ಆ್ಯಪ್ನಗರ

ಸಂಸತ್‌ ಅಧಿವೇಶನದ ಬಳಿಕ ಕೈ ಹೈಕಮಾಂಡ್‌ ಪ್ರತಿನಿಧಿಗಳ ಆಗಮನ

ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಸಂಸತ್‌ ಅಧಿವೇಶನದ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ ಪ್ರತಿನಿಧಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ...

Vijaya Karnataka 5 Aug 2019, 5:00 am
ಬೆಂಗಳೂರು : ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಸಂಸತ್‌ ಅಧಿವೇಶನದ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ ಪ್ರತಿನಿಧಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ವೇಳೆ ದೋಸ್ತಿ ರಾಜಕಾರಣದ ಭವಿಷ್ಯವೂ ನಿರ್ಧಾರವಾಗಲಿದೆ.
Vijaya Karnataka Web congress-flag


ಪ್ರತಿಪಕ್ಷದ ನಾಯಕರ ಸ್ಥಾನ ಗಿಟ್ಟಿಸಲು ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಇರುವುದರಿಂದ ಕಳೆದ ವಾರವೇ ಪಕ್ಷದ ವರಿಷ್ಠ ನಾಯಕ ಗುಲಾಂ ನಬಿ ಆಜಾದ್‌ ಬಂದಿದ್ದರು. ಆದರೆ, ರಾಜ್ಯಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ ಇದ್ದದ್ದರಿಂದ ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದರು. ಅಧಿವೇಶನದ ನಂತರ ಪುನಃ ಆಜಾದ್‌ ಅವರೇ ಬಂದು ಇಲ್ಲಿನ ಬಿಕ್ಕಟ್ಟು ಇತ್ಯರ್ಥಕ್ಕೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ದೋಸ್ತಿ ಮುಂದುವರಿಸಲು ರಾಜ್ಯ ಕಾಂಗ್ರೆಸ್‌ನಲ್ಲಿ ವಿರೋಧವಿದೆ. ಕೆಲವರು ಮಾತ್ರ ದೋಸ್ತಿ ಮುಂದುವರಿಕೆ ಪರವಾಗಿದ್ದಾರೆ. ಜೆಡಿಎಸ್‌ ಶಾಸಕರ ವಲಯದಲ್ಲೂ ಮೈತ್ರಿ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿಲ್ಲ. ಆದರೆ, ಈ ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಇನ್ನೂ ಯಾವುದೇ ಖಚಿತ ನಿಲುವು ತಳೆದಿಲ್ಲ. ಹಾಗಾಗಿ ಗೌಡರೊಂದಿಗೂ ಆಜಾದ್‌ ಸಮಾಲೋಚಿಸಲಿದ್ದಾರೆ. ದೇವೇಗೌಡರು ಇಚ್ಛಿಸಿದರೆ ಮೈತ್ರಿ ಮುಂದುವರಿಕೆಗೂ ಪರಾಮರ್ಶೆ ನಡೆಯಲಿದೆ. ಇದರ ಸಾಧಕ, ಬಾಧಕ ನೋಡಿಕೊಂಡು ಬೈ ಎಲೆಕ್ಷನ್‌ನಲ್ಲಿ ಸೀಟು ಹೊಂದಾಣಿಕೆಗೆ ಯೋಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ