ಆ್ಯಪ್ನಗರ

ರಾಹುಲ್ ಹೆಸರು ಹೇಳಿದ್ರೆ ಮತ ಬರಲ್ಲ, ಅದ್ಕೆ ಕೇಸರಿ ಶಾಲು ಧರಿಸುವ ಕಾಂಗ್ರೆಸಿಗರು: ಅಶೋಕ್

ರಾಹುಲ್‌ ಹೆಸರು ಹೇಳಿದರೆ ಮತ ಬರುವುದಿಲ್ಲ ಎಂಬ ಅನುಮಾನ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದ್ದು, ಅದಕ್ಕಾಗಿ ಮಂಗಳೂರಿನಲ್ಲಿ ಕೇಸರಿ ಶಾಲು ಹೊದ್ದು ...

Vijaya Karnataka 11 Apr 2019, 12:23 pm
ಬೆಂಗಳೂರು : ರಾಹುಲ್‌ ಹೆಸರು ಹೇಳಿದರೆ ಮತ ಬರುವುದಿಲ್ಲ ಎಂಬ ಅನುಮಾನ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದ್ದು, ಅದಕ್ಕಾಗಿ ಮಂಗಳೂರಿನಲ್ಲಿ ಕೇಸರಿ ಶಾಲು ಹೊದ್ದು ಕಾಂಗ್ರೆಸ್‌ ಪ್ರಚಾರ ಮಾಡಲಾಗುತ್ತಿದೆ ಎಂದು ಲೋಕಸಭೆ ಚುನಾವಣಾ ಸಮಿತಿ ಸಂಚಾಲಕ ಆರ್‌. ಅಶೋಕ ಆರೋಪಿಸಿದರು.
Vijaya Karnataka Web 1004-2-2-KSG_01 (12)


ಕೇಂದ್ರ ಸರಕಾರದ ಸಾಧನೆಯ ಪ್ರಚಾರ ಮಾಡಲು 54 ಎಲ್‌ಇಡಿ ಪರದೆ ವ್ಯವಸ್ಥೆಯುಳ್ಳ ವಾಹನಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳೀಧರ ರಾವ್‌ ಹಾಗೂ ಲೋಕಸಭೆ ಚುನಾವಣಾ ಸಮಿತಿ ಸಂಚಾಲಕ ಆರ್‌. ಅಶೋಕ ಬುಧವಾರ ಚಾಲನೆ ನೀಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರಕ್ಕಾಗಿ ಕೇಸರಿ ಶಾಲು ಹಾಕಿಕೊಳ್ಳುವ ತಂತ್ರಗಳನ್ನು ಮಾಡುತ್ತಿದ್ದಾರೆ. ದೋಸ್ತಿ ಪಕ್ಷಗಳ ಅಸಮಾಧಾನ ಒಳಗೊಳಗೆ ಹೆಚ್ಚಾಗುತ್ತಿದೆ. ಇದು ಆ ಪಕ್ಷಗಳಿಗೆ ಮಗ್ಗಲುಮುಳ್ಳಾಗಿದೆ. ಕಾಂಗ್ರೆಸ್‌ ಪಕ್ಷದಲ್ಲೇ ಅವರ ಸ್ಥಿತಿ ಹೇಗಿದೆ ಎಂದರೆ ಪ್ರಣಾಳಿಕೆಯಲ್ಲಿ ರಾಹುಲ್‌ ಗಾಂಧಿ ಫೋಟೊವನ್ನು ಸ್ಟಾಂಪ್‌ ಅಳತೆಗೆ ಇಳಿಸಲಾಗಿದೆ,''ಎಂದು ವ್ಯಂಗ್ಯ ಮಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನನ್ನದು ಎಂದು ಮಾಜಿ ಡಿಸಿಎಂ ಆರ್‌.ಅಶೋಕ ಹೇಳಿದ್ದಾರೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಹ ವಕ್ತಾರರಾದ ಎ.ಎಚ್‌. ಆನಂದ್‌, ಎಸ್‌. ಪ್ರಕಾಶ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ