ಆ್ಯಪ್ನಗರ

ಅನರ್ಹರು ಗಂಗಾಜಲ ಹಾಕಿದರೂ ಶುದ್ಧವಾಗಲ್ಲ, ಕಾಂಗ್ರೆಸ್‌ನಲ್ಲೇ ಕೊರೊನಾ ವೈರಸ್‌!

ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಆರ್‌.ಬಿ.ತಿಮ್ಮಾಪುರ, ಗೋಲಿಬಾರ್‌ ಮಾಡಿದ ಸರಕಾರಗಳು ಉಳಿದಿಲ್ಲವೆಂದರು. ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‌ನ ನಾರಾಯಣಸ್ವಾಮಿ, ''ಇದೂ ಕೂಡ ಅನರ್ಹರ ಸರಕಾರ. ಜನರು ಮುಂದೆ ಪಾಠ ಕಲಿಸುತ್ತಾರೆ,'' ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಸಚಿವರಾದ ಬಿ.ಸಿ.ಪಾಟೀಲ್‌, ಎಸ್‌.ಟಿ.ಸೋಮಶೇಖರ್‌, ''ಈ ರೀತಿ ಮಾತನಾಡುವುದು ಸೂಕ್ತವಲ್ಲ. ನಾಲಿಗೆ ಮೇಲೆ ಹಿಡಿತವಿರಲಿ,'' ಎಂದು ತಿರುಗೇಟು ಕೊಟ್ಟರು.

Vijaya Karnataka 19 Feb 2020, 10:33 pm

ಬೆಂಗಳೂರು: ಅರ್ಹ ಸಚಿವರಿಗೆ ಅನರ್ಹರೆಂದು ಕಾಂಗ್ರೆಸ್‌ ಸದಸ್ಯರು ಕೆಣಕಿದ್ದರಿಂದ ಪರಿಷತ್‌ನಲ್ಲಿ ಜಟಾಪಟಿ ನಡೆಯಿತು. ಜತೆಗೆ ಕಾಂಗ್ರೆಸ್‌ನಲ್ಲೇ ದೊಡ್ಡ ದೊಡ್ಡ ಕೊರೊನಾ ವೈರಸ್‌ಗಳಿದ್ದಾರೆ ಎಂಬ ಟೀಕೆ ವ್ಯಕ್ತವಾಯಿತು.
Vijaya Karnataka Web Vidhana Parishad


ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಆರ್‌.ಬಿ.ತಿಮ್ಮಾಪುರ, ಗೋಲಿಬಾರ್‌ ಮಾಡಿದ ಸರಕಾರಗಳು ಉಳಿದಿಲ್ಲವೆಂದರು. ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‌ನ ನಾರಾಯಣಸ್ವಾಮಿ, ''ಇದೂ ಕೂಡ ಅನರ್ಹರ ಸರಕಾರ. ಜನರು ಮುಂದೆ ಪಾಠ ಕಲಿಸುತ್ತಾರೆ,'' ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಸಚಿವರಾದ ಬಿ.ಸಿ.ಪಾಟೀಲ್‌, ಎಸ್‌.ಟಿ.ಸೋಮಶೇಖರ್‌, ''ಈ ರೀತಿ ಮಾತನಾಡುವುದು ಸೂಕ್ತವಲ್ಲ. ನಾಲಿಗೆ ಮೇಲೆ ಹಿಡಿತವಿರಲಿ,'' ಎಂದು ತಿರುಗೇಟು ಕೊಟ್ಟರು. ''ಜನತಾ ನ್ಯಾಯಾಲಯದಲ್ಲಿ ಗೆದ್ದಿದ್ದೇವೆ,'' ಎಂದು ಸಮರ್ಥಿಸಿಕೊಂಡರು.

"ಏನೇ ಆದರೂ ನೀವು ಅನರ್ಹರಾಗಿದ್ದವರು. ಎಷ್ಟೇ ಗಂಗಾಜಲ ಹಾಕಿದರೂ ಶುದ್ಧವಾಗುವುದಿಲ್ಲ," ಎಂದು ನಾರಾಯಣಸ್ವಾಮಿ ಟಾಂಗ್‌ ಕೊಟ್ಟರು. ದನಿಗೂಡಿಸಿದ ಐವಾನ್‌ ಡಿಸೋಜ, "ನಿಮ್ಮ ಅನರ್ಹತೆಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ," ಎಂದರು. "ನಮಗೆ 12 ಸೀಟು ಬಂದಿದೆ. ನಿಮ್ಮ ಯೋಗ್ಯತೆಗೆ ಬಂದಿರುವುದು 2 ಸೀಟು ಮಾತ್ರ," ಎಂದು ಸೋಮಶೇಖರ್‌ ಗರಂ ಆಗಿಯೇ ಹೇಳಿದರು.

ಮಂಗಳೂರು ಗೋಲಿಬಾರ್ ಬೆನ್ನಲ್ಲೇ ನನಗೆ ಬೆದರಿಕೆ ಕರೆ ಬಂದಿತ್ತು! ಸದನಕ್ಕೆ ಬೊಮ್ಮಾಯಿ ಸ್ಫೋಟಕ ಮಾಹಿತಿ

ಈ ಹಂತದಲ್ಲಿಈ ಚರ್ಚೆಗೆ ಮತ್ತೊಂದು ತಿರುವು ನೀಡಿದ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌, ''ಹೊರಗಿನಿಂದ ಬಂದವರು ವೈರಸ್‌ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೇ ಹೇಳಿದ್ದಾರೆ. ಹಾಗಿದ್ದರೆ ಇವರೇನು ಕೊರೊನಾ ವೈರಸ್ಸಾ," ಎಂದು ಪ್ರಶ್ನಿಸಿದರು. "ಯಾರೂ ಆ ರೀತಿ ಹೇಳಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ," ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದರು. ಈ ವೇಳೆ ಖಡಕ್‌ ಜವಾಬು ಕೊಟ್ಟ ಬಿ.ಸಿ.ಪಾಟೀಲ್‌, ''ಕಾಂಗ್ರೆಸ್‌ನಲ್ಲಿ ದೊಡ್ಡ ದೊಡ್ಡ ಕೊರೊನಾ ವೈರಸ್‌ ಇರುವುದರಿಂದಲೇ ನಾವು ಬಿಟ್ಟು ಬಂದಿದ್ದೇವೆ,'' ಎಂದರು.

‘ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿ ಬಿರಿಯಾನಿ ತಿಂದಿದ್ದಾರೆ’ ಖಾದರ್ ಮಾತಿಗೆ ಸದನದಲ್ಲಿ ಕೋಲಾಹಲ

ಇಷ್ಟರ ಬಳಿಕವೂ ಬಿಡದ ನಾರಾಯಣಸ್ವಾಮಿ, "ನೀವು ನಮ್ಮ ಸ್ನೇಹಿತರು. ನಿಮಗೆ ಅನ್ಯಾಯವಾಗಬಾರದೆಂದು ಹೇಳುತ್ತಿದ್ದೇನೆ," ಎಂದು ರಾಗವೆಳೆದರು. "ನೀವು ನಮ್ಮ ದುಷ್ಮನ್‌ಗಳು. ಕಾಂಗ್ರೆಸ್‌ ಕ್ಯಾನ್ಸರ್‌ ಇದ್ದಂತೆ. ಜನತಾ ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳಿ,'' ಎಂದು ಸೋಮಶೇಖರ್‌ ತಾಕೀತು ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ