ಆ್ಯಪ್ನಗರ

ರಾಜ್ಯದಲ್ಲಿ 8,000+ ಹೊಸ‌ ಪಾಸಿಟಿವ್‌ ಕೇಸ್‌, ಬೆಂಗಳೂರಲ್ಲಿ 2 ಲಕ್ಷದ ಗಡಿಗೆ ಕೊರೊನಾ

ಕರ್ನಾಟಕದಲ್ಲಿ ಕೊರೊನಾ ವೈರಸ್‌ ಆರ್ಭಟ ಮುಂದುವರೆದಿದೆ. ಭಾನುವಾರ ಹೊಸ ಕೇಸ್‌ಗಳ ಸಂಖ್ಯೆ 8 ಸಾವಿರ ದಾಟಿದ್ದು, 8,191 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. 8,611 ಜನ ಗುಣಮುಖರಾಗಿದ್ದಾರೆ.

Vijaya Karnataka Web 20 Sep 2020, 7:55 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಆರ್ಭಟ ಮುಂದುವರೆದಿದ್ದು, ಭಾನುವಾರ ಹೊಸ ಕೇಸ್‌ಗಳ ಸಂಖ್ಯೆ 8 ಸಾವಿರ ದಾಟಿದೆ. ಈ ದಿನ 8,191 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. 8,611 ಜನ ಗುಣಮುಖರಾಗಿದ್ದು, 101 ಜನ ಸೋಂಕಿಗೆ ಬಲಿಯಾಗಿದ್ದಾರೆ.
Vijaya Karnataka Web coronavirus in karnataka 8191 positive cases reported in last 24 hours
ರಾಜ್ಯದಲ್ಲಿ 8,000+ ಹೊಸ‌ ಪಾಸಿಟಿವ್‌ ಕೇಸ್‌, ಬೆಂಗಳೂರಲ್ಲಿ 2 ಲಕ್ಷದ ಗಡಿಗೆ ಕೊರೊನಾ


ಹೊಸ ಪಾಸಿಟಿವ್‌ ಕೇಸ್‌ಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,19,537ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 4,13,452ಕ್ಕೆ ಏರಿದೆ. 8,023 ಕೊರೊನಾ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ. ಒಟ್ಟು 98,043 ಪ್ರಕರಣಗಳು ಸಕ್ರಿಯವಾಗಿದ್ದು, 811 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಸೋಂಕಿನ ವೇಗ ಕಡಿಮೆಯಾದರೂ ಬೆಂಗಳೂರಿನಲ್ಲಿ ಮಾತ್ರ ಕೊರೊನಾ ಏರಿಕೆ ಕಾಣುತ್ತಿದೆ. ಭಾನುವಾರ 3,322 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 1,94,760ಕ್ಕೆ ಏರಿದೆ. ಇದರಲ್ಲಿ 1,50,348 ಜನ ಗುಣಮುಖರಾಗಿದ್ದರೆ, 41,754 ಪ್ರಕರಣಗಳು ಸಕ್ರಿಯವಾಗಿದ್ದು, 2,657 ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 5 ಲಕ್ಷದ ಗಡಿ ದಾಟಿದ ಕೊರೊನಾ..! ಒಂದೇ ದಿನ ದಾಖಲೆಯ 179 ಜನ ಸೋಂಕಿಗೆ ಬಲಿ

ಬೆಂಗಳೂರು ಬಿಟ್ಟು ಮೈಸೂರು, ದಕ್ಷಿಣ ಕನ್ನಡ ಹಾಗೂ ಕೊಪ್ಪಳದಲ್ಲಿ ಹೆಚ್ಚಿನ ಪಾಸಿಟಿವ್‌ ಕೇಸ್‌ಗಳು ಕಂಡುಬಂದಿವೆ. ಮೂರು ಜಿಲ್ಲೆಗಳಲ್ಲಿ ಕ್ರಮವಾಗಿ 481, 380 ಹಾಗೂ 337 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಬಾಗಲಕೋಟೆಯಲ್ಲಿ 90, ಬಳ್ಳಾರಿ 298, ಬೆಳಗಾವಿ 151, ಬೆಂಗಳೂರು ಗ್ರಾಮಾಂತರ 179, ಬೀದರ್‌ 77, ಚಾಮರಾಜನಗರ 69 ಹಾಗೂ ಚಿಕ್ಕಬಳ್ಳಾಪುರದಲ್ಲಿ 81 ಕೇಸ್‌ಗಳು ಕಂಡುಬಂದಿವೆ.

ರಾಜ್ಯದಲ್ಲಿ 5 ಲಕ್ಷದ ಸಮೀಪಕ್ಕೆ ಕೊರೊನಾ..! 9,000+ ಹೊಸ ಪಾಸಿಟಿವ್‌ ಪ್ರಕರಣ

ಚಿಕ್ಕಮಗಳೂರಿನಲ್ಲಿ 129, ಚಿತ್ರದುರ್ಗ 0, ದಾವಣಗೆರೆ 130 ಹಾಗೂ ಧಾರವಾಡ 305, ಗದಗ 75, ಹಾಸನ 277, ಹಾವೇರಿ 44, ಕಲಬುರಗಿ 136, ಕೊಡಗು 32, ಕೋಲಾರ 105, ಮಂಡ್ಯ 165, ರಾಯಚೂರು 132, ರಾಮನಗರ 57, ಶಿವಮೊಗ್ಗ 295, ತುಮಕೂರು 244, ಉಡುಪಿ 295, ಉತ್ತರ ಕನ್ನಡ 108, ವಿಜಯಪುರ 81 ಹಾಗೂ ಯಾದಗಿರಿಯಲ್ಲಿ 116 ಹೊಸ ಕೇಸ್‌ಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಕೊಂಚ ತಗ್ಗಿದ ಕೊರೊನಾ ಅಬ್ಬರ..! ಹೊಸ ಪಾಸಿಟಿವ್‌ ಕೇಸ್‌ಗಿಂತ ಚೇತರಿಕೆ ಹೆಚ್ಚು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ