ಆ್ಯಪ್ನಗರ

2019ರ ಸಾರ್ವತ್ರಿಕ ಚುನಾವಣೆ ತನಕ ಮಾತಿಗಿರಲಿ ಬಿಗಿ ರೇಖೆ: ಅನಂತಕುಮಾರ್‌

ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಕೆಲವರು ತಮ್ಮ ಮಾತುಗಳಿಗೆ ಗಡಿರೇಖೆ ಹಾಕಿಕೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ.

Vijaya Karnataka 30 Jun 2018, 7:59 am
ಬೆಂಗಳೂರು: ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಕೆಲವರು ತಮ್ಮ ಮಾತುಗಳಿಗೆ ಗಡಿರೇಖೆ ಹಾಕಿಕೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ.
Vijaya Karnataka Web anathakumar


ಬಿಜೆಪಿ ಕಾರ್ಯಕಾರಿಣಿ ಸಮಾರೋಪದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.

''ಹಳ್ಳಿ ಕಡೆ ದನ ಮೇಯಿಸಲು ಕರೆದೊಯ್ಯುವಾಗ ಕೆಲವು ದನಗಳ ಬಾಯಿಗೆ ಬುಟ್ಟಿ ಕಟ್ಟುತ್ತಾರೆ. ಎಲ್ಲೆಂದರೆಲ್ಲಿ ಬಾಯಿ ಹಾಕುತ್ತವೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾರೆ. ಆದರೆ ಹಿಂಡಿನಲ್ಲಿ ಇರುವ ದನಗಳೆಲ್ಲವೂ ಈ ರೀತಿ ಮಾಡುವುದಿಲ್ಲ. ಅದೇ ರೀತಿ ರಾಜಕೀಯದಲ್ಲೂ ಕೆಲವರು ಇರುತ್ತಾರೆ. ತಮಗೆ ಬೇಕಾಗಿದ್ದನ್ನು ಸಮಾಜದ ಮೇಲೆ ಹೇರುವುದಕ್ಕೆ ಮುಂದಾಗುತ್ತಾರೆ. ನಮ್ಮ ಪಕ್ಷದಲ್ಲೂ ಅಂಥವರಿದ್ದಾರೆ. ಚುನಾವಣೆ ಮುಗಿಯುವವರೆಗಾದರೂ ಅಂಥವರು ಗಡಿರೇಖೆ ಹಾಕಿಕೊಳ್ಳಬೇಕು,'' ಎಂದು ಯಾರ ಹೆಸರನ್ನೂ ಹೇಳದೇ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ