ಆ್ಯಪ್ನಗರ

ಸಿ.ಡಿ ವಿಷಯ ಏನದು? ಉತ್ತರ ನೀಡುವಂತೆ ಬಿಜೆಪಿಗೆ ಕಾಂಗ್ರೆಸ್ ಆಗ್ರಹ

ರಾಜ್ಯ ರಾಜಕಾರಣದಲ್ಲಿ ಸಿ.ಡಿ ವಿಚಾರ ಇದೀಗ ಬಹಿರಂಗವಾಗಿ ಚರ್ಚೆಗೆ ಬಂದಿದೆ. ಏನದು ಸಿ.ಡಿ ವಿಚಾರ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಈ ಕುರಿತಾಗಿ ಉತ್ತರ ನೀಡುವಂತೆ ಬಿಜೆಪಿ ಪಕ್ಷಕ್ಕೆ ಆಗ್ರಹಿಸಿದೆ. ಈ ವಿಚಾರವಾಗಿ ಮತ್ತಷ್ಟು ಮಾಹಿತಿ ಇಲ್ಲಿದೆ.

Vijaya Karnataka Web 14 Jan 2021, 12:01 pm
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೆರೆಮರೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದ ಸಿ.ಡಿ ವಿಚಾರ ಇದೀಗ ಬಹಿರಂಗಗೊಂಡಿದೆ. ಬಿಜೆಪಿ ಶಾಸಕ ಯತ್ನಾಳ್‌ ಸಿ.ಡಿ ಕುರಿತಾಗಿ ಆರೋಪ ಮಾಡಿದ ಬೆನ್ನಲ್ಲೇ ಸಿ.ಡಿ ವಿಷಯ ಏನದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Vijaya Karnataka Web bjp and congress
Representative image


ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಶಾಸಕರು ಬ್ಲಾಕ್ ಮೇಲ್ ಮಾಡಿದ್ದು ಯಾರನ್ನ, ಬ್ಲಾಕ್ಮೇಲ್ ಮಾಡುವಂತಹ ಹಗರಣ ಏನದು? ಸಿ.ಡಿ ವಿಷಯ ಏನದು? ಎಂದು ಪ್ರಶ್ನಿಸಿದೆ.


ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಏನು? ಉಮೇಶ್ ಕತ್ತಿ ಕೊಟ್ಟ ಉತ್ತರ ಹೀಗಿದೆ

ಅಲ್ಲದೆ, ಮಂತ್ರಿಗಿರಿಗಾಗಿ ವಿಜಯೇಂದ್ರರಿಗೆ ಹಣ ನೀಡಲಾಗುತ್ತದೆ ಎಂದರೆ ಅಧಿಕಾರಿಗಳು, ಶಾಸಕರು,ಗುತ್ತಿಗೆದಾರರು ಇನ್ನೆಷ್ಟು ನೀಡಬೇಕು? ಬಿಜೆಪಿಗರೇ ಆರೋಪಿಸಿದ ಈ ಗಂಭೀರ ವಿಷಯಗಳ ಬಗ್ಗೆ ರಾಜ್ಯದ ಜನತೆಗೆ ಬಿಜೆಪಿ ಪಕ್ಷ ಉತ್ತರಿಸಲೇಬೇಕು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಗ್ರಹಿಸಿದೆ.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಸಿ.ಡಿ ಭಯ ಹುಟ್ಟಿಸಿ ಹಾಗೂ ಹಣ ನೀಡಿ ಕೆಲವರು ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ ಯಾವ ಶಾಕಸರು ಸಿ.ಡಿಯನ್ನು ತೋರಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಲಿಲ್ಲ. ಅಷ್ಟೇ ಅಲ್ಲದೆ ವಿಜಯೇಂದ್ರ ಅವರಿಗೆ ಹಣವನ್ನು ನೀಡುವ ಮೂಲಕ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದೂ ಆರೋಪ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ