ಆ್ಯಪ್ನಗರ

ರಾಜ್ಯದಲ್ಲಿ ಕೊರೊನಾ ನಾಗಾಲೋಟ..! ಮತ್ತೆ ವೈರಸ್‌ ದ್ವಿಶತಕ, ಮೂವರು ಬಲಿ

ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಉರುವಾರ ಮತ್ತೆ 204 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ.

Vijaya Karnataka Web 11 Jun 2020, 7:15 pm
ಬೆಂಗಳೂರು: ಬುಧವಾರ 120 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದ ರಾಜ್ಯದಲ್ಲಿ ಕೊರೊನಾ ಪ್ರಭಾವ ಇಳಿಮುಖವಾಗುತ್ತಿದೆ ಎಂಬ ಭರವಸೆ ಜನರಲ್ಲಿ ಮೂಡಿತ್ತು. ಆದರೆ, ಗುರುವಾರ ಮತ್ತೆ 204 ಹೊಸ ಸೋಂಕಿತರು ಕರ್ನಾಟಕದಲ್ಲಿ ಕಂಡುಬಂದಿದ್ದಾರೆ. ಇದರೊಂದಿಗೆ ಕೊರೊನಾ ಆರ್ಭಟ ರಾಜ್ಯದಲ್ಲಿ ಮುಂದುವರೆಯುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ 204 ಹೊಸ ಕೇಸ್‌ಗಳೊಂದಿಗೆ ಸೋಂಕಿತರ ಸಂಖ್ಯೆ 6,245ಕ್ಕೆ ಏರಿದೆ.
Vijaya Karnataka Web coronavirus in karnataka 204 new positive cases reported in last 24 hours
ರಾಜ್ಯದಲ್ಲಿ ಕೊರೊನಾ ನಾಗಾಲೋಟ..! ಮತ್ತೆ ವೈರಸ್‌ ದ್ವಿಶತಕ, ಮೂವರು ಬಲಿ


ಗುರುವಾರ 104 ಸೋಂಕಿತರು ಬಿಡುಗಡೆಯಾಗಿದ್ದು, ಒಟ್ಟು 2976 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಮತ್ತೆ 3 ಜನ ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಇನ್ನು, 3195 ಪ್ರಕರಣಗಳು ಕರ್ನಾಟಕದಲ್ಲಿ ಸಕ್ರಿಯವಾಗಿವೆ. ಯಾದಗಿರಿಯಲ್ಲಿ 66 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಗುರುವಾರ ಅತಿಹೆಚ್ಚು ಕೇಸ್‌ಗಳು ಪತ್ತೆಯಾದಂತಾಗಿದೆ.

ಇನ್ನು, ಉಡುಪಿ 22, ಬೆಂಗಳೂರು ನಗರ 17, ಕಲಬುರಗಿ 16, ರಾಯಚೂರು 15, ಬೀದರ್‌ 14, ದಾವಣಗೆರೆ 09, ಕೋಲಾರ 06, ಮೈಸೂರು ಹಾಗೂ ರಾಮನಗರದಲ್ಲಿ ತಲಾ 05, ವಿಜಯಪುರ 04, ಬಾಗಲಕೋಟೆ ಮತ್ತು ಉತ್ತರ ಕನ್ನಡದಲ್ಲಿ ತಲಾ 03, ದಕ್ಷಿಣ ಕನ್ನಡ, ಹಾಸನ ಹಾಗೂ ಧಾರವಾಡದಲ್ಲಿ ತಲಾ 02, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿವೆ.

​ಯಾದಗಿರಿಯಲ್ಲಿ ಮತ್ತೆ ಕೊರೊನಾ ಆರ್ಭಟ

ಯಾದಗಿರಿಯಲ್ಲಿ ಗುರುವಾರ ಮತ್ತೆ 66 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಕೊರೊನಾ ಆರ್ಭಟ ಮುಂದುವರೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 735ಕ್ಕೆ ಏರಿಕೆಯಾಗಿದೆ. ಇದರಲ್ಲಿ 108 ಜನ ಸೋಂಕಿತರು ಗುಣಮುಖರಾಗಿದ್ದು, ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು, 626 ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಹೊಸದಾಗಿ ಪತ್ತೆಯಾದ ಸೋಂಕಿತರ ಪೈಕಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ. 37 ಮಹಿಳೆಯರು ಹಾಗೂ 29 ಪುರುಷರಿಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಗುರುವಾರ ಯಾವುದೇ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿಲ್ಲ.

​ಉಡುಪಿಯಲ್ಲಿ 22 ಪಾಸಿಟಿವ್‌ ಕೇಸ್‌

ಮಹಾರಾಷ್ಟ್ರ ಪ್ರಭಾವದಿಂದ ಉಡುಪಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕೊರೊನಾ ಕಳೆದೆರಡು ದಿನಗಳಿಂದ ತಣ್ಣಗಾಗಿತ್ತು. ಆದರೆ, ಗುರುವಾರ ಮತ್ತೆ 22 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1000ದ ಸಮೀಪಕ್ಕೆ ಬಂದು ನಿಂತಿದೆ. ಹೊಸ ಸೋಂಕಿತರ ಪೈಕಿ ಮೂರು ಜನರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದ್ದು, ಉಳಿದ 19 ಜನ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. 11 ಮಹಿಳೆಯರು ಹಾಗೂ 11 ಪುರುಷರಿಗೆ ಸೋಂಕು ದೃಢವಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 969 ಸೋಂಕಿತರು ಪತ್ತೆಯಾಗಿದ್ದಾರೆ. ಗುರುವಾರ ಮತ್ತೆ 22 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 349ಕ್ಕೆ ಏರಿಕೆಯಾಗಿದೆ. ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು, 619 ಪ್ರಕರಣಗಳು ಸಕ್ರಿಯವಾಗಿವೆ.

ಬೆಂಗಳೂರಿನಲ್ಲಿ ಸ್ವಲ್ಪ ತಗ್ಗಿದ ಕೊರೊನಾ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 42 ಪಾಸಿಟಿವ್‌ಪ ಪ್ರಕರಣಗಳು ಕಂಡುಬಂದು ಸಿಲಿಕಾನ್‌ ಸಿಟಿಯ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಗುರುವಾರ ಈ ಪ್ರಮಾಣ ತಗ್ಗಿದ್ದು, ಕೇವಲ 17 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 581ಕ್ಕೆ ಏರಿದೆ. ಇದರಲ್ಲಿ 299 ಜನ ಬಿಡುಗಡೆಯಾಗಿದ್ದು, 23 ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು 258 ಸಕ್ರಿಯ ಪ್ರಕರಣಗಳು ಸಿಲಿಕಾನ್‌ ಸಿಟಿಯಲ್ಲಿವೆ. 6 ಐಎಲ್‌ಐ ಹಿನ್ನೆಲೆ, ಮೂವರು ಮಹಾರಾಷ್ಟ್ರದಿಂದ ಬಂದಿದ್ದು, ತಮಿಳುನಾಡಿನಿಂದ ಇಬ್ಬರು, ರೋಗಿ ಸಂಖ್ಯೆ 5327ರ ಸಂಪರ್ಕದಿಂದ ಒಬ್ಬರಿಗೆ, ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಹೊಂದಿದವರಿಗೆ ಸೋಂಕು ದೃಢವಾಗಿದೆ. ನಾಲ್ವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಕಲಬುರಗಿ, ರಾಯಚೂರು, ಬೀದರ್‌ನಲ್ಲೂ ಕೊರೊನಾ ಅಬ್ಬರ

ಬಿಸಿಲ ನಾಡಿನ ಜಿಲ್ಲೆಗಳಾದ ಕಲಬುರಗಿ, ರಾಯಚೂರು ಹಾಗೂ ಬೀದರ್‌ನಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಕ್ರಮವಾಗಿ 16, 15, 14 ಪಾಸಿಟಿವ್‌ ಕೇಸ್‌ಗಳು ಮೂರು ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಕಲಬುರಗಿಯಲ್ಲಿ 18 ಪಾಸಿಟಿವ್‌ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 796ಕ್ಕೆ ಏರಿದೆ. 15 ಕೇಸ್‌ಗಳೊಂದಿಗೆ ರಾಯಚೂರಿನಲ್ಲಿ ಒಟ್ಟು ಪಾಸಿಟಿವ್‌ ಪ್ರಕರಣಗಳು 374ಕ್ಕೆ ಏರಿಕೆಯಾಗಿದೆ. ಇನ್ನು, ಬೀದರ್‌ನಲ್ಲಿ 14 ಪ್ರಕರಣಗಳೊಂದಿಗೆ ಒಟ್ಟು ಕೇಸ್‌ಗಳು 298ಕ್ಕೆ ಹೆಚ್ಚಿದೆ. ಬೀದರ್‌ನಲ್ಲಿ 30 ಜನ ಬಿಡುಗಡೆಯಾಗಿದ್ದು, ಇದುವರೆಗೂ 181 ಜನ ಗುಣಮುಖರಾಗಿದ್ದಾರೆ.

ಯಾವ ಜಿಲ್ಲೆ..? ಎಷ್ಟು ಸೋಂಕಿತರು..?

ರಾಜ್ಯದ 6245 ಸೋಂಕಿತರ ಪೈಕಿ ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ಗಮನಿಸುವುದಾದರೆ, ಉಡುಪಿ (969), ಕಲಬುರಗಿ (796), ಯಾದಗಿರಿ (735), ಬೆಂಗಳೂರು ನಗರ (581), ರಾಯಚೂರು (374), ಮಂಡ್ಯ (334), ಬೆಳಗಾವಿ (302), ಬೀದರ್‌ (298), ದಾವಣಗೆರೆ (223), ವಿಜಯಪುರ (221), ಹಾಸನ (216), ದಕ್ಷಿಣ ಕನ್ನಡ (216), ಚಿಕ್ಕಬಳ್ಳಾಪುರ (152), ಮೈಸೂರು (104), ಉತ್ತರ ಕನ್ನಡ (99), ಬಾಗಲಕೋಟೆ (99), ಶಿವಮೊಗ್ಗ (83), ಬಳ್ಳಾರಿ (71), ಧಾರವಾಡ (70), ಗದಗ (49), ಚಿತ್ರದುರ್ಗ (40), ಬೆಂಗಳೂರು ಗ್ರಾಮಾಂತರ (37), ಕೋಲಾರ (36), ತುಮಕೂರು (34), ಹಾವೇರಿ (22), ಚಿಕ್ಕಮಗಳೂರು (19), ಕೊಪ್ಪಳ (13), ರಾಮನಗರ (12), ಕೊಡಗು (03), ಚಾಮರಾಜನಗರ (01) ಹಾಗೂ ಇತರೆ (34) ಸೋಂಕಿತರು ಕಂಡು ಬಂದಿದ್ದಾರೆ.

ಮತ್ತೆ 3 ಬಲಿ, ಸಾವಿನ ಸಂಖ್ಯೆ 72ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾಗೆ ಮತ್ತೆ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಐಎಲ್‌ಐ ಹಾಗೂ ಲಿವರ್‌ ಸಮಸ್ಯೆ ಹಿನ್ನೆಲೆಯಲ್ಲಿ ಜೂನ್‌ 07ರಂದು ಬೆಂಗಳೂರಿನ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದು, ಜೂನ್‌ 10ರಂದು ಮೃತಪಟ್ಟಿದ್ದಾರೆ. ಜೂನ್‌ 9ರಂದು ಐಎಲ್‌ಐ ಹಿನ್ನೆಲೆಯೊಂದಿಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ರಾಯಚೂರಿನಲ್ಲಿ 28 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದು, ಬೀದರ್‌ ಪ್ರಯಾಣದ ಹಿನ್ನೆಲೆ ಹೊಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ