ಆ್ಯಪ್ನಗರ

ರಾಜ್ಯದಲ್ಲಿ ತಗ್ಗಿದ ಕೊರೊನಾ ಆತಂಕ..! 1,870 ಹೊಸ ಕೇಸ್‌; ಬೆಂಗಳೂರಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌

ಹಬ್ಬದ ಋತು ಮಕ್ತಾಯದ ನಂತರ ಕೊರೊನಾ ವೈರಸ್‌ ಏರಿಕೆಯಾಗುತ್ತಿದೆ ಎಂಬ ಆತಂಕ ಕರ್ನಾಟಕಕ್ಕೆ ಕಡಿಮೆಯಾಗಿದ್ದು, ರಾಜ್ಯದಲ್ಲಿ 2000ಕ್ಕಿಂತ ಕಡಿಮೆ ಪ್ರಕರಣಗಳು ದಿನಕ್ಕೆ ವರದಿಯಾಗುತ್ತಿವೆ. ಮಂಗಳವಾರ 1,870 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ, 1,949 ಜನ ಚೇತರಿಸಿಕೊಂಡಿದ್ದಾರೆ.

Vijaya Karnataka Web 24 Nov 2020, 9:31 pm
ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 1,870 ಹೊಸ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. 1,949 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 17 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಿರುವುದನ್ನು ಸ್ಪಷ್ಟಪಡಿಸುತ್ತಿದ್ದು, ಹಬ್ಬದ ಋತು ಮುಗಿದ ನಂತರ ಸೋಂಕು ಹೆಚ್ಚಾಗುವ ಆತಂಕ ತಗ್ಗಿದೆ.
Vijaya Karnataka Web coronavirus


ಹೊಸ ಸೋಂಕಿತರೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,76,425ಕ್ಕೆ ಏರಿದೆ. ಇದರಲ್ಲಿ 8,40,099 ಜನ ಗುಣಮುಖರಾಗಿದ್ದರೆ, 11,695 ಜನ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನೂ 24,612 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.1.58ರಷ್ಟಿದ್ದರೆ, ಮರಣ ಪ್ರಮಾಣ ಶೇ.0.91ರಷ್ಟಿದೆ.

ಮಂಗಳವಾರ ಬೆಂಗಳೂರಿನಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. 927 ಹೊಸ ಪಾಸಿಟಿವ್‌ ಕೇಸ್‌ಗಳು ಕಳೆದ 24 ಗಂಟೆಗಳಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಪತ್ತೆಯಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿಒಟ್ಟು ಸೋಂಕಿತರ ಸಂಖ್ಯೆ 3,65,317ಕ್ಕೆ ಏರಿದೆ. ಇದರಲ್ಲಿ 3,43,169 ಜನ ಚೇತರಿಸಿಕೊಂಡಿದ್ದು, 18,057 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4090 ಜನ ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ಅಸುನೀಗಿದ್ದಾರೆ.

ರಾಜ್ಯದಲ್ಲಿ ಇಳಿಯುತ್ತಿದೆ ಕೊರೊನಾ ಅಬ್ಬರ..! 13 ಸಾವು, 1,704 ಹೊಸ ಕೇಸ್‌

ಬೆಂಗಳೂರು ಹೊರತುಪಡಿಸಿದರೆ ಮೈಸೂರಲ್ಲಿ ಮಾತ್ರ ಅಧಿಕ ಪ್ರಕರಣಗಳು ಕಂಡುಬಂದಿವೆ. ಬಾಗಲಕೋಟೆಯಲ್ಲಿ 02, ಬಳ್ಳಾರಿ 21, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 89, ಬೀದರ್ 14, ಚಾಮರಾಜನಗರ 13, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 15, ಚಿತ್ರದುರ್ಗ 41, ದಕ್ಷಿಣ ಕನ್ನಡ 31, ದಾವಣಗೆರೆ 26, ಧಾರವಾಡ 15 ಹಾಗೂ ಗದಗದಲ್ಲಿ 11 ಹೊಸ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ಇಳಿಕೆ, ಬೆಂಗಳೂರಲ್ಲಿ ಏರಿಕೆ ಕಂಡ ಕೊರೊನಾ..! 25,000ಕ್ಕಿಂತ ಕಡಿಮೆಯಾದ ಸಕ್ರಿಯ ಕೇಸ್‌

ಹಾಸನದಲ್ಲಿ 35, ಹಾವೇರಿ 27, ಕಲಬುರಗಿ 41, ಕೊಡಗು 17, ಕೋಲಾರ 24, ಕೊಪ್ಪಳ 04, ಮಂಡ್ಯ 37, ಮೈಸೂರು 159, ರಾಯಚೂರು 34, ರಾಮನಗರ 08, ಶಿವಮೊಗ್ಗ 35, ತುಮಕೂರು 95, ಉಡುಪಿ 18, ಉತ್ತರ ಕನ್ನಡ 17, ವಿಜಯಪುರ 41 ಮತ್ತು ಯಾದಗಿರಿಯಲ್ಲಿ 10 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ