ಆ್ಯಪ್ನಗರ

ಸಿದ್ದು ಅಹಿಂದ ಮಂತ್ರದ ಮೊರೆಗೆ ಕೈ ಪಾಳಯ ಸಿಡಿಮಿಡಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ 'ಅಹಿಂದ' ಮೊರೆಹೋಗಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿಅಸಮಾಧಾನ ಸೃಷ್ಟಿಸಿದೆ. ಸಿದ್ದರಾಮಯ್ಯ ಈ ನಡೆಯಿಂದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಪಕ್ಷದಿಂದ ದೂರ ಸರಿಯೋ ಸಾಧ್ಯತೆ ಇದೆ ಎಂಬುವುದು ಕೈ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

Vijaya Karnataka 4 Nov 2019, 10:02 pm
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ 'ಅಹಿಂದ' ಮೊರೆಹೋಗಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿಅಸಮಾಧಾನ ಸೃಷ್ಟಿಸಿದ್ದು, ಲಿಂಗಾಯತ, ಒಕ್ಕಲಿಗ ಮತ್ತಿತರ ಮೇಲ್ವರ್ಗದ ಜನರು ಪಕ್ಷದಿಂದ ಇನ್ನಷ್ಟು ದೂರ ಸರಿಯಲು ಇದು ಕಾರಣವಾಗಲಿದೆ ಎಂದು ಹಲವು ಹಿರಿಯ ನಾಯಕರು ಆತಂಕಗೊಂಡಿದ್ದಾರೆ.
Vijaya Karnataka Web congress leader siddaramaiah ahinda statement disagree in congress party
ಸಿದ್ದು ಅಹಿಂದ ಮಂತ್ರದ ಮೊರೆಗೆ ಕೈ ಪಾಳಯ ಸಿಡಿಮಿಡಿ


ಸಿದ್ದರಾಮಯ್ಯಗೆ ನೊಬೆಲ್ ಅವಾರ್ಡ್ ನೀಡಬೇಕಂತೆ! ಯಾಕೆ ಗೊತ್ತಾ?

ಬೀದರ್‌ನ ಶೋಷಿತರ ಸಮಾವೇಶದಲ್ಲಿ'ಅಹಿಂದ ನನ್ನ ಜತೆಗೆ ನಿಲ್ಲಬೇಕು' ಎಂಬ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ ಎಲ್ಲಜಾತಿ, ಸಮುದಾಯಗಳನ್ನು ಸಮಾನವಾಗಿ ನೋಡುವ ಪಕ್ಷ ಎಂದು ಪ್ರತಿಪಾದಿಸಬೇಕಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮತ್ತೆ 'ಅಹಿಂದ' ಮಂತ್ರ ಜಪಿಸಲು ಹೊರಟಿರುವುದು ಪಕ್ಷಕ್ಕೆ ಡ್ಯಾಮೇಜ್‌ ಆಗಲಿದೆ ಎಂದು ಹಿರಿಯ ನಾಯಕರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಮುಗಿಸಲು ಬಿಜೆಪಿಯವರಿಂದಲೇ ಪ್ರಯತ್ನ: ದಿನೇಶ್‌ ಗುಂಡೂರಾವ್‌

ಅಹಿಂದ ಪ್ರತಿಪಾದನೆಯಿಂದ ಪಕ್ಷಕ್ಕೆ ಯಾವ ಲಾಭವೂ ಇಲ್ಲ. ಅಹಿಂದ ನಾಯಕರಾಗಿ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಅವರೊಟ್ಟಿಗೆ ಕುರುಬರ ಹೊರತಾಗಿ ಇತರ ಹಿಂದುಳಿದ ವರ್ಗಗಳ ಜನರು ಇಲ್ಲ. ಪರಿಶಿಷ್ಟರಲ್ಲೂ ಬಹುಸಂಖ್ಯಾತ ಎಡಗೈ ಕೋಮು ಜತೆಗಿಲ್ಲ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಪಕ್ಷದಿಂದ ಇನ್ನಷ್ಟು ದೂರ ಸರಿಯಬಹುದು ಎಂದು ಕೆಲ ಹಿರಿಯ ನಾಯಕರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಡಿಕೆಶಿ -ಖರ್ಗೆ ಚರ್ಚೆ
ಭಾನುವಾರ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಪಕ್ಷದೊಳಗಿನ ಈ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸೌಜನ್ಯಕ್ಕೂ ತಮ್ಮ ಅಭಿಪ್ರಾಯ ಪಡೆದಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿಎಲ್ಲವೂ 'ತ್ರಿಮೂರ್ತಿ'ಗಳ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ