ಆ್ಯಪ್ನಗರ

ಏಯ್‌ ಸಿದ್ದರಾಮಯ್ಯ ನೀವ್ಯಾವ ಸೀಮೆ ನಾಯಕ ಹೋಗೋಲೊ, ಏಯ್‌ ಮುನಿಯಪ್ಪ, ನೀನ್‌ ಕುತ್ಕೊಳೋ - ಕಾಂಗ್ರೆಸ್‌ ನಾಯಕರ ಫೈಟ್‌

ಕಾಂಗ್ರೆಸ್‌ ನಾಯಕರ ನಡುವೆ ಪರಸ್ಪರ ಕಿತ್ತಾಟ ಜೋರಾಗಿದೆ. ಲೋಕಸಭಾ ಚುನಾವಣೆ ಹಾಗೂ ದೋಸ್ತಿ ಸರಕಾರ ಪತನಗೊಂಡ ನಂತರವಂತೂ ಆರೋಪ-ಪ್ರತ್ಯಾರೋಪ ಬಹಿರಂಗವಾಗಿದೆ.

Vijaya Karnataka Web 26 Sep 2019, 2:29 pm
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಈಗ ಬಹಿರಂಗವಾಗಿದೆ. ಕಳೆದ ಲೋಕಸಭಾ ಚುನಾವಣೆ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರ ಪತನಗೊಂಡ ಮೇಲಂತೂ ಇದು ಒಂದು ಕೈ ಜಾಸ್ತಿಯೇ ಆಗಿದೆ.

ಉಪ ಚುನಾವಣೆ ಸಂಬಂಧ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ನಾಯಕರ ವಾಕ್ಸಮರ ಜೋರಾಗಿ ಸಾಗಿತು. ಮುಖ್ಯ ಅಜೆಂಡಾಗಿಂತ ನಾಯಕರ ನಡುವಿನ ವಾಕ್ಸಮರವೇ ಜೋರಾಗಿತ್ತು.

ಒಂದು ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೋಲಾರದ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ನಡುವೆ ವಾಗ್ದಾದ ನಡೆಯಿತು.

ಈ ನಾಯಕರು ಪರಸ್ಪರ ಏಕವನಚಲದಲ್ಲಿಯೇ ಸಭೆಯಲ್ಲಿ ಬೈದಾಡಿಕೊಂಡರು ಎಂದು ಖಾಸಗಿ ಚಾನೆಲ್‌ಗಳು ವರದಿ ಮಾಡಿವೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಮ್ಮುಖದಲ್ಲಿಯೇ ನಾಯಕರು ಪರಸ್ಪರ ಕಿತ್ತಾಡಿಕೊಂಡರು.

ಸಭೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ಕೆಎಚ್‌ ಮುನಿಯಪ್ಪ ಆರೋಪಗಳ ಸುರಿಮಳೆಗರೆದರು.

ಏಯ್ ಸಿದ್ದರಾಮಯ್ಯ, ಕಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಂಡಿದೆಯಾ, ನೀನ್ಯಾವ ಸೀಮೆ ನಾಯಕ ಎಂದು ಕೂಗಾಡಿದರು.

ಇದಕ್ಕೆ ಸಿದ್ದರಾಮಯ್ಯ, ಏಯ್‌ ಮುನಿಯಪ್ಪ ಕುತ್ಕೊಳೋ ಎಂದರು.

ನೀನ್ಯಾವನೋ ನನಗೆ ಹೇಳೋಕೆ ಎಂದು ಮುನಿಯಪ್ಪ ಕೂಗಾಡಿದರು.

ಆಗ ಸಿದ್ದರಾಮಯ್ಯ, ನಿನಗೆ ಗೆಲ್ಲೋಕೆ ಆಗಲಿಲ್ಲ. ನಿನ್ನ ಕತೆ ನನಗೆ ಗೊತ್ತಿಲ್ಲವಾ ಎಂದರು.

ಆಗ ಮತ್ತಷ್ಟು ಮುನಿಸಿಕೊಂಡ ಕೆಎಚ್‌ ಮುನಿಯಪ್ಪ, ನನ್ನನ್ನು ಸೋಲಿಸಿದ್ದೇ ನೀನು. ನಿನ್ನ ಆಟ ನನಗೆ ಗೊತ್ತಿಲ್ಲವಾ ಎಂದರು.

ಇದಕ್ಕೆ ಸಿದ್ದರಾಮಯ್ಯ, ಏಯ್‌ ಮುನಿಯಪ್ಪ ಕುತ್ಕೋ ಸಾಕು. ಎಲ್ಲ ಗೊತ್ತಿದೆ ಎಂದು ಏರಿದ ದನಿಯಲ್ಲಿ ಗದರಿದರು.

ಆಗ ಉಳಿದ ನಾಯಕರು ಇಬ್ಬರನ್ನು ಸಮಾಧಾನಪಡಿಸಿ ಸಭೆಯ ಮುಖ್ಯ ಅಜೆಂಡಾ ಬಗ್ಗೆ ಚರ್ಚಿಸೋಣ. ಇದೆಲ್ಲ ಮುಗಿದ ಅಧ್ಯಾಯ ಎಂದು ಪರಿಸ್ಥಿತಿ ತಿಳಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ