ಆ್ಯಪ್ನಗರ

ಮೊನ್ನೆ ಹೋಗಿ ಸಾಯ್ರಿ! ಇಂದು ನಾನು ಮಾತ್ರ ಬದುಕಬೇಕು! ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಕಿಡಿ

ಮೊನ್ನೆ ಹೋಗಿ ಸಾಯ್ರಿ ಅಂದರು, ಇಂದು ನಾನು ಮಾತ್ರ ಬದುಕಬೇಕು! ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಚಿವರ ಬಗ್ಗೆ ಏನು ಹೇಳಿದೆ

Vijaya Karnataka Web 9 May 2021, 8:12 pm
ಬೆಂಗಳೂರು: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮೊನ್ನೆ - ಹೋಗಿ ಸಾಯ್ರಿ ಇಂದು - ನೀವ್ ಬದುಕೋದು ನನಗೆ ಅನಗತ್ಯ, ನಾನು ಮಾತ್ರ ಬದುಕಬೇಕು! ಎಂದು ಕತ್ತಿ ಹೇಳಿಕೆಯನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದೆ.
Vijaya Karnataka Web Umesh Katti


ಇದು ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಉಮೇಶ್ ಕತ್ತಿ ಅವರ ಮಾತುಗಳು. ರಾಜ್ಯ ಗಂಭೀರ ಸ್ಥಿತಿ ಎದುರಿಸುತ್ತಿರುವಾಗ ಬೇಜವಾಬ್ದಾರಿತನದಲ್ಲಿ ಬಿಜೆಪಿಯ ಇಡೀ ಸಚಿವ ಸಂಪುಟ ಕಾಲ ಕಳೆಯುತ್ತಿದೆ.ಇದು ತಮಾಷೆಯ ಸಂದರ್ಭವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕೊರೊನಾ ಮೂರನೇ ಅಲೆ ಬಂದಾಗ ಯಾರು ಉಳಿತಾರೋ ಬಿಡ್ತಾರೋ, ನಾನಂತೂ ಉಳೀಬೇಕು ಎಂದ ಸಚಿವ ಉಮೇಶ್ ಕತ್ತಿ!

ಕೆಲ ದಿನಗಳ ಹಿಂದೆ ಪರಿತರ ಕಡಿತಕ್ಕೆ ಫೋನ್ ಮಾಡಿ ಪ್ರಶ್ನಿಸಿದ್ದ ರೈತ ಮುಖಂಡರೊಬ್ಬರಿಗೆ ಹೋಗಿ ಸಾಯಿರಿ ಎಂಬ ಮಾತನ್ನು ಉಮೇಶ್ ಕತ್ತಿ ಅಂದಿದ್ದರು. ಸಚಿವರ ಈ ಹೇಳಿಕೆಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದರು.

ಇದೀಗ ಕೊರೊನಾ ಮೂರನೇ ಅಲೆ ಬರುತ್ತೆ.ನಾವು-ನೀವು ಎಲ್ಲರು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೂ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದು ಬಾಗಲಕೋಟೆಯ ಬನಹಟ್ಟಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಬನಹಟ್ಟಿಯಲ್ಲಿ ಕೋವಿಡ್ ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಸಭೆ ನಡೆಸಿದರು. ಈ ವೇಳೆ ಮಾತನಾಡುವಾಗ ಸಚಿವ ಉಮೇಶ್ ಕತ್ತಿ ಈ ರೀತಿ ಹಾಸ್ಯ ಚಟಾಕಿ ಹಾರಿಸಿದರು. ಸಚಿವರ ಈ ಹೇಳಿಕೆ ಹಾಸ್ಯವಾದರು ಇದೀಗ ಟೀಕೆಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ