ಆ್ಯಪ್ನಗರ

ಅಗತ್ಯ ವಸ್ತುಗಳ ದರ ಹೆಚ್ಚಿಸಿದರೆ ಹುಷಾರ್‌, ಕಾಳಸಂತೆಕೋರರಿಗೆ ಸಿಎಂ ಎಚ್ಚರಿಕೆ

ಲಾಕ್‌ಡೌನ್‌ನ ಮೊದಲ ದಿನವೇ ಕೆಲವು ವ್ಯಾಪಾರಿಗಳು ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 25 Mar 2020, 8:52 am
ಬೆಂಗಳೂರು: ಲಾಕ್‌ಡೌನ್‌ನ ಮೊದಲ ದಿನವೇ ಕೆಲವು ವ್ಯಾಪಾರಿಗಳು ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಕಾಳಸಂತೆಕೋರರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನ ಪಟ್ಟರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Vijaya Karnataka Web bs yediyurappa


ಪ್ರಧಾನಿ ಮೋದಿ ಅವರ ಭಾಷಣದ ಬೆನ್ನಿಗೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಸಿಎಂ ಅವರು, ''ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಪ್ರ ಧಾನಿಯವರಿಗೆ ಈ ಕ್ರಮ ಬಿಟ್ಟರೆ ಬೇರೊಂದು ಮಾರ್ಗ ಇರಲಿಲ್ಲ. ಜಗತ್ತಿನ ಅನೇಕ ದೇಶಗಳು ಈ ಮಹಾಮಾರಿ ಕೊರೊನಾ ವೈರಸ್ನ್ನು ತಡೆಯಲು ವಿಫಲವಾದ ಕಾರಣ, ಮೋದಿಜಿ ಅವರು ದೂರದೃಷ್ಟಿ ಇಟ್ಟುಕೊಂಡು 21 ದಿನಗಳ ಕಾಲ ಮನೆಯಲ್ಲಿರುವ ಇರುವ ಕ್ರಮಕ್ಕೆ ಕರೆ ನೀಡಿದ್ದಾರೆ. ದೇಶದ ಜನರ ರಕ್ಷಣೆ ಮಾಡಬೇಕು ಎನ್ನುವುದೇ ಮೋದಿಜಿ ಅವರ ಗುರಿ. ಈ ದೊಡ್ಡ ಮತ್ತು ಕಷ್ಟಕರ ಕಾರ್ಯದಲ್ಲಿನಾವು ಮೋದಿಜಿಯವರ ಜೊತೆಗಿದ್ದೇವೆ. ನಾನೊಬ್ಬನೇ ಅಲ್ಲ, ಕರ್ನಾಟಕದ 6.5 ಕೋಟಿ ಜನ ಅವರ ಜೊತೆ ಇದ್ದಾರೆ ಮತ್ತು ಪ್ರಧಾನಿಯವರ ಕರೆಯನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ,'' ಎಂದರು.



ಅಗತ್ಯ ವಸ್ತು ತಲುಪಿಸುತ್ತೇವೆ: ರಾಜ್ಯ ಸರ್ಕಾರ ಈ ಸಮಯದಲ್ಲಿ ಜನರನ್ನು ರಕ್ಷಿಸುವ ಹೊಣೆಯ ಜೊತೆಗೆ ಬಡವರಿಗೆ ಅಗತ್ಯ ವಸ್ತುಗಳನ್ನು ಹೇಗೆ ತಲುಪಿಸುವುದು ಎಂದು ಯೋಚಿಸುತ್ತಿದ್ದೇವೆ ಮತ್ತು ತಲುಪಿಸುತ್ತೇವೆ ಎಂದರು.

ಲಾಕ್‌ ಡೌನ್‌ ಉಲ್ಲಂಘಿಸಿದರೆ ಕಂಡಲ್ಲಿ ಗುಂಡು ಆದೇಶ ನೀಡಬೇಕಾಗುತ್ತದೆ: ತೆಲಂಗಾಣ ಸಿಎಂ

ಪೊಲೀಸರು ಹೊಡೆದರೆ ಹೊಣೆಯಲ್ಲ
''ಮೋದಿ ಅವರ ಕರೆಯನ್ನು ಧಿಕ್ಕರಿಸಿ, ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ,'' ಎಂದಿರುವ ಯಡಿಯೂರಪ್ಪ ಅವರು, ಅನಗತ್ಯವಾಗಿ ಅಡ್ಡಾಡುವ ವೇಳೆ ಪೊಲೀಸರು ದಂಡನಾ ಕ್ರಮ ಕೈಗೊಂಡರೆ ನಾನು ಹೊಣೆಯಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ