ಆ್ಯಪ್ನಗರ

ಆಪರೇಷನ್‌, ಸರ್ಜರಿಯಲ್ಲಿ ಬಿಎಸ್‌ವೈ ಎಕ್ಸ್‌ಪರ್ಟ್‌; ಸಿದ್ದುv/s ಸಿಟಿ ರವಿ ಟ್ವೀಟ್ ವಾರ್

ಆಪರೇಷನ್‌, ಸರ್ಜರಿ ಎಲ್ಲದರಲ್ಲೂ ಸಿಎಂ ಯಡಿಯೂರಪ್ಪ ಸ್ಪೆಷಲಿಸ್ಟ್‌, ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತೂ ಇಲ್ಲ'' ಎಂದು ಪ್ರತಿಪಕ್ಷದ ನಾಯಕ ಟ್ವೀಟ್ ದಾಳಿ ನಡೆಸಿದ್ದಾರೆ.

Vijaya Karnataka Web 12 Nov 2019, 10:28 pm
ಬೆಂಗಳೂರು : 'ಆಪರೇಷನ್‌, ಸರ್ಜರಿ ಎಲ್ಲದರಲ್ಲೂ ಸಿಎಂ ಯಡಿಯೂರಪ್ಪ ಸ್ಪೆಷಲಿಸ್ಟ್‌, ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತೂ ಇಲ್ಲ'' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web congress leader siddaramaiah tweet war with bjp ct ravi
ಆಪರೇಷನ್‌, ಸರ್ಜರಿಯಲ್ಲಿ ಬಿಎಸ್‌ವೈ ಎಕ್ಸ್‌ಪರ್ಟ್‌; ಸಿದ್ದುv/s ಸಿಟಿ ರವಿ ಟ್ವೀಟ್ ವಾರ್


ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ 'ಆಪರೇಷನ್‌ ಹಸ್ತ' ನಡೆಯುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿ ಸರಣಿ ಟ್ವೀಟ್‌ ಮಾಡಿದ್ದಾರೆ.


''ನಾವಾಗಿ ಹಣ, ಅಧಿಕಾರದ ಆಮಿಷವೊಡ್ಡಿ ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತಂದರೆ, ಅದು ಆಪರೇಷನ್‌ ಆಗುತ್ತದೆ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅವರಾಗಿಯೇ ಬಂದರೆ ಅದು ಆಪರೇಷನ್‌ ಹೇಗಾಗುತ್ತದೆ? ಈ ಆಪರೇಷನ್‌, ಸರ್ಜರಿ ಎಲ್ಲದರಲ್ಲೂ ಯಡಿಯೂರಪ್ಪ ಮಾತ್ರ ಸ್ಪೆಷಲಿಸ್ಟ್‌'' ಎಂದಿದ್ದಾರೆ.

''ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್‌ ಕಮಲವನ್ನೂ ಮಾಡ್ತಾರೆ, ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದ್ರೆ ಏನು ಎಂದೇ ಬಿಜೆಪಿಯವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ''ಎಂದು ಜರಿದಿದ್ದಾರೆ.


''ಉಪಚುನಾವಣೆ ನಂತರ ಕಾಂಗ್ರೆಸ್‌ ಮತ್ತು ಜೆಡಿಸ್‌ ಪಕ್ಷದಿಂದ ಇನ್ನಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಸಿ.ಟಿ.ರವಿ ಹೇಳಿದ್ದಾರಂತೆ... ಮೊದಲು ಬಿಜೆಪಿ ಬಿಟ್ಟು ಹೋಗುತ್ತಿರುವವರನ್ನು ತಡೆಯಲಿ, ಆಮೇಲೆ ಬೇರೆ ಮಾತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿಇಂತಹ ಹೇಳಿಕೆಗಳನ್ನು ಕೇಳಿ ಕೇಳಿ ಸಾಕಾಗಿದೆ'' ಎಂದು ವ್ಯಂಗ್ಯವಾಡಿದ್ದಾರೆ.


''ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಎಐಸಿಸಿ ಹೈಕಮಾಂಡ್‌ ಸೂಚಿಸಿತ್ತು. ವರಿಷ್ಠರ ಆದೇಶವನ್ನು ನಾನು ಪಾಲಿಸಿದೆ. ನನ್ನ ಪಾತ್ರ ಅಷ್ಟೆ. ಹೈಕಮಾಂಡ್‌ ಜತೆ ಚರ್ಚೆ ಮಾಡಿದ್ದು, ಸರಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ'' ಎಂದು ಜೆಡಿಎಸ್‌ ನಾಯಕತ್ವಕ್ಕೂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಆಪರೇಷನ್ ಆರಂಭಿಸಿದ್ದೇ ನೀವು ಎಂದು ಸಿಟಿ ರವಿ

ಸಿದ್ದರಾಮಯ್ಯ ಟ್ವೀಟ್‌ಗೆ ಸಚಿವ ಸಿಟಿ ರವಿ ಪ್ರತ್ಯುತ್ತರ ನೀಡಿದ್ದು ಆಪರೇಷನ್ ಆರಂಭ ಮಾಡಿದ್ದೇ ನೀವು ಎಂದು ತಿರುಗೇಟು ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಟ್ವೀಟ್‌ದಾಳಿ ನಡೆಸಿದ ಅವರು,ಅಧಿಕಾರದ ದುರಾಸೆಯಿಂದ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿಯುವ ಮೂಲಕ ಕರ್ನಾಟಕದಲ್ಲಿ "ಆಪರೇಷನ್" ಆರಂಭ ಮಾಡಿದ್ದೇ ನೀವು. ಅನೈತಿಕ ರಾಜಕಾರಣದಲ್ಲೇ ಮುಳುಗಿರುವ ನಿಮ್ಮ ಬಾಯಲ್ಲಿ ಮೌಲ್ಯಾಧಾರಿತ ರಾಜಕಾರಣ, ಸಂವಿಧಾನ, ಪ್ರಜಾಪ್ರಭುತ್ವ ಎಂಬ ದೊಡ್ಡ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ