ಆ್ಯಪ್ನಗರ

ಮತ್ತೆ ನಿಧಾನವಾಗಿ ಹೆಚ್ಚುತ್ತಿದೆ ಕೊರೊನಾ ಅಬ್ಬರ‌..! ಬೆಂಗಳೂರಲ್ಲಿ ಮತ್ತೊಮ್ಮೆ ಸಾವಿರದ ಗಡಿ ದಾಟಿದ ಸೋಂಕು

ಕರ್ನಾಟಕದಲ್ಲಿ ನಿಧಾನವಾಗಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಎರಡನೇ ಅಲೆಯ ಆತಂಕ ಮನೆಮಾಡಿದೆ. ಗುರುವಾರ 1849 ಕೇಸ್‌ಗಳು ಕಂಡುಬಂದಿವೆ. ಇದರ ಜೊತೆಗೆ ಹೊಸ ಪ್ರಕರಣಗಳಿಗಿಂತಲೂ ಕಡಿಮೆ ಚೇತರಿಕೆ ದಾಖಲಾಗಿದೆ.

Vijaya Karnataka Web 19 Nov 2020, 9:06 pm
ಬೆಂಗಳೂರು: ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮತ್ತೆ ಏರುತ್ತಿದೆ. ಬುಧವಾರ 1,791 ಪಾಸಿಟಿವ್‌ ಪ್ರಕರಣ ಕಂಡುಬಂದಿದ್ದರೆ, ಗುರುವಾರ 1849 ಕೇಸ್‌ಗಳು ಕಂಡುಬಂದಿವೆ. ಇದರ ಜೊತೆಗೆ ಚೇತರಿಸಿಕೊಂಡವರ ಪ್ರಮಾಣವೂ ಕುಸಿದಿದ್ದು, ಹೊಸ ಪ್ರಕರಣಗಳಿಗಿಂತಲೂ ಕಡಿಮೆ ಚೇತರಿಕೆ ದಾಖಲಾಗಿದೆ. 1,800 ಸೋಂಕಿತರು ಗುಣಮುಖರಾಗಿದ್ದರೆ, 26 ಜನ ವೈರಸ್‌ಗೆ ಬಲಿಯಾಗಿದ್ದಾರೆ.
Vijaya Karnataka Web coronavirus in karnataka 1849 positive cases reported in last 24 hours
ಮತ್ತೆ ನಿಧಾನವಾಗಿ ಹೆಚ್ಚುತ್ತಿದೆ ಕೊರೊನಾ ಅಬ್ಬರ‌..! ಬೆಂಗಳೂರಲ್ಲಿ ಮತ್ತೊಮ್ಮೆ ಸಾವಿರದ ಗಡಿ ದಾಟಿದ ಸೋಂಕು


ಹೊಸ ಪಾಸಿಟಿವ್‌ ಪ್ರಕರಣಗಳೊಂದಿಗೆ ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 8,67,780ಕ್ಕೆ ಏರಿದೆ. ಇದರಲ್ಲಿ 8,30,988 ಸೋಂಕಿತರು ಚೇತರಿಸಿಕೊಂಡಿದ್ದರೆ, 11,604 ಕೊರೊನಾ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ. ಒಟ್ಟು 25,169 ಪ್ರಕರಣಗಳು ಸಕ್ರಿಯವಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.1.56ರಷ್ಟಿದ್ದರೆ, ಮರಣ ಪ್ರಮಾಣ ಶೇ.1.41ರಷ್ಟಿದೆ.

ಬೆಂಗಳೂರಿನಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಗುರುವಾರ 1048 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಉದ್ಯಾನ ನಗರಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,60,587ಕ್ಕೆ ಏರಿದೆ. ಇದರಲ್ಲಿ 3,38,688 ಜನ ಚೇತರಿಸಿಕೊಂಡಿದ್ದು, 17,856 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4042 ರಾಜಧಾನಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಮತ್ತೆ ಹೆಚ್ಚುತ್ತಿದೆ ಕೊರೊನಾ ಅಬ್ಬರ‌..! 1,700+ ಪಾಸಿಟಿವ್, 25 ಸಾವಿರಕ್ಕೆ ಸಕ್ರಿಯ ಪ್ರಕರಣ

ಬೆಂಗಳೂರು ಬಿಟ್ಟರೆ ಬಾಗಲಕೋಟೆಯಲ್ಲಿ 08, ಬಳ್ಳಾರಿ 08, ಬೆಳಗಾವಿ 37, ಬೆಂಗಳೂರು ಗ್ರಾಮಾಂತರ 30, ಬೀದರ್ 04, ಚಾಮರಾಜನಗರ 12, ಚಿಕ್ಕಬಳ್ಳಾಪುರ 33, ಚಿಕ್ಕಮಗಳೂರು 10, ಚಿತ್ರದುರ್ಗ 29, ದಕ್ಷಿಣ ಕನ್ನಡ 54, ದಾವಣಗೆರೆ 28, ಧಾರವಾಡ 23 ಹಾಗೂ ಗದಗದಲ್ಲಿ 05 ಹೊಸ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ತಗ್ಗಿದ ಕೊರೊನಾ ಅಬ್ಬರ..! 9 ಜಿಲ್ಲೆಗಳಲ್ಲಿ ಎರಡಂಕಿ ದಾಟದ ವೈರಸ್‌

ಹಾಸನದಲ್ಲಿ 54, ಹಾವೇರಿ 05, ಕಲಬುರಗಿ 13, ಕೊಡಗು 17, ಕೋಲಾರ 20, ಕೊಪ್ಪಳ 07, ಮಂಡ್ಯ 36, ಮೈಸೂರು 54, ರಾಯಚೂರು 12, ರಾಮನಗರ 10, ಶಿವಮೊಗ್ಗ 53, ತುಮಕೂರು 103, ಉಡುಪಿ 19, ಉತ್ತರ ಕನ್ನಡ 38, ವಿಜಯಪುರ 78 ಮತ್ತು ಯಾದಗಿರಿಯಲ್ಲಿ 01 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಜಗತ್ತನ್ನು ನಡುಗಿಸಿದ ಕೊರೊನಾ‌ಗೆ ಭರ್ತಿ ಒಂದು ವರ್ಷ..! ವೈರಸ್‌ಗೆ ಲಸಿಕೆಯಿನ್ನೂ ಸಿಕ್ಕಿಲ್ಲ.. ಮಾಸ್ಕೇ ಎಲ್ಲ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ