ರಣ ಮಾಡಿ ಮತದಾರರ ಮನೆ ಮನೆಗೆ ಹಂಚಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.