ಬೆಂಗಳೂರು: ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ, ಇದು ಬೊಮ್ಮಾಯಿ ಮಾಡೆಲ್ ಸಾಧನೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್,ಅತಿವೃಷ್ಟಿ, ಕೋವಿಡ್ನಂತಹ ಕ್ಲಿಷ್ಟ ಸಂದರ್ಭದಲ್ಲಿ ರೈತರನ್ನು ಕಡೆಗಣಿಸಿದ ಪರಿಣಾಮವಿದು ಎಂದಿದೆ. ದೇಶಾದ್ಯಂತ 2021 ನೇ ಸಾಲಿನಲ್ಲಿ 10881 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಂದಿ ಸಾವಿಗೆ ಶರಣಾದರೆ 2 ನೇ ಸ್ಥಾನ ಕರ್ನಾಟಕದ್ದಾಗಿದೆ ಎಂಬ ವರದಿ ಬಹಿರಂಗವಾಗಿದೆ.
ರೈತರ ಆತ್ಮಹತ್ಯೆ 25 ವರ್ಷದಲ್ಲೇ ಕನಿಷ್ಠ; ಹದವಾದ ಮಳೆಯಿಂದ ಅನುಕೂಲ, ಸರಕಾರದ ಯೋಜನೆಗಳಿಂದಲೂ ನೆರವು!
ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಶೂನ್ಯವಾಗಿದೆ. ಸಾವಿಗೆ ಶರಣಾದ ಕೃಷಿಗರ ಪೈಕಿ 19.9% ಕರ್ನಾಟಕದವರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್,ಬೆಲೆ ಏರಿಕೆಯ ಹೊರೆ ಹೊರಿಸಿದ ಡಬಲ್ ಇಂಜಿನ್ ಸರ್ಕಾರಗಳೇ ಈ ಸಾವುಗಳಿಗೆ ಹೊಣೆ. ರೈತರಿಗೆ ಕಾಂಗ್ರೆಸ್ ಕೃಷಿ ಭಾಗ್ಯ ಕೊಟ್ಟರೆ, ಬಿಜೆಪಿ ಸಾವಿನ ಭಾಗ್ಯ ಕೊಟ್ಟಿದೆ ಎಂದು ಟೀಕಿಸಿದೆ.
ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ?
ಇದೇ ಸಂದರ್ಭದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪ ಇರುವ ಸಚಿವ ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸರ್ಕಾರಿ ಭೂಮಿ ಒತ್ತುವರಿ ಮಾಡಿ ಮನೆಯಲ್ಲ, ಅರಮನೆಯನ್ನೇ ನಿರ್ಮಿಸಿರುವ ಸಚಿವ ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ? ಎಂದು ಸಿಎಂ ಬೊಮ್ಮಾಯಿ ಅವರಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್, ಕೂಡಲೇ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಿ. ಧ್ವನಿ ಎತ್ತಿದ ವ್ಯಕ್ತಿಗೆ ರಕ್ಷಣೆ ನೀಡಿ ಹಾಗೂ ಅಕ್ರಮ ನಡೆಸಿದ ಸಚಿವರನ್ನು ವಜಾಗೊಳಿಸಿ. ಈ ಮೂಲಕ ನಿಮ್ಮ 'ಪಾರದರ್ಶಕ' ಆಡಳಿತವನ್ನು ತೋರಿಸಿ ಎಂದು ಸವಾಲು ಹಾಕಿದೆ.
ರೈತರ ಆತ್ಮಹತ್ಯೆ 25 ವರ್ಷದಲ್ಲೇ ಕನಿಷ್ಠ; ಹದವಾದ ಮಳೆಯಿಂದ ಅನುಕೂಲ, ಸರಕಾರದ ಯೋಜನೆಗಳಿಂದಲೂ ನೆರವು!
ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಶೂನ್ಯವಾಗಿದೆ. ಸಾವಿಗೆ ಶರಣಾದ ಕೃಷಿಗರ ಪೈಕಿ 19.9% ಕರ್ನಾಟಕದವರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್,ಬೆಲೆ ಏರಿಕೆಯ ಹೊರೆ ಹೊರಿಸಿದ ಡಬಲ್ ಇಂಜಿನ್ ಸರ್ಕಾರಗಳೇ ಈ ಸಾವುಗಳಿಗೆ ಹೊಣೆ. ರೈತರಿಗೆ ಕಾಂಗ್ರೆಸ್ ಕೃಷಿ ಭಾಗ್ಯ ಕೊಟ್ಟರೆ, ಬಿಜೆಪಿ ಸಾವಿನ ಭಾಗ್ಯ ಕೊಟ್ಟಿದೆ ಎಂದು ಟೀಕಿಸಿದೆ.
ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ?
ಇದೇ ಸಂದರ್ಭದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪ ಇರುವ ಸಚಿವ ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸರ್ಕಾರಿ ಭೂಮಿ ಒತ್ತುವರಿ ಮಾಡಿ ಮನೆಯಲ್ಲ, ಅರಮನೆಯನ್ನೇ ನಿರ್ಮಿಸಿರುವ ಸಚಿವ ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ? ಎಂದು ಸಿಎಂ ಬೊಮ್ಮಾಯಿ ಅವರಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್, ಕೂಡಲೇ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಿ. ಧ್ವನಿ ಎತ್ತಿದ ವ್ಯಕ್ತಿಗೆ ರಕ್ಷಣೆ ನೀಡಿ ಹಾಗೂ ಅಕ್ರಮ ನಡೆಸಿದ ಸಚಿವರನ್ನು ವಜಾಗೊಳಿಸಿ. ಈ ಮೂಲಕ ನಿಮ್ಮ 'ಪಾರದರ್ಶಕ' ಆಡಳಿತವನ್ನು ತೋರಿಸಿ ಎಂದು ಸವಾಲು ಹಾಕಿದೆ.