ಶಶಿಧರ ಹೆಗಡೆ
ಬೆಂಗಳೂರು: ಬಂಡಾಯದ ಸುನಾಮಿಗೆ ಸಿಲುಕಿ ನಡುಗುತ್ತಿರುವ ದೋಸ್ತಿ ಸರಕಾರದ ರಕ್ಷಣೆಗೆ ಜೆಡಿಎಸ್ಗಿಂತಲೂ ಹೆಚ್ಚಿನ ಉತ್ತರದಾಯಿತ್ವವನ್ನು ಕಾಂಗ್ರೆಸ್ ತೋರುತ್ತಿದೆ. ಇದಕ್ಕೆ ಕಾರಣ, ವಚನಭ್ರಷ್ಟತೆಯ ಭೀತಿ ಮತ್ತು ಅತಂತ್ರ ರಾಜಕೀಯ ಸನ್ನಿವೇಶದಲ್ಲಿ ನಾಟಕೀಯವಾಗಿ ಸಿಎಂ ಹುದ್ದೆ ಗಿಟ್ಟಿಸಬಹುದೆಂಬ ದೂರದ ಆಸೆ!
ಕಳೆದ ವಿಧಾನಸಭೆ ಚುನಾವಣೆ ಬಳಿಕ ಸ್ವಪ್ರೇರಣೆಯಿಂದ ಜೆಡಿಎಸ್ಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷ ಸದ್ಯಕ್ಕೆ ಭಾರಿ ಸಂಕಟದಲ್ಲಿದೆ. ಹಾಗಂತ ಅದನ್ನು ನೇರವಾಗಿ ಹೇಳಿಕೊಳ್ಳುವಂತಿಲ್ಲ. ಅಂದರೆ ತಾನೇ ತೋಡಿಕೊಂಡ ಖೆಡ್ಡಾದಲ್ಲಿ ಮಗುಚಿ ಬಿದ್ದಿರುವ ಕಾಂಗ್ರೆಸ್ಗೆ ಈ ಹಂತದಲ್ಲಿ ಒಂದಷ್ಟು ‘ಕಣ್ಕಟ್ ವಿದ್ಯೆ’ ಪ್ರದರ್ಶನದ ಅನಿವಾರ್ಯತೆಯಿದೆ. ಹಾಗಾಗಿ ಮೈತ್ರಿಧರ್ಮ ಪಾಲನೆಗೆ ಕೈನಾಯಕರು ಅಪೂರ್ವ ಒಗ್ಗಟ್ಟಿನೊಂದಿಗೆ ಅಖಾಡಕ್ಕೆ ಇಳಿದಂತೆ ಕಾಣುತ್ತಿದೆ. ಆದರೆ, ಇದರ ಒಳಗುಟ್ಟು ಬೇರೆಯೇ ಇದೆ!
‘‘ನಾವು ಮುಖ್ಯಮಂತ್ರಿ ಸ್ಥಾನ ಕೇಳಿರಲಿಲ್ಲ. ಕಾಂಗ್ರೆಸ್ನವರೇ ಬಂದು ನಿಮ್ಮ ಪುತ್ರನೇ ಸಿಎಂ ಆಗಬೇಕೆಂದರು,’’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹತ್ತು ಹಲವು ಬಾರಿ ಹೇಳಿದ್ದಾರೆ. ಭರ್ತಿ ೫ ವರ್ಷ ಕಾಲ ಎಚ್.ಡಿ.ಕುಮಾರಸ್ವಾಮಿ ನಾಯಕತ್ವಕ್ಕೆ ಬೇಷರತ್ ಬೆಂಬಲವೆಂದು ಕಾಂಗ್ರೆಸ್ ವರಿಷ್ಠರು ಪ್ರಾರಂಭದಲ್ಲೆ ಘೋಷಿಸಿದ್ದರು. ಈ ಸಂಬಂಧ ಒಪ್ಪಂದವೂ ಆಗಿದೆ.
ಈ ಕಾರಣದಿಂದಲೇ ತಾನೇ ಮುಂದಾಗಿ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಇದಲ್ಲದೆ ಲೋಕಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ಗೆ ದೂರಿತ್ತಿದ್ದರು. ಈ ಸರಕಾರ ಪತನದ ಹಾದಿ ಹಿಡಿಯುವುದಿದ್ದರೆ ಅದು ಸಿದ್ದು ಅವರಿಂದ ಮಾತ್ರವೆಂದು ಗೌಡರು ಎಚ್ಚರಿಸಿದ್ದರು.
ಶಾಸಕರ ರಾಜೀನಾಮೆ ಪರ್ವ ಪ್ರಾರಂಭಗೊಂಡಾಗಲೂ ಈ ಕ್ಷಿಪ್ರಕ್ರಾಂತಿಯ ಸೂತ್ರಧಾರರು ಯಾರೆಂಬ ಸುದ್ದಿಯನ್ನು ಕಾಂಗ್ರೆಸ್ನ ದಿಲ್ಲಿ ನಾಯಕರಿಗೆ ಗೌಡರು ಮುಟ್ಟಿಸಿದ್ದರು. ಹಾಗಾಗಿ ಗುಲಾಂ ನಬಿ ಆಜಾದ್ ಓಡೋಡಿ ಬಂದಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಂತೂ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ವರಿಷ್ಠರನ್ನು ಕಟ್ಟಿ ಹಾಕುವಲ್ಲಿ ಮಾಜಿ ಪ್ರಧಾನಿ ಯಶಸ್ವಿಯಾಗಿದ್ದಾರೆ. ಈ ಬಲೆಯಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡುತ್ತಿರುವ ಕೈನಾಯಕರು ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುವಂತೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ!
ನಿರೀಕ್ಷಣಾ ಜಾಮೀನು
ಜೆಡಿಎಸ್ ಸಖ್ಯ ಕಡಿದುಕೊಂಡರೆ ಸುಖವಿದೆ ಎನ್ನುವುದು ಎಐಸಿಸಿಗೂ ಈಗ ಮನವರಿಕೆಯಾಗಿ ಹೋಗಿದೆ. ಈಗಿನ ಪರಿಸ್ಥಿತಿಯಲ್ಲಿ ಹಿಂದೆ ಮುಂದೆ ನೋಡದೆ ಬೆಂಬಲ ಹಿಂಪಡೆದರೆ ಜೆಡಿಎಸ್ ಕೈಗೆ ಪುಕ್ಕಟೆ ಅಸ್ತ್ರ ಕೊಟ್ಟಂತಾಗುತ್ತದೆ. ಕಾಂಗ್ರೆಸ್ನವರು ನಂಬಿಸಿ ಕೈಕೊಟ್ಟರೆಂದು ಜೆಡಿಎಸ್ ಆಪಾದಿಸುತ್ತದೆ. ಈ ಮೈತ್ರಿ ಪರಿಣಾಮ ವಿಶೇಷವಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಸರ್ವಪತನದ ಹಾದಿಯಲ್ಲಿದೆ. ಇದರ ಮಧ್ಯೆ ವಚನಭ್ರಷ್ಟತೆಯ ಆರೋಪವೂ ಬಂದುಬಿಟ್ಟರೆ ಜೆಡಿಎಸ್ ಎದುರು ತಾನು ನಿರಾಯುಧವಾಗಬೇಕಾಗುತ್ತದೆ ಎಂಬ ಭೀತಿ ಕಾಂಗ್ರೆಸ್ಗಿದೆ.
ಹಾಗಾಗಿ ಕಟ್ಟಕಡೆಯ ಕ್ಷಣದವರೆಗೂ ಸರಕಾರ ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗಿದೆ. ವಿಶ್ವಾಸದ್ರೋಹದ ಯೋಚನೆಯನ್ನೂ ಮಾಡಿಲ್ಲವೆಂಬ ಮೆಸೇಜ್ ಪಾಸ್ ಮಾಡುವುದು ಕಾಂಗ್ರೆಸ್ನ ಅಂತರಂಗದ ತಂತ್ರ. ಅದಕ್ಕಾಗಿ ಇಷ್ಟೊಂದು ಸರ್ಕಸ್. ಇದೊಂದು ಬಗೆಯ ‘ನಿರೀಕ್ಷಣಾ ಜಾಮೀನು’ ಇದ್ದಂತಿದೆ.
ಇನ್ನು ಸೂಪರ್ ಸಿಎಂ ಎಚ್.ಡಿ.ರೇವಣ್ಣ ನಡವಳಿಕೆಯಿಂದಲೇ ಈ ಸರಕಾರ ಸಮಸ್ಯೆಗೆ ಸಿಲುಕಿತು. ಶಾಸಕರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಸಿಎಂ ಕುಮಾರಸ್ವಾಮಿ ಅವರೂ ಎಡವಿದರು ಎಂಬ ಅಭಿಪ್ರಾಯವಿದೆ. ಮೈತ್ರಿಯಿಂದ ಹೊರಬಂದ ಬಳಿಕ ಈ ಅಂಶವನ್ನು ಜನರ ಮುಂದಿಡಬಹುದು.
ಇದರ ಹೊರತಾಗಿಯೂ ಸರಕಾರದ ಸುಭದ್ರತೆಗಾಗಿ ಹಗಲಿರುಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಲಾಯಿತು. ಕಾನೂನು ಹೋರಾಟಕ್ಕೂ ಶಕ್ತಿ ತುಂಬಲಾಯಿತು. ವಿಶ್ವಾಸಮತದ ಸಂದರ್ಭದಲ್ಲಿ ಸದನದಲ್ಲೂ ವಿರೋಚಿತ ಹೋರಾಟ ಮಾಡಲಾಯಿತು. ನಾನಾ ಅಸ್ತ್ರ ಪ್ರಯೋಗಿಸಿ ಬಿಜೆಪಿಯನ್ನು ಘಾಸಿಗೊಳಿಸಲಾಯಿತೆಂದು ಬಿಂಬಿಸುವ ತಯಾರಿಯಲ್ಲಿ ಕಾಂಗ್ರೆಸ್ ಇದೆ.
ಸಹಜವಾಗಿಯೇ ಕಂತುಕಂತಿನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಪ್ರತಿ ದೃಶ್ಯಾವಳಿಗಳನ್ನೂ ಡಾಕ್ಯುಮೆಂಟರಿ ರೂಪದಲ್ಲಿ ಕಾಂಗ್ರೆಸ್ ತನ್ನ ಕಪಾಟಿನಲ್ಲಿ ಇಟ್ಟುಕೊಳ್ಳಲಿದೆ! ಮುಂದಿನ ಯುದ್ಧಕ್ಕೆ ಈ ‘ದಾಖಲೆ ಪತ್ರ’ಗಳೇ ತನಗೆ ಆಧಾರವಾಗಲಿವೆ ಎನ್ನುವುದು ಕಾಂಗ್ರೆಸ್ನ ಲೆಕ್ಕಾಚಾರವಾದಂತಿದೆ.
ಬಿಜೆಪಿ ದಾರಿ ಕ್ಲಿಷ್ಟಕ್ಕೆ ಸ್ಕೆಚ್
ಮೈತ್ರಿ ಸರಕಾರ ಉಳಿಸುವ ಬಹುತೇಕ ಅಸ್ತ್ರಗಳು ವಿಫಲವಾಗಿದ್ದರಿಂದ ಪವಾಡವನ್ನಷ್ಟೇ ನಿರೀಕ್ಷಿಸಬಹುದಾಗಿದೆ. ಸರಕಾರ ಉರುಳಿ ಬಿದ್ದರೆ ಕಾಂಗ್ರೆಸ್-ಜೆಡಿಎಸ್ ದೋಸ್ತಿಯೂ ಖತಂ ಆದಂತೆಯೇ. ಈ ನಡುವೆಯೂ ಬಿಜೆಪಿಯ ದಾರಿಯನ್ನು ಕ್ಲಿಷ್ಟಗೊಳಿಸಿದರೆ ತನ್ನ ಮುಂದಿನ ಹಾದಿ ಸಲೀಸಾಗುತ್ತದೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಏಕೆಂದರೆ ರೆಬಲ್ ಸ್ಟಾರ್ಗಳನ್ನೆಲ್ಲ ನೆಚ್ಚಿಕೊಂಡ ಬಿಜೆಪಿಯೂ ಬಹಳ ದಿನ ಸರಕಾರ ನಡೆಸುವುದು ಕಷ್ಟ. ಜತೆಗೆ ರಾಜಭವನದ ದುರ್ಬಳಕೆ ಆಗಿರುವುದಾಗಿಯೂ ಸದ್ದು ಮಾಡಬಹುದು. ಇಷ್ಟೆಲ್ಲ ಪ್ರಹಸನದ ಬಳಿಕ ಮುಂದಿನ ಸರದಿ ತನ್ನದೇ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಬೆಂಗಳೂರು: ಬಂಡಾಯದ ಸುನಾಮಿಗೆ ಸಿಲುಕಿ ನಡುಗುತ್ತಿರುವ ದೋಸ್ತಿ ಸರಕಾರದ ರಕ್ಷಣೆಗೆ ಜೆಡಿಎಸ್ಗಿಂತಲೂ ಹೆಚ್ಚಿನ ಉತ್ತರದಾಯಿತ್ವವನ್ನು ಕಾಂಗ್ರೆಸ್ ತೋರುತ್ತಿದೆ. ಇದಕ್ಕೆ ಕಾರಣ, ವಚನಭ್ರಷ್ಟತೆಯ ಭೀತಿ ಮತ್ತು ಅತಂತ್ರ ರಾಜಕೀಯ ಸನ್ನಿವೇಶದಲ್ಲಿ ನಾಟಕೀಯವಾಗಿ ಸಿಎಂ ಹುದ್ದೆ ಗಿಟ್ಟಿಸಬಹುದೆಂಬ ದೂರದ ಆಸೆ!
ಕಳೆದ ವಿಧಾನಸಭೆ ಚುನಾವಣೆ ಬಳಿಕ ಸ್ವಪ್ರೇರಣೆಯಿಂದ ಜೆಡಿಎಸ್ಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷ ಸದ್ಯಕ್ಕೆ ಭಾರಿ ಸಂಕಟದಲ್ಲಿದೆ. ಹಾಗಂತ ಅದನ್ನು ನೇರವಾಗಿ ಹೇಳಿಕೊಳ್ಳುವಂತಿಲ್ಲ. ಅಂದರೆ ತಾನೇ ತೋಡಿಕೊಂಡ ಖೆಡ್ಡಾದಲ್ಲಿ ಮಗುಚಿ ಬಿದ್ದಿರುವ ಕಾಂಗ್ರೆಸ್ಗೆ ಈ ಹಂತದಲ್ಲಿ ಒಂದಷ್ಟು ‘ಕಣ್ಕಟ್ ವಿದ್ಯೆ’ ಪ್ರದರ್ಶನದ ಅನಿವಾರ್ಯತೆಯಿದೆ. ಹಾಗಾಗಿ ಮೈತ್ರಿಧರ್ಮ ಪಾಲನೆಗೆ ಕೈನಾಯಕರು ಅಪೂರ್ವ ಒಗ್ಗಟ್ಟಿನೊಂದಿಗೆ ಅಖಾಡಕ್ಕೆ ಇಳಿದಂತೆ ಕಾಣುತ್ತಿದೆ. ಆದರೆ, ಇದರ ಒಳಗುಟ್ಟು ಬೇರೆಯೇ ಇದೆ!
‘‘ನಾವು ಮುಖ್ಯಮಂತ್ರಿ ಸ್ಥಾನ ಕೇಳಿರಲಿಲ್ಲ. ಕಾಂಗ್ರೆಸ್ನವರೇ ಬಂದು ನಿಮ್ಮ ಪುತ್ರನೇ ಸಿಎಂ ಆಗಬೇಕೆಂದರು,’’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹತ್ತು ಹಲವು ಬಾರಿ ಹೇಳಿದ್ದಾರೆ. ಭರ್ತಿ ೫ ವರ್ಷ ಕಾಲ ಎಚ್.ಡಿ.ಕುಮಾರಸ್ವಾಮಿ ನಾಯಕತ್ವಕ್ಕೆ ಬೇಷರತ್ ಬೆಂಬಲವೆಂದು ಕಾಂಗ್ರೆಸ್ ವರಿಷ್ಠರು ಪ್ರಾರಂಭದಲ್ಲೆ ಘೋಷಿಸಿದ್ದರು. ಈ ಸಂಬಂಧ ಒಪ್ಪಂದವೂ ಆಗಿದೆ.
ಈ ಕಾರಣದಿಂದಲೇ ತಾನೇ ಮುಂದಾಗಿ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಇದಲ್ಲದೆ ಲೋಕಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ಗೆ ದೂರಿತ್ತಿದ್ದರು. ಈ ಸರಕಾರ ಪತನದ ಹಾದಿ ಹಿಡಿಯುವುದಿದ್ದರೆ ಅದು ಸಿದ್ದು ಅವರಿಂದ ಮಾತ್ರವೆಂದು ಗೌಡರು ಎಚ್ಚರಿಸಿದ್ದರು.
ಶಾಸಕರ ರಾಜೀನಾಮೆ ಪರ್ವ ಪ್ರಾರಂಭಗೊಂಡಾಗಲೂ ಈ ಕ್ಷಿಪ್ರಕ್ರಾಂತಿಯ ಸೂತ್ರಧಾರರು ಯಾರೆಂಬ ಸುದ್ದಿಯನ್ನು ಕಾಂಗ್ರೆಸ್ನ ದಿಲ್ಲಿ ನಾಯಕರಿಗೆ ಗೌಡರು ಮುಟ್ಟಿಸಿದ್ದರು. ಹಾಗಾಗಿ ಗುಲಾಂ ನಬಿ ಆಜಾದ್ ಓಡೋಡಿ ಬಂದಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಂತೂ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ವರಿಷ್ಠರನ್ನು ಕಟ್ಟಿ ಹಾಕುವಲ್ಲಿ ಮಾಜಿ ಪ್ರಧಾನಿ ಯಶಸ್ವಿಯಾಗಿದ್ದಾರೆ. ಈ ಬಲೆಯಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡುತ್ತಿರುವ ಕೈನಾಯಕರು ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುವಂತೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ!
ನಿರೀಕ್ಷಣಾ ಜಾಮೀನು
ಜೆಡಿಎಸ್ ಸಖ್ಯ ಕಡಿದುಕೊಂಡರೆ ಸುಖವಿದೆ ಎನ್ನುವುದು ಎಐಸಿಸಿಗೂ ಈಗ ಮನವರಿಕೆಯಾಗಿ ಹೋಗಿದೆ. ಈಗಿನ ಪರಿಸ್ಥಿತಿಯಲ್ಲಿ ಹಿಂದೆ ಮುಂದೆ ನೋಡದೆ ಬೆಂಬಲ ಹಿಂಪಡೆದರೆ ಜೆಡಿಎಸ್ ಕೈಗೆ ಪುಕ್ಕಟೆ ಅಸ್ತ್ರ ಕೊಟ್ಟಂತಾಗುತ್ತದೆ. ಕಾಂಗ್ರೆಸ್ನವರು ನಂಬಿಸಿ ಕೈಕೊಟ್ಟರೆಂದು ಜೆಡಿಎಸ್ ಆಪಾದಿಸುತ್ತದೆ. ಈ ಮೈತ್ರಿ ಪರಿಣಾಮ ವಿಶೇಷವಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಸರ್ವಪತನದ ಹಾದಿಯಲ್ಲಿದೆ. ಇದರ ಮಧ್ಯೆ ವಚನಭ್ರಷ್ಟತೆಯ ಆರೋಪವೂ ಬಂದುಬಿಟ್ಟರೆ ಜೆಡಿಎಸ್ ಎದುರು ತಾನು ನಿರಾಯುಧವಾಗಬೇಕಾಗುತ್ತದೆ ಎಂಬ ಭೀತಿ ಕಾಂಗ್ರೆಸ್ಗಿದೆ.
ಹಾಗಾಗಿ ಕಟ್ಟಕಡೆಯ ಕ್ಷಣದವರೆಗೂ ಸರಕಾರ ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗಿದೆ. ವಿಶ್ವಾಸದ್ರೋಹದ ಯೋಚನೆಯನ್ನೂ ಮಾಡಿಲ್ಲವೆಂಬ ಮೆಸೇಜ್ ಪಾಸ್ ಮಾಡುವುದು ಕಾಂಗ್ರೆಸ್ನ ಅಂತರಂಗದ ತಂತ್ರ. ಅದಕ್ಕಾಗಿ ಇಷ್ಟೊಂದು ಸರ್ಕಸ್. ಇದೊಂದು ಬಗೆಯ ‘ನಿರೀಕ್ಷಣಾ ಜಾಮೀನು’ ಇದ್ದಂತಿದೆ.
ಇನ್ನು ಸೂಪರ್ ಸಿಎಂ ಎಚ್.ಡಿ.ರೇವಣ್ಣ ನಡವಳಿಕೆಯಿಂದಲೇ ಈ ಸರಕಾರ ಸಮಸ್ಯೆಗೆ ಸಿಲುಕಿತು. ಶಾಸಕರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಸಿಎಂ ಕುಮಾರಸ್ವಾಮಿ ಅವರೂ ಎಡವಿದರು ಎಂಬ ಅಭಿಪ್ರಾಯವಿದೆ. ಮೈತ್ರಿಯಿಂದ ಹೊರಬಂದ ಬಳಿಕ ಈ ಅಂಶವನ್ನು ಜನರ ಮುಂದಿಡಬಹುದು.
ಇದರ ಹೊರತಾಗಿಯೂ ಸರಕಾರದ ಸುಭದ್ರತೆಗಾಗಿ ಹಗಲಿರುಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಲಾಯಿತು. ಕಾನೂನು ಹೋರಾಟಕ್ಕೂ ಶಕ್ತಿ ತುಂಬಲಾಯಿತು. ವಿಶ್ವಾಸಮತದ ಸಂದರ್ಭದಲ್ಲಿ ಸದನದಲ್ಲೂ ವಿರೋಚಿತ ಹೋರಾಟ ಮಾಡಲಾಯಿತು. ನಾನಾ ಅಸ್ತ್ರ ಪ್ರಯೋಗಿಸಿ ಬಿಜೆಪಿಯನ್ನು ಘಾಸಿಗೊಳಿಸಲಾಯಿತೆಂದು ಬಿಂಬಿಸುವ ತಯಾರಿಯಲ್ಲಿ ಕಾಂಗ್ರೆಸ್ ಇದೆ.
ಸಹಜವಾಗಿಯೇ ಕಂತುಕಂತಿನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಪ್ರತಿ ದೃಶ್ಯಾವಳಿಗಳನ್ನೂ ಡಾಕ್ಯುಮೆಂಟರಿ ರೂಪದಲ್ಲಿ ಕಾಂಗ್ರೆಸ್ ತನ್ನ ಕಪಾಟಿನಲ್ಲಿ ಇಟ್ಟುಕೊಳ್ಳಲಿದೆ! ಮುಂದಿನ ಯುದ್ಧಕ್ಕೆ ಈ ‘ದಾಖಲೆ ಪತ್ರ’ಗಳೇ ತನಗೆ ಆಧಾರವಾಗಲಿವೆ ಎನ್ನುವುದು ಕಾಂಗ್ರೆಸ್ನ ಲೆಕ್ಕಾಚಾರವಾದಂತಿದೆ.
ಬಿಜೆಪಿ ದಾರಿ ಕ್ಲಿಷ್ಟಕ್ಕೆ ಸ್ಕೆಚ್
ಮೈತ್ರಿ ಸರಕಾರ ಉಳಿಸುವ ಬಹುತೇಕ ಅಸ್ತ್ರಗಳು ವಿಫಲವಾಗಿದ್ದರಿಂದ ಪವಾಡವನ್ನಷ್ಟೇ ನಿರೀಕ್ಷಿಸಬಹುದಾಗಿದೆ. ಸರಕಾರ ಉರುಳಿ ಬಿದ್ದರೆ ಕಾಂಗ್ರೆಸ್-ಜೆಡಿಎಸ್ ದೋಸ್ತಿಯೂ ಖತಂ ಆದಂತೆಯೇ. ಈ ನಡುವೆಯೂ ಬಿಜೆಪಿಯ ದಾರಿಯನ್ನು ಕ್ಲಿಷ್ಟಗೊಳಿಸಿದರೆ ತನ್ನ ಮುಂದಿನ ಹಾದಿ ಸಲೀಸಾಗುತ್ತದೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಏಕೆಂದರೆ ರೆಬಲ್ ಸ್ಟಾರ್ಗಳನ್ನೆಲ್ಲ ನೆಚ್ಚಿಕೊಂಡ ಬಿಜೆಪಿಯೂ ಬಹಳ ದಿನ ಸರಕಾರ ನಡೆಸುವುದು ಕಷ್ಟ. ಜತೆಗೆ ರಾಜಭವನದ ದುರ್ಬಳಕೆ ಆಗಿರುವುದಾಗಿಯೂ ಸದ್ದು ಮಾಡಬಹುದು. ಇಷ್ಟೆಲ್ಲ ಪ್ರಹಸನದ ಬಳಿಕ ಮುಂದಿನ ಸರದಿ ತನ್ನದೇ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.