ಬೆಂಗಳೂರು: ಕರ್ನಾಟಕದಲ್ಲಿ ಲಾಕ್ಡೌನ್ ಪ್ರಭಾವ ಇದೀಗ ನಿಧಾನವಾಗಿ ತಟ್ಟುತ್ತಿರುವಂತೆ ಕಾಣ್ತಿದೆ. ಏಕೆಂದರೆ, ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದೆ. ಸೋಮವಾರದಂತೆಯೇ ಮಂಗಳವಾರ ಕೂಡಾ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದ್ದು, ಮಂಗಳವಾರ ಒಂದೇ ದಿನ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 39,510 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 20,13,193ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಈವರೆಗೆ 14,05,869 ಮಂದಿ ಗುಣಮುಖರಾಗಿದ್ಧಾರೆ. ಮಂಗಳವಾರ ಕೂಡಾ 22,584 ಮಂದಿ ಗುಣಮುಖರಾಗಿದ್ದಾರೆ. ಆದ್ರೆ, ರಾಜ್ಯದಲ್ಲಿ 5,87,452 ಮಂದಿ ಇನ್ನೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೇ ಸರಿಸುಮಾರು 6 ಲಕ್ಷದ ಗಡಿಯಲ್ಲಿ ಇರೋದು ನಿಜಕ್ಕೂ ಆತಂಕ ಮೂಡಿಸಿದೆ.
ಇನ್ನು ಸಾವಿನ ಸಂಖ್ಯೆಯಲ್ಲಿ ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ತೀವ್ರವಾಗಿಯೇ ಇದೆ. ಮಂಗಳವಾರ ಒಂದೇ ದಿನ 480 ಮಂದಿ ಕೊರೊನಾಗೆ ಬಲಿಯಾಗಿದ್ದು, ಈವರೆಗೆ ರಾಜ್ಯದಲ್ಲಿ 19,852 ಮಂದಿ ಕೊರೊನಾಗೆ ಜೀವಬಿಟ್ಟಿದ್ಧಾರೆ. ಇನ್ನು, ರಾಜ್ಯದಲ್ಲಿ ಪ್ರತಿ 100 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ, ಈ ಪೈಕಿ 40 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಡುತ್ತಿದೆ..! ಸೋಂಕಿನ ಖಚಿತತೆ ಪ್ರಕರಣಗಳ ಶೇಕಡಾವಾರು ಪ್ರಮಾಣ 33.99%ಗೆ ಏರಿಕೆ ಕಂಡಿರೋದು ನಿಜಕ್ಕೂ ಆತಂಕ ಮೂಡಿಸಿದೆ. ಇನ್ನು ಕೋವಿಡ್ಗೆ ಬಲಿಯಾಗುತ್ತಿರುವ ಸೋಂಕಿತರ ಶೇಕಡಾವಾರು ಪ್ರಮಾಣ ಕೂಡಾ 1.21%ಗೆ ಏರಿಕೆ ಕಂಡಿದೆ.
ಜಿಲ್ಲೆಗಳ ವಿಚಾರಕ್ಕೆ ಬಂದ್ರೆ ಎಂದಿನಂತೆ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಮಂಗಳವಾರ ನಗರದಲ್ಲಿ ಒಟ್ಟು 15,879 ಮಂದಿಗೆ ಕೊರೊನಾ ದೃಢಪಟ್ಟಿದೆ. ಕಳೆದ ಕೆಲ ದಿನಗಳಿಂದ 20 ಸಾವಿರದ ಗಡಿ ದಾಟಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇದೀಗ ಕೊಂಚ ಇಳಿಮುಖವಾಗಿದೆ.
ಇನ್ನು ಬೆಂಗಳೂರು ಹೊರತುಪಡಿಸಿದರೆ, ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ತುಮಕೂರಿನಲ್ಲಿ ವರದಿಯಾಗಿದೆ. ತುಮಕೂರಿನಲ್ಲಿ ಮಂಗಳವಾರ ಒಂದೇ ದಿನ 2,496 ಮಂದಿಗೆ ಕೊರೊನಾ ತಗುಲಿದೆ. ಮೈಸೂರಿನಲ್ಲಿ 2,170 ಮಂದಿಗೆ ಮಂಗಳವಾರ ಕೊರೊನಾ ದೃಢಪಟ್ಟಿದೆ.
ಇನ್ನುಳಿದಂತೆ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಮಂಡ್ಯ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ, ಕಲಬುರಗಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೊಸ ಸೋಂಕಿತರ ಪ್ರಮಾಣ ಸಾವಿರದ ಸನಿಹದಲ್ಲಿದೆ.
ಇನ್ನು ಸಾವಿನ ಸಂಖ್ಯೆಯಲ್ಲಿ ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ತೀವ್ರವಾಗಿಯೇ ಇದೆ. ಮಂಗಳವಾರ ಒಂದೇ ದಿನ 480 ಮಂದಿ ಕೊರೊನಾಗೆ ಬಲಿಯಾಗಿದ್ದು, ಈವರೆಗೆ ರಾಜ್ಯದಲ್ಲಿ 19,852 ಮಂದಿ ಕೊರೊನಾಗೆ ಜೀವಬಿಟ್ಟಿದ್ಧಾರೆ. ಇನ್ನು, ರಾಜ್ಯದಲ್ಲಿ ಪ್ರತಿ 100 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ, ಈ ಪೈಕಿ 40 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಡುತ್ತಿದೆ..! ಸೋಂಕಿನ ಖಚಿತತೆ ಪ್ರಕರಣಗಳ ಶೇಕಡಾವಾರು ಪ್ರಮಾಣ 33.99%ಗೆ ಏರಿಕೆ ಕಂಡಿರೋದು ನಿಜಕ್ಕೂ ಆತಂಕ ಮೂಡಿಸಿದೆ. ಇನ್ನು ಕೋವಿಡ್ಗೆ ಬಲಿಯಾಗುತ್ತಿರುವ ಸೋಂಕಿತರ ಶೇಕಡಾವಾರು ಪ್ರಮಾಣ ಕೂಡಾ 1.21%ಗೆ ಏರಿಕೆ ಕಂಡಿದೆ.
ಜಿಲ್ಲೆಗಳ ವಿಚಾರಕ್ಕೆ ಬಂದ್ರೆ ಎಂದಿನಂತೆ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಮಂಗಳವಾರ ನಗರದಲ್ಲಿ ಒಟ್ಟು 15,879 ಮಂದಿಗೆ ಕೊರೊನಾ ದೃಢಪಟ್ಟಿದೆ. ಕಳೆದ ಕೆಲ ದಿನಗಳಿಂದ 20 ಸಾವಿರದ ಗಡಿ ದಾಟಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇದೀಗ ಕೊಂಚ ಇಳಿಮುಖವಾಗಿದೆ.
ಇನ್ನು ಬೆಂಗಳೂರು ಹೊರತುಪಡಿಸಿದರೆ, ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ತುಮಕೂರಿನಲ್ಲಿ ವರದಿಯಾಗಿದೆ. ತುಮಕೂರಿನಲ್ಲಿ ಮಂಗಳವಾರ ಒಂದೇ ದಿನ 2,496 ಮಂದಿಗೆ ಕೊರೊನಾ ತಗುಲಿದೆ. ಮೈಸೂರಿನಲ್ಲಿ 2,170 ಮಂದಿಗೆ ಮಂಗಳವಾರ ಕೊರೊನಾ ದೃಢಪಟ್ಟಿದೆ.
ಇನ್ನುಳಿದಂತೆ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಮಂಡ್ಯ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ, ಕಲಬುರಗಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೊಸ ಸೋಂಕಿತರ ಪ್ರಮಾಣ ಸಾವಿರದ ಸನಿಹದಲ್ಲಿದೆ.