ಆ್ಯಪ್ನಗರ

ಕೊರೊನಾ ಮುನ್ನೆಚ್ಚರಿಕೆ: ಮಸೀದಿಗಳಲ್ಲಿ 15 ನಿಮಿಷ ಮಾತ್ರ ಪ್ರಾರ್ಥನೆ

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮುಂದಿನ ಮೂರು ವಾರಗಳ ಕಾಲ ಮಸೀದಿಯಲ್ಲಿ ಪ್ರಾರ್ಥನೆಯ ಅವಧಿ ಕೇವಲ 15 ನಿಮಿಷಕ್ಕೆ ಸೀಮಿತ. ಪ್ರಾರ್ಥನೆಗೆ ಸಾರ್ವಜನಿಕ ಮೈಕ್‌ ಬಳಸದಂತೆ ಸೂಚನೆಯನ್ನೂ ನೀಡಲಾಗಿದೆ.

Vijaya Karnataka 18 Mar 2020, 7:57 pm

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿನ ಪ್ರಾರ್ಥನೆಯ ಅವಧಿಯನ್ನು 15 ನಿಮಿಷಕ್ಕೆ ಕಡಿತಗೊಳಿಸಲಾಗಿದೆ. ಜತೆಗೆ ಉಸಿರಾಟದ ತೊಂದರೆ ಎದುರಿಸುತ್ತಿರುವ ವ್ಯಕ್ತಿಗಳು ಮಸೀದಿ, ಮದರಸ, ದರ್ಗಾಗಳತ್ತ ಸುಳಿಯದೆ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕೆಂದು ವಕ್ಫ್‌ ಮಂಡಳಿ ಮನವಿ ಮಾಡಿದೆ.
Vijaya Karnataka Web Masjid


ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ವೈರಸ್‌ ವಿರುದ್ಧ ಕೇವಲ ಸರಕಾರ ಅಥವಾ ಇತರೆ ಇಲಾಖೆಗಳು ಮಾತ್ರ ಹೋರಾಡಿದರೆ ಸಾಲದು ಪ್ರತಿಯೊಬ್ಬ ನಾಗರಿಕನ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಸೋಂಕು ಹರಡದಂತೆ ಮಸೀದಿ, ದರ್ಗಾ ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳಲ್ಲಿ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳಿಗೂ ರಾಜ್ಯ ವಕ್ಫ್‌ ಮಂಡಲಿ ಸೂಚಿಸಿದೆ. ಈ ಸಂಬಂಧ ವಕ್ಫ್‌ ಮಂಡಳಿಯ ಅಧ್ಯಕ್ಷ ಡಾ.ಮಹ್ಮದ್‌ ಯೂಸುಫ್‌ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕೊರೊನಾ ಮುನ್ನೆಚ್ಚರಿಕೆ: ಮಾರ್ಚ್‌ 31ರ ತನಕ ಕರ್ನಾಟಕ ಬಂದ್‌

-ಮುಂದಿನ ಮೂರು ವಾರಗಳ ಕಾಲ ಮಸೀದಿಯಲ್ಲಿ ಪ್ರಾರ್ಥನೆಯ ಅವಧಿ ಕೇವಲ 15 ನಿಮಿಷಕ್ಕೆ ಸೀಮಿತ. ಪ್ರಾರ್ಥನೆಗೆ ಸಾರ್ವಜನಿಕ ಮೈಕ್‌ ಬಳಸದಂತೆ ಸೂಚನೆ.

-ಮಸೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು, ಕಾರ್ಪೆಟ್‌, ಪ್ರಾರ್ಥನೆ ಮ್ಯಾಟ್‌ಗಳನ್ನು ಸ್ವಚ್ಚವಾಗಿಡುವುದು.

- ಮಸೀದಿಗಳಲ್ಲಿನ ಶೌಚಾಲಯ, ಮೂತ್ರಾಲಯಗಳನ್ನು ಸ್ವಚ್ಚವಾಗಿಡಲು ನಿತ್ಯ ತೊಳೆಯುವುದು.

-ನಿತ್ಯ ಪ್ರಾರ್ಥನೆಗಾಗಿ ಆಗಮಿಸುವ ಮುಸ್ಲಿಮರಿಗೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸುವುದು ಜತೆಗೆ ತಮ್ಮದೇ ಪ್ರಾರ್ಥನೆ ಕ್ಯಾಪ್‌ ಬಳಸಬೇಕು.

-ಮಸೀದಿಗಳಲ್ಲಿರುವ ಟವಲ್‌ಗಳು ಹಾಗೂ ಪ್ರಾರ್ಥನೆ ಕ್ಯಾಪ್‌ಗಳನ್ನು ತೆರವುಗೊಳಿಸುವುದು.

-ಸುನ್ಹಾ ಹಾಗೂ ನಫೀಲ್‌ ಪ್ರಾರ್ಥನೆಗಳನ್ನು ಮನೆಯಲ್ಲಿ ಮಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ