ಆ್ಯಪ್ನಗರ

ಗೋವಿಂದರಾಜುಗೆ ಅವಕಾಶ:ಶಾಸಕರಲ್ಲಿ ಅಸಮಾಧಾನ

ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರನ್ನು 2ನೇ ಬಾರಿಗೆ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಕ್ಕೆ ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಉಂಟಾಗಿದೆ. ಜತೆಗೆ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ಪೈಕಿ ಮೇಲ್ಮನೆಯ ಮೂವರಿಗೆ ಅವಕಾಶ ನೀಡಿರುವುದೂ ವಿಧಾನಸಭಾ ಸದಸ್ಯರ ಕಣ್ಣು ಕೆಂಪಾಗಿಸಿದೆ. ಈ ಸಂಬಂಧ ಸದ್ಯದಲ್ಲೇ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸುವುದಕ್ಕೂ ಒಳಗೊಳಗೆ ವೇದಿಕೆ ಸಜ್ಜಾಗುತ್ತಿದೆ.

Vijaya Karnataka 18 Jan 2019, 5:00 am
ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಅವರನ್ನು 2ನೇ ಬಾರಿಗೆ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಕ್ಕೆ ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಉಂಟಾಗಿದೆ. ಜತೆಗೆ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ಪೈಕಿ ಮೇಲ್ಮನೆಯ ಮೂವರಿಗೆ ಅವಕಾಶ ನೀಡಿರುವುದೂ ವಿಧಾನಸಭಾ ಸದಸ್ಯರ ಕಣ್ಣು ಕೆಂಪಾಗಿಸಿದೆ. ಈ ಸಂಬಂಧ ಸದ್ಯದಲ್ಲೇ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸುವುದಕ್ಕೂ ಒಳಗೊಳಗೆ ವೇದಿಕೆ ಸಜ್ಜಾಗುತ್ತಿದೆ.
Vijaya Karnataka Web congress mla are un happy
ಗೋವಿಂದರಾಜುಗೆ ಅವಕಾಶ:ಶಾಸಕರಲ್ಲಿ ಅಸಮಾಧಾನ


ವಿಧಾನಸೌಧದಲ್ಲಿ ಗುರುವಾರ ಸಿಎಂ ಕುಮಾರಸ್ವಾಮಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್‌ನ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ಪೈಕಿ ವಿಧಾನಸಭೆಯಿಂದ ಐವರು ಹಾಗೂ ವಿಧಾನ ಪರಿಷತ್ತಿನಿಂದ ಮೂವರು ಸದಸ್ಯರಿದ್ದಾರೆ. ಅದರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಮೂವರಿಗೆ (ಅಂಜಲಿ ನಿಂಬಾಳ್ಕರ್‌, ರೂಪ ಶಶಿಧರ್‌, ಡಿ.ಎಸ್‌.ಹೂಲಗೇರಿ) ಅವಕಾಶ ಕಲ್ಪಿಸಲಾಗಿದೆ. ಮಹಾಂತೇಶ್‌ ಕೌಜಲಗಿ ಹಾಗೂ ರಾಘವೇಂದ್ರ ಹಿಟ್ನಾಳ್‌ 2ನೇ ಬಾರಿಗೆ ಶಾಸಕರಾಗಿದ್ದಾರೆ. ಕೌಜಲಗಿ ಒಮ್ಮೆ ಮೇಲ್ಮನೆ ಸದಸ್ಯರೂ ಆಗಿದ್ದರು. ಇನ್ನು ಮೇಲ್ಮನೆಯಿಂದ ನೇಮಕಗೊಂಡಿರುವ ಮೂವರ ಪೈಕಿ ಅಬ್ದುಲ್‌ ಜಬ್ಬಾರ್‌, ಐವನ್‌ ಡಿಸೋಜ ಮೊದಲ ಬಾರಿಗೆ ಪರಿಷತ್ತಿನ ಸದಸ್ಯರಾಗಿದ್ದರೆ, ಕೆ.ಗೋವಿಂದರಾಜು 2ನೇ ಬಾರಿಗೆ ಮೇಲ್ಮನೆಗೆ ನೇಮಕಗೊಂಡಿದ್ದಾರೆ.

ಈ 8 ಮಂದಿಯಲ್ಲಿ 7 ಮಂದಿಗೆ ಮೊದಲ ಬಾರಿಗೆ ಸಂಸದೀಯ ಕಾರ್ಯದರ್ಶಿಗಳಾಗುವ ಅವಕಾಶ ದೊರೆತಿದೆ. ಆದರೆ ಗೋವಿಂದರಾಜುಗೆ 2ನೇ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಗೋವಿಂದರಾಜು ನೇಮಕ ಮುಂದಿಟ್ಟುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ವಿರುದ್ಧ ಹಲವು ಶಾಸಕರು ಅಸಮಾಧಾಗೊಂಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಷ್ಟಪಡದ ಶಾಸಕರೊಬ್ಬರು 'ವಿಕ' ಗೆ ತಿಳಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ