ಬೆಂಗಳೂರು: ರಾಜೀನಾಮೆ ಸಲ್ಲಿಸಿದ ಶಾಸಕರಲ್ಲಿ ಹೆಚ್ಚಿನವರು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಎಂಬ ಟೀಕೆ ವ್ಯಕ್ತವಾದದ್ದರಿಂದ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ನ ಎಲ್ಲ ಶಾಸಕರೂ ತಮ್ಮವರು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ''ರಾಜೀನಾಮೆ ನೀಡಿದ ಶಾಸಕರು ಮಾತ್ರವಲ್ಲ. ಕಾಂಗ್ರೆಸ್ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿಯಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ,'' ಎಂದಿದ್ದಾರೆ.
ಶಾಸಕರ ರಾಜೀನಾಮೆಯಿಂದ ಮೈತ್ರಿ ಸರಕಾರಕ್ಕೆ ಯಾವ ಸಮಸ್ಯೆಯೂ ಆಗದು. ನಾವು ಬಹುಮತ ಸಾಬೀತು ಪಡಿಸುವುದಕ್ಕೂ ತಯಾರಿದ್ದೇವೆ. ರಾಜೀನಾಮೆ ನೀಡಿದವರು ವಾಪಸ್ ಬರುವ ವಿಶ್ವಾಸವೂ ಇದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಶಾಸಕರ ರಾಜೀನಾಮೆಯಿಂದ ಮೈತ್ರಿ ಸರಕಾರಕ್ಕೆ ಯಾವ ಸಮಸ್ಯೆಯೂ ಆಗದು. ನಾವು ಬಹುಮತ ಸಾಬೀತು ಪಡಿಸುವುದಕ್ಕೂ ತಯಾರಿದ್ದೇವೆ. ರಾಜೀನಾಮೆ ನೀಡಿದವರು ವಾಪಸ್ ಬರುವ ವಿಶ್ವಾಸವೂ ಇದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ