ಆ್ಯಪ್ನಗರ

ಜಮೀರ್‌ ಮಂತ್ರಿ: ಕಾಂಗ್ರೆಸ್‌ನ ಮುಸ್ಲಿಂ ಶಾಸಕರ ಆಕ್ರೋಶ

ಜೆಡಿಎಸ್‌ ಸಖ್ಯ ತೊರೆದು 'ಕೈ'ಹಿಡಿದ ಜಮೀರ್‌ ಅಹ್ಮದ್‌ ಖಾನ್‌ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಮುಸ್ಲಿಂ ಕೋಟಾದಲ್ಲಿ ಸಂಪುಟಕ್ಕೆ ಪ್ರವೇಶ ಪಡೆದಿರುವುದು ಕಾಂಗ್ರೆಸ್‌ನ ನಿಷ್ಠಾವಂತ ಹಾಗೂ ಹಿರಿಯ ಮುಸ್ಲಿಂ ಶಾಸಕರ ಕಣ್ಣು ಕೆಂಪಗಾಗಿಸಿದೆ.

Vijaya Karnataka Web 9 Jun 2018, 5:00 am
ಬೆಂಗಳೂರು: ಜೆಡಿಎಸ್‌ ಸಖ್ಯ ತೊರೆದು 'ಕೈ'ಹಿಡಿದ ಜಮೀರ್‌ ಅಹ್ಮದ್‌ ಖಾನ್‌ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಮುಸ್ಲಿಂ ಕೋಟಾದಲ್ಲಿ ಸಂಪುಟಕ್ಕೆ ಪ್ರವೇಶ ಪಡೆದಿರುವುದು ಕಾಂಗ್ರೆಸ್‌ನ ನಿಷ್ಠಾವಂತ ಹಾಗೂ ಹಿರಿಯ ಮುಸ್ಲಿಂ ಶಾಸಕರ ಕಣ್ಣು ಕೆಂಪಗಾಗಿಸಿದೆ.
Vijaya Karnataka Web zameer


ಪ್ರಭಾವಿ ಮುಸ್ಲಿಂ ಶಾಸಕ ಆರ್‌.ರೋಷನ್‌ ಬೇಗ್‌, ತನ್ವೀರ್‌ ಸೇಠ್‌ ಹಾಗೂ ಎನ್‌.ಎ. ಹ್ಯಾರೀಸ್‌ ಸೇರಿ ಕಾಂಗ್ರೆಸ್‌ನ ಹಲವು ಮುಸ್ಲಿಂ ನಾಯಕರು ಈ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಮುಸ್ಲಿಂ ನಾಯಕರಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ತಮ್ಮನ್ನು ಕಡೆಗಣಿಸಿ ಜಮೀರ್‌ಗೆ ಮಣೆ ಹಾಕಿದ್ದಕ್ಕೆ ರೋಷನ್‌ ಬೇಗ್‌ ಆಕ್ರೋಶಗೊಂಡಿದ್ದರೆ, ''ತಂದೆ ಅಜಿತ್‌ ಸೇಠ್‌ ಕಾಲದಿಂದಲೂ ಕಾಂಗ್ರೆಸ್‌ಗೆ ನಿಷ್ಠೆ ಕಾಯ್ದುಕೊಂಡು ಬಂದಿರುವ ನಮ್ಮನ್ನು ನಿರ್ಲಕ್ಷಿಸಿ ಎಸ್‌ಡಿಪಿಐ ಬಲದೊಂದಿಗೆ ಗೆದ್ದು ಬಂದವರನ್ನು ಸಚಿವರಾಗಿ ಮಾಡಲಾಗಿದೆ,'' ಎಂದು ತನ್ವೀರ್‌ ಸೇಠ್‌ ನೇರವಾಗಿ ಆರೋಪಿಸಿದ್ದಾರೆ.

ಸಂಪುಟದಲ್ಲಿ ಹ್ಯಾರೀಸ್‌ಗೆ ಅವಕಾಶ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಶುಕ್ರವಾರ ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಜಮೀರ್‌ಗೆ ಸಂಪುಟದಲ್ಲಿ ಅವಕಾಶ ಸಿಗಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ಸಿಟ್ಟುಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ