ಆ್ಯಪ್ನಗರ

ರಾಜ್ಯದಲ್ಲಿ ಮತ್ತೆ ಇಳಿದ ಕೊರೊನಾ ಅಬ್ಬರ..! 30 ಸಾವಿರದಿಂದ ಕೆಳಗಿಳಿದ ಸಕ್ರಿಯ ಪ್ರಕರಣ

ಕರ್ನಾಟಕದಲ್ಲಿ ಕೊರೊನಾ ವೈರಸ್ ಗ್ರಾಫ್‌ ಕೆಳಗೆ ಇಳಿದಿದೆ. ಗುರುವಾರ 2,116 ಹೊಸ ಪಾಸಿಟಿವ್‌ ಕೇಸ್‌ಗಳು ಕಂಡುಬಂದಿದ್ದು, ಚೇತರಿಕೆ ಪ್ರಮಾಣ ಮತ್ತೆ ಏರಿಕೆಯಾಗಿರುವುದು ಆತಂಕ ಕಡಿಮೆ ಮಾಡಿದೆ.

Vijaya Karnataka Web 12 Nov 2020, 9:27 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಮತ್ತೆ ಇಳಿಕೆಯ ಹಾದಿಯಿಡಿದಿದೆ. ಗುರುವಾರ 2,116 ಹೊಸ ಪಾಸಿಟಿವ್‌ ಕೇಸ್‌ಗಳು ಕಂಡುಬಂದಿದ್ದು, ಚೇತರಿಕೆ ಪ್ರಮಾಣ ಮತ್ತೆ ಏರಿಕೆಯಾಗಿರುವುದು ಆತಂಕ ಕಡಿಮೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 2,116 ಮಂದಿ ಗುಣಮುಖರಾಗಿದ್ದು, 21 ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ.
Vijaya Karnataka Web coronavirus in karnataka 2116 positive cases reported in last 24 hours
ರಾಜ್ಯದಲ್ಲಿ ಮತ್ತೆ ಇಳಿದ ಕೊರೊನಾ ಅಬ್ಬರ..! 30 ಸಾವಿರದಿಂದ ಕೆಳಗಿಳಿದ ಸಕ್ರಿಯ ಪ್ರಕರಣ


ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,55,912ಕ್ಕೆ ಏರಿದೆ. ಇದರಲ್ಲಿ 8,14,949 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,474ಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರದಿಂದ ಕೆಳಗಿಳಿದಿದೆ. ಒಟ್ಟು 29,470 ಪ್ರಕರಣಗಳು ಸಕ್ರಿಯವಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್‌ ಶೇ.1.83ರಷ್ಟಿದ್ದರೆ, ಶೇ.0.99ರಷ್ಟು ಮರಣ ಪ್ರಮಾಣವಿದೆ.

ಬೆಂಗಳೂರಿನಲ್ಲಿ ಗುರುವಾರ ಮತ್ತೆ ಪ್ರಕರಣಗಳ ಸಂಖ್ಯೆ ಇಳಿದಿದ್ದು, 1069 ಪಾಸಿಟಿವ್‌ ಕೇಸ್‌ಗಳು ಉದ್ಯಾನ ನಗರಿಯಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,54,215ಕ್ಕೆ ಏರಿದೆ. ಇದರಲ್ಲಿ 3,32,287 ಜನ ಚೇತರಿಸಿಕೊಂಡಿದ್ದು, 17,942 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 3985 ಜನ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯದ ಕೊರೊನಾ ಕೇಸ್‌ಗಳಲ್ಲಿ ಕೊಂಚ ಏರಿಕೆ..! ಚೇತರಿಕೆ ಪ್ರಮಾಣದಲ್ಲಿಯೂ ಕುಸಿತ

ಬೆಂಗಳೂರು ಹೊರತುಪಡಿಸಿ ಬಾಗಲಕೋಟೆಯಲ್ಲಿ 14, ಬಳ್ಳಾರಿ 41, ಬೆಳಗಾವಿ 54, ಬೆಂಗಳೂರು ಗ್ರಾಮಾಂತರ 43, ಬೀದರ್ 03, ಚಾಮರಾಜನಗರ 12, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 37, ಚಿತ್ರದುರ್ಗ 41, ದಕ್ಷಿಣ ಕನ್ನಡ 53, ದಾವಣಗೆರೆ 29, ಧಾರವಾಡ 18 ಹಾಗೂ ಗದಗದಲ್ಲಿ 05 ಹೊಸ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ಇಳಿದ ಕೊರೊನಾ ಗ್ರಾಫ್‌..! ಬಹಳ ದಿನಗಳ ಬಳಿಕ 2 ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌

ಇನ್ನು, ಹಾಸನದಲ್ಲಿ 100, ಹಾವೇರಿ 06, ಕಲಬುರಗಿ 51, ಕೊಡಗು 08, ಕೋಲಾರ 18, ಕೊಪ್ಪಳ 28, ಮಂಡ್ಯ 74, ಮೈಸೂರು 115, ರಾಯಚೂರು 09, ರಾಮನಗರ 12, ಶಿವಮೊಗ್ಗ 51, ತುಮಕೂರು 80, ಉಡುಪಿ 31, ಉತ್ತರ ಕನ್ನಡ 32, ವಿಜಯಪುರ 51 ಮತ್ತು ಯಾದಗಿರಿಯಲ್ಲಿ 07 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯಕ್ಕೆ ಶುಕ್ರವಾರದ ಕೊರೊನಾ ಸಿಹಿ-ಕಹಿ..! ಪಾಸಿಟಿವ್‌, ಚೇತರಿಕೆ ಎರಡರಲ್ಲೂ ಇಳಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ