ಆ್ಯಪ್ನಗರ

ರಾಜ್ಯದಲ್ಲಿ ನಿಲ್ಲದ ಕೊರೊನಾರ್ಭಟ, ಮತ್ತೆ 63 ಪಾಸಿಟಿವ್‌ ಕೇಸ್‌; ಹಾಸನ 21, ಬೀದರ್‌ 10!

ಹಾಸನದ ಬರೋಬ್ಬರಿ 21 ಜನರ ಕೋವಿಡ್‌-19 ವರದಿ ಪಾಸಿಟಿವ್‌ ಬಂದಿದ್ದರೆ, ಬೀದರ್‌ 10, ಮಂಡ್ಯ 8, ಕಲಬುರಗಿ 7, ಉಡುಪಿ 6, ಬೆಂಗಳೂರು ಮತ್ತು ತುಮಕೂರಿನ ತಲಾ 4 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

Vijaya Karnataka 20 May 2020, 1:43 pm

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಆರ್ಭಟ ನಿಲ್ಲುವಂತೆ ಕಾಣಿಸುತ್ತಿಲ್ಲ. ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೆ 63 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,458ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ ಮೊದಲ ಬಾರಿಗೆ 127 ಜನರಲ್ಲಿ ಸೋಂಕು ಪತ್ತೆಯಾಗಿತ್ತು.
Vijaya Karnataka Web Coronavirus 01


ಮಂಗಳವಾರ ಮಂಡ್ಯದಲ್ಲಿ ಕೋವಿಡ್‌-19 ಸ್ಪೋಟಿಸಿದ್ದರೆ, ಬುಧವಾರ ಹಾಸನದಲ್ಲಿ ಕೊರೊನಾ ಅಬ್ಬರಿಸಿದೆ. ಜಿಲ್ಲೆಯಲ್ಲಿ ಒಂದೇ ದಿನ 21 ಪಾಸಿಟಿವ್‌ ಪ್ರಕಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆ ಸೋಂಕಿತರ ವಿವರಗಳು, ಅವರ ಹಿನ್ನೆಲೆಯನ್ನು ನೀಡಿಲ್ಲ.

ಬೀದರ್‌ನಲ್ಲಿ 10 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಜಿಲ್ಲೆಯ ಸೋಂಕಿತರ ಸಂಖ್ಯೆ 67ಕ್ಕೆ ಏರಿದೆ. ಮಂಡ್ಯದಲ್ಲಿ ಬುಧವಾರವೂ 8 ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಜಿಲ್ಲೆಯಲ್ಲೀಗ ಸದ್ಯ 168 ಸೋಂಕಿತರಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೆಂಚುರಿ, ಒಂದೇ ದಿನ 127 ಕೇಸ್‌, 3 ಸಾವು; ಮಂಡ್ಯ 62, ದಾವಣೆಗೆರೆ 19!

ರಾಜಧಾನಿ, ಕಲಬುರಗಿಯಲ್ಲಿ ನಿಲ್ಲದ ಕೊರೊನಾ ನಾಗಾಲೋಟ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ 4 ಪಾಸಿಟಿವ್‌ ಪ್ರಕರಣಗಳ ಬೆಳಕಿಗೆ ಬಂದಿದ್ದು ಸೋಂಕಿತರ ಸಂಖ್ಯೆ ಭರ್ತಿ 250ಕ್ಕೆ ತಲುಪಿದೆ. ಕಲಬುರಗಿಯಲ್ಲಿ ಹೊಸದಾಗಿ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ತುಮಕೂರಿನ ನಾಲ್ವರ ಕೋವಿಡ್‌-19 ವರದಿ ಪಾಸಿಟಿವ್‌ ಬಂದಿದೆ.

ಉಡುಪಿ ಜಿಲ್ಲೆಯ ಆರು ಜನರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಯಾದಗಿರಿಯ ತಲಾ ಒಬ್ಬರಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೊನಾ ರೌದ್ರಾವತಾರ, ದಾಖಲೆಯ 99 ಪ್ರಕರಣ; ಬೆಂಗಳೂರು 24, ಮಂಡ್ಯ 17!

10 ರೋಗಿಗಳ ಬಿಡುಗಡೆ

ಇದೇ ಅವಧಿಯಲ್ಲಿ 10 ರೋಗಿಗಳು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 553ಕ್ಕೆ ಏರಿದೆ.

ಆದರೆ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 864ಕ್ಕೆ ತಲುಪಿದೆ. ಇದೇ ರೀತಿ ಸೋಂಕು ಕಂಡು ಬಂದರೆ ಕೆಲವೇ ದಿನಗಳಲ್ಲಿ ಈ ಸಂಖ್ಯೆ ಸಾವಿರ ದಾಟಲಿದೆ. ಇನ್ನು ಇಲ್ಲಿಯವರೆಗೆ ರಾಜ್ಯದಲ್ಲಿ 40 ಜನರು ಕೊರೊನಾಗೆ ಬಲಿಯಾಗಿದ್ದರೆ. ಓರ್ವ ಸೋಂಕಿತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಿಲ್ಲಾವಾರು ಕೊರೊನಾ ವೈರಸ್‌ ಸೋಂಕಿತರು ಮತ್ತು ಸಾವಿಗೀಡಾದವರ ಪಟ್ಟಿ


* ಒಂದು ಪ್ರಕರಣ ಆತ್ಮಹತ್ಯೆ; ಕೊರೊನಾದಿಂದ ಆದ ಸಾವಲ್ಲ.
** ಇತರೆ ಅಂದರೆ ಬೇರೆ ದೇಶ ಮತ್ತು ರಾಜ್ಯಗಳಿಗೆ ಸೇರಿದ ಸೋಂಕಿತರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ