ಆ್ಯಪ್ನಗರ

ರಾಜ್ಯದಲ್ಲಿ ಇಳಿದ ಕೊರೊನಾ ವೈರಸ್‌..! ಸತತ 2ನೇ ದಿನ 4 ಸಾವಿರಕ್ಕಿಂತ ಕಡಿಮೆ ಕೇಸ್‌

ಕರ್ನಾಟಕದಲ್ಲಿ ಕೊರೊನಾ ವೈರಸ್‌ ಆತಂಕ ದಿನೇ ದಿನೇ ಕಡಿಮೆಯಾಗುತ್ತಿದೆ. ಸತತ ಎರಡನೇ ದಿನ 4 ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 3,146 ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ.

Vijaya Karnataka Web 28 Oct 2020, 9:56 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸತತ ಎರಡನೇ ದಿನ 4 ಸಾವಿರಕ್ಕಿಂತ ಕಡಿಮೆ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 3,146 ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ. 7,384 ಜನ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 55 ಜನ ವೈರಸ್‌ನಿಂದ ಅಸುನೀಗಿದ್ದಾರೆ.
Vijaya Karnataka Web coronavirus in karnataka 3146 positive cases reported in last 24 hours
ರಾಜ್ಯದಲ್ಲಿ ಇಳಿದ ಕೊರೊನಾ ವೈರಸ್‌..! ಸತತ 2ನೇ ದಿನ 4 ಸಾವಿರಕ್ಕಿಂತ ಕಡಿಮೆ ಕೇಸ್‌


ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,12,784ಕ್ಕೆ ಏರಿದೆ. 7,33,558 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 11,046 ಕೊರೊನಾ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿದ್ದರೆ, 68,161 ಪ್ರಕರಣಗಳು ಸಕ್ರಿಯವಾಗಿವೆ. 939 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಯೂ ಕೊರೊನಾ ಆರ್ಭಟ ಕಡಿಮೆ ಮಾಡಿದ್ದು, ಬುಧವಾರ 1,612 ಹೊಸ ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,30,862ಕ್ಕೆ ಏರಿದೆ. 2,83,300 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 43,760ಕ್ಕೆ ಇಳಿದಿದೆ. 3,801 ಜನ ಕೊರೊನಾ ಕಾರಣದಿಂದ ಉದ್ಯಾನ ನಗರಿಯಲ್ಲಿ ಮೃತಪಟ್ಟಿದ್ದಾರೆ.

ಸತತ ಎರಡನೇ ದಿನವೂ 5,000ಕ್ಕಿಂತ ಕಡಿಮೆ ಕೇಸ್..! ರಾಜ್ಯದಲ್ಲಿ ಕಡಿಮೆಯಾಗುತ್ತಿದೆ ಕೊರೊನಾ ಆತಂಕ

ಇನ್ನು, ಮೈಸೂರು, ತುಮಕೂರು ಹಾಗೂ ಹಾಸನದಲ್ಲಿ ಬುಧವಾರ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಈ ಮೂರು ಜಿಲ್ಲೆಗಳಲ್ಲಿ ಕ್ರಮವಾಗಿ 169, 129 ಹಾಗೂ 127 ಹೊಸ ಕೇಸ್‌ಗಳು ಕಂಡುಬಂದಿವೆ. ಉಳಿದಂತೆ ಬಾಗಲಕೋಟೆಯಲ್ಲಿ 26, ಬಳ್ಳಾರಿ 69, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 61, ಬೀದರ್‌ 08, ಚಾಮರಾಜನಗರ 28, ಚಿಕ್ಕಬಳ್ಳಾಪುರ 69, ಚಿಕ್ಕಮಗಳೂರು 56, ಚಿತ್ರದುರ್ಗ 70 ಹಾಗೂ ದಕ್ಷಿಣ ಕನ್ನಡದಲ್ಲಿ 99 ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿ ಇಳಿದ ಕೊರೊನಾ ಗ್ರಾಫ್‌..! 5,000+ ಹೊಸ ಕೇಸ್‌, 8 ಸಾವಿರಕ್ಕೂ ಹೆಚ್ಚು ಗುಣಮುಖ

ಇನ್ನು, ದಾವಣಗೆರೆ 60, ಧಾರವಾಡ 14, ಗದಗ 22, ಹಾವೇರಿ 17, ಕಲಬುರಗಿ 29, ಕೊಡಗು 15, ಕೋಲಾರ 74, ಕೊಪ್ಪಳ 11, ಮಂಡ್ಯ 79, ರಾಯಚೂರು 31, ರಾಮನಗರ 17, ಶಿವಮೊಗ್ಗ 67, ಉಡುಪಿ 65, ಉತ್ತರ ಕನ್ನಡ 31, ವಿಜಯಪುರ 37 ಹಾಗೂ ಯಾದಗಿರಿಯಲ್ಲಿ 13 ಹೊಸ ಕೇಸ್‌ಗಳು ಪತ್ತೆಯಾಗಿವೆ.

ರಾಜ್ಯಕ್ಕೆ ನಿರಾಳತೆ ನೀಡಿದ ಕೊರೊನಾ..! ದಾಖಲೆಯ ಚೇತರಿಕೆ, ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಕೇಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ