ಆ್ಯಪ್ನಗರ

ಕರುನಾಡಲ್ಲಿ ಕರಗುತ್ತಿದೆ ಕೊರೊನಾ..! ಮತ್ತೆ ಇಳಿದ ಹೊಸ ಪಾಸಿಟಿವ್‌, ಚೇತರಿಕೆ ಪ್ರಮಾಣವೂ ಕುಸಿತ

ಕರ್ನಾಟಕದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿದಿದ್ದು, ವೈರಸ್‌ನ ಹಾವು-ಏಣಿ ಆಟ ಮುಂದುವರೆದಿದೆ. 1630 ಹೊಸ ಪಾಸಿಟಿವ್‌ ಕೇಸ್‌ಗಳು ಆತಂಕ ಕಡಿಮೆ ಮಾಡಿದ್ದರೆ, ಚೇತರಿಕೆ ಪ್ರಮಾಣ ಕುಸಿದಿರುವುದು ಆತಂಕ ಹೆಚ್ಚಿಸಿದೆ. ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರ ಆಸುಪಾಸಿನಲ್ಲೇ ಇದೆ.

Vijaya Karnataka Web 25 Nov 2020, 7:59 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಮಂಗಳವಾರ 1,870 ಹೊಸ ಕೇಸ್‌ಗಳು ಪತ್ತೆಯಾಗಿದ್ದ ರಾಜ್ಯದಲ್ಲಿ ಬುಧವಾರ 1630 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಆದರೆ, ಚೇತರಿಕೆ ಪ್ರಮಾಣವೂ ಮತ್ತೆ ಕುಸಿದಿದ್ದು, ಕೇವಲ 1333 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು, ಕಳೆದ 24 ಗಂಟೆಗಳಲ್ಲಿ 19 ಜನ ಸೋಂಕಿನ ಕಾರಣಕ್ಕಾಗಿ ಮೃತಪಟ್ಟಿದ್ದಾರೆ.
Vijaya Karnataka Web coronavirus


ಹೊಸ ಸೋಂಕಿತರೊಂದಿಗೆ ಕರ್ನಾಟಕದಲ್ಲಿ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 8,78,055ಕ್ಕೆ ಏರಿದೆ. ಇದರಲ್ಲಿ 8,41,432 ಜನ ಗುಣಮುಖರಾಗಿದ್ದರೆ, 11,714 ಕೊರೊನಾ ವೈರಸ್‌ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ. ಇನ್ನೂ 24,890 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.1.33ಕ್ಕೆ ಇಳಿದಿದ್ದರೆ, ಮರಣ ಪ್ರಮಾಣ ಶೇ.1.16ಕ್ಕೆ ಏರಿದೆ.

ಬುಧವಾರ ಕೂಡ ಬೆಂಗಳೂರಿನಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 916 ಹೊಸ ಪಾಸಿಟಿವ್‌ ಕೇಸ್‌ಗಳು ರಾಜಧಾನಿಯಲ್ಲಿ ಕಂಡುಬಂದಿವೆ. ಇದರೊಂದಿಗೆ ಉದ್ಯಾನ ನಗರಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,66,233ಕ್ಕೆ ಏರಿದೆ. ಇದರಲ್ಲಿ 3,43,771 ಜನ ಚೇತರಿಸಿಕೊಂಡಿದ್ದು, 18,360 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4101 ಜನ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ತಗ್ಗಿದ ಕೊರೊನಾ ಆತಂಕ..! 1,870 ಹೊಸ ಕೇಸ್‌; ಬೆಂಗಳೂರಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌

ಬೆಂಗಳೂರು ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ 05, ಬಳ್ಳಾರಿ 24, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 51, ಬೀದರ್ 03, ಚಾಮರಾಜನಗರ 12, ಚಿಕ್ಕಬಳ್ಳಾಪುರ 04, ಚಿಕ್ಕಮಗಳೂರು 18, ಚಿತ್ರದುರ್ಗ 70, ದಕ್ಷಿಣ ಕನ್ನಡ 39, ದಾವಣಗೆರೆ 38, ಧಾರವಾಡ 24 ಹಾಗೂ ಗದಗದಲ್ಲಿ 06 ಹೊಸ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ಇಳಿಯುತ್ತಿದೆ ಕೊರೊನಾ ಅಬ್ಬರ..! 13 ಸಾವು, 1,704 ಹೊಸ ಕೇಸ್‌

ಹಾಸನದಲ್ಲಿ 37, ಹಾವೇರಿ 33, ಕಲಬುರಗಿ 27, ಕೊಡಗು 05, ಕೋಲಾರ 19, ಕೊಪ್ಪಳ 04, ಮಂಡ್ಯ 38, ಮೈಸೂರು 61, ರಾಯಚೂರು 26, ರಾಮನಗರ 10, ಶಿವಮೊಗ್ಗ 11, ತುಮಕೂರು 44, ಉಡುಪಿ 17, ಉತ್ತರ ಕನ್ನಡ 37, ವಿಜಯಪುರ 19 ಮತ್ತು ಯಾದಗಿರಿಯಲ್ಲಿ 08 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದಲ್ಲಿ ಇಳಿಕೆ, ಬೆಂಗಳೂರಲ್ಲಿ ಏರಿಕೆ ಕಂಡ ಕೊರೊನಾ..! 25,000ಕ್ಕಿಂತ ಕಡಿಮೆಯಾದ ಸಕ್ರಿಯ ಕೇಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ