ಆ್ಯಪ್ನಗರ

ರಾಜ್ಯದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೊನಾ..! 1526 ಪಾಸಿಟಿವ್‌‌, 25 ಸಾವಿರಕ್ಕಿಂತ ಹೆಚ್ಚಾದ ಸಕ್ರಿಯ ಕೇಸ್‌

ಹಬ್ಬದ ಋತು ಮುಗಿದ ಬಳಿಕ ವೈರಸ್‌ ಏರಿಕೆಯಾಗುವ ಆತಂಕದಲ್ಲಿದ್ದ ರಾಜ್ಯದಲ್ಲಿ ಕೊರೊನಾ ಇಳಿಕೆಯ ಹಾದಿಯಲ್ಲಿದೆ. ಆದರೆ, ನಿಧಾನವಾಗಿ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಜನರ ನಿದ್ದೆಗೆಡಿಸಿದೆ. ಚೇತರಿಕೆ ಪ್ರಮಾಣವೂ ಕೂಡ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಗಿಂತ ಕಡಿಮೆಯಾಗಿರುವುದು ಸೋಂಕಿನ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ.

Vijaya Karnataka Web 27 Nov 2020, 9:28 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಇಳಿಕೆಯ ಹಾದಿಯಲ್ಲಿದ್ದರೂ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಶುಕ್ರವಾರ 1,526 ಹೊಸ ಪಾಸಿಟಿವ್‌ ಕೇಸ್‌ಗಳು ಕಂಡುಬಂದಿದ್ದು, ಚೇತರಿಕೆ ಪ್ರಮಾಣವೂ ಸಹ ಹೊಸ ಪ್ರಕರಣಗಳಿಗಿಂತ ಕಡಿಮೆಯಾಗಿದೆ. ಇದರ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1451 ಜನ ಗುಣಮುಖರಾಗಿದ್ದರೆ, 12 ಜನ ಕೊರೊನಾಗೆ ಬಲಿಯಾಗಿದ್ದಾರೆ.
Vijaya Karnataka Web coronavirus in karnataka 1526 positive cases reported in last 24 hours
ರಾಜ್ಯದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೊನಾ..! 1526 ಪಾಸಿಟಿವ್‌‌, 25 ಸಾವಿರಕ್ಕಿಂತ ಹೆಚ್ಚಾದ ಸಕ್ರಿಯ ಕೇಸ್‌


ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 8,81,086ಕ್ಕೆ ಏರಿದೆ. ಇದರಲ್ಲಿ 8,43,950 ಜನ ಗುಣಮುಖರಾಗಿದ್ದರೆ, 11,738 ಕೊರೊನಾ ವೈರಸ್‌ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ. 25,379 ಪ್ರಕರಣಗಳು ರಾಜ್ಯದಲ್ಲಿ ಇನ್ನೂ ಸಕ್ರಿಯವಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.1.34 ಇದ್ದರೆ, ಮರಣ ಪ್ರಮಾಣ ಶೇ.0.78ಕ್ಕೆ ಇಳಿದಿದೆ.

ಶುಕ್ರವಾರವೂ ಕೂಡ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿದಿದ್ದು, ಕಳೆದ 24 ಗಂಟೆಗಳಲ್ಲಿ 808 ಹೊಸ ಪಾಸಿಟಿವ್‌ ಕೇಸ್‌ಗಳು ಸಿಲಿಕಾನ್‌ ಸಿಟಿಯಲ್ಲಿ ಕಂಡುಬಂದಿವೆ. ಇದರೊಂದಿಗೆ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,67,885ಕ್ಕೆ ಏರಿದೆ. ಇದರಲ್ಲಿ 3,44,687 ಜನ ಚೇತರಿಸಿಕೊಂಡಿದ್ದು, 19,083 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4114 ಜನ ಬೆಂಗಳೂರಿನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ತಗ್ಗಿದ ಕೊರೊನಾ ಅಬ್ಬರ..! ಬೆಂಗಳೂರಲ್ಲಿ 844, ಮೈಸೂರಲ್ಲಿ 101 ಕೇಸ್‌

ಬೆಂಗಳೂರು ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ 05, ಬಳ್ಳಾರಿ 28, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 31, ಬೀದರ್ 05, ಚಾಮರಾಜನಗರ 12, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 27, ಚಿತ್ರದುರ್ಗ 37, ದಕ್ಷಿಣ ಕನ್ನಡ 66, ದಾವಣಗೆರೆ 26, ಧಾರವಾಡ 11 ಹಾಗೂ ಗದಗದಲ್ಲಿ 02 ಹೊಸ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ತಗ್ಗಿದ ಕೊರೊನಾ ಆತಂಕ..! 1,870 ಹೊಸ ಕೇಸ್‌; ಬೆಂಗಳೂರಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌

ಹಾಸನದಲ್ಲಿ 31, ಹಾವೇರಿ 50, ಕಲಬುರಗಿ 15, ಕೊಡಗು 16, ಕೋಲಾರ 20, ಕೊಪ್ಪಳ 01, ಮಂಡ್ಯ 27, ಮೈಸೂರು 75, ರಾಯಚೂರು 22, ರಾಮನಗರ 12, ಶಿವಮೊಗ್ಗ 24, ತುಮಕೂರು 63, ಉಡುಪಿ 29, ಉತ್ತರ ಕನ್ನಡ 33, ವಿಜಯಪುರ 12 ಮತ್ತು ಯಾದಗಿರಿಯಲ್ಲಿ 04 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಕರುನಾಡಲ್ಲಿ ಕರಗುತ್ತಿದೆ ಕೊರೊನಾ..! ಮತ್ತೆ ಇಳಿದ ಹೊಸ ಪಾಸಿಟಿವ್‌, ಚೇತರಿಕೆ ಪ್ರಮಾಣವೂ ಕುಸಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ