ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಲಾಕ್ಡೌನ್ ಸಡಿಲಿಕೆ ಆಗುತ್ತಿರುವ ಬೆನ್ನಲ್ಲೇ, ಕೊರೊನಾ ಸೋಂಕು ಪ್ರಕರಣಗಳೂ ಕಡಿಮೆಯಾಗುತ್ತಿವೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 6,835 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಭಾನುವಾರ 7,810 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದವು. ಸೋಮವಾರ ಒಂದೇ ದಿನ ರಾಜ್ಯಾದ್ಯಂತ 15,409 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ ಕೋವಿಡ್ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ25,66,774ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ ಇದೀಗ ಒಟ್ಟು 1,72,141 ಮಂದಿ ಕೊರೊನಾ ಸೋಂಕಿತರಿದ್ದಾರೆ. ಈ ಪೈಕಿ ಸೋಮವಾರ ಒಂದೇ ದಿನ 120 ಮಂದಿ ಕೊರೊನಾ ಸೋಂಕಿತರು ಜೀವಬಿಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 33,033ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 27,71,969ಕ್ಕೆ ಏರಿದೆ.
ಸೋಮವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿ 100 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ, ಇವರಲ್ಲಿ ಸರಾಸರಿ 5 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅಂದರೆ ಕೋವಿಡ್ ಸೋಂಕಿನ ಖಚಿತತೆ ಪ್ರಮಾಣ ರಾಜ್ಯದಲ್ಲಿ 4.56% ಇದೆ. ಇನ್ನು ಮರಣ ಪ್ರಮಾಣ 1.75% ಇದ್ದು, ಇನ್ನೂ ಆತಂಕಕಾರಿ ಸ್ಥಿತಿಯೇ ಮುಂದುವರೆದಿದೆ ಎನ್ನಬಹುದು.
ಜಿಲ್ಲಾವಾರು ಲೆಕ್ಕಾಚಾರ: ಸೋಮವಾರ ಜಿಲ್ಲೆಗಳಲ್ಲಿ ವರದಿಯಾದ ಕೋವಿಡ್ ಸೋಂಕು ಪ್ರಕರಣಗಳ ಲೆಕ್ಕಾಚಾರ ಗಮನಿಸಿದರೆ, ಎಂದಿನಂತೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗೆ ನೋಡಿದ್ರೆ ಭಾನುವಾರ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿತ್ತು. ಆದ್ರೆ, ಸೋಮವಾರ ಮತ್ತೆ ಬೆಂಗಳೂರು ನಗರವೇ ಪ್ರಥಮ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ಒಟ್ಟು 1,470 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನು ಮೈಸೂರ ನಗರವು 2ನೇ ಸ್ಥಾನದಲ್ಲಿದ್ದು, ಮೈಸೂರಿನಲ್ಲಿ 670 ಹೊಸ ಪ್ರಕರಣಗಳು ಸೋಮವಾರ ದೃಢಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯು 3ನೇ ಸ್ಥಾನ, ಹಾಸನ 4ನೇ ಸ್ಥಾನದಲ್ಲಿದೆ.
ಕೊರೊನಾ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಿದ ಜಿಲ್ಲೆಗಳ ಪೈಕಿ ಬೀದರ್ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಬೀದರ್ನಲ್ಲಿ ಸೋಮವಾರ ಕೇವಲ 14 ಪ್ರಕರಣಗಳು ದೃಢಪಟ್ಟಿವೆ. ಗದಗ 28, ರಾಮನಗರ 26, ಕಲಬುರಗಿ 31 ಹಾಗೂ ರಾಯಚೂರು ಜಿಲ್ಲೆಯಲ್ಲಿ 33 ಪ್ರಕರಣಗಳು ದೃಢಪಟ್ಟಿವೆ. ಇದೀಗ ರಾಜ್ಯ ಅನ್ಲಾಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆ ತಡೆಯುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಹೀಗಾಗಿ, ಜನರೂ ಮುನ್ನೆಚ್ಚರಿಕೆಯಿಂದ ಇರಬೇಕಾದ ಅಗತ್ಯತೆ ಇದೆ.
ಇನ್ನು ಸಾವಿನ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆ ಸತತ ಎರಡನೇ ದಿನವೂ ಬೆಂಗಳೂರನ್ನು ಹಿಂದಿಕ್ಕಿದೆ. ಸೋಮವಾರ ರಾಜಧಾನಿಯಲ್ಲಿ 12 ಜನರು ಮೃತರಾದರೆ, ಮೈಸೂರಿನಲ್ಲಿ 25 ಜನರು ಮೃತರಾಗಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ 23 ಹಾಗೂ ಮೈಸೂರಿನಲ್ಲಿ 25 ಜನರು ಮೃತರಾಗಿದ್ದರು. ಉಳಿದಂತೆ ಸೋಮವಾರ ಧಾರವಾಡ ಮತ್ತು ದಾವಣಗೆರೆಯಲ್ಲಿ ತಲಾ 10 ಜನರು ಮೃತರಾಗಿದ್ದು, ಒಂದೇ ದಿನ ಅತಿ ಹೆಚ್ಚು ಜನರು ಮೃತರಾದ ಜಿಲ್ಲೆಗಳ ಪೈಕಿ ಅಗ್ರಸ್ಥಾನದಲ್ಲಿವೆ.
ರಾಜ್ಯದಲ್ಲಿ ಇದೀಗ ಒಟ್ಟು 1,72,141 ಮಂದಿ ಕೊರೊನಾ ಸೋಂಕಿತರಿದ್ದಾರೆ. ಈ ಪೈಕಿ ಸೋಮವಾರ ಒಂದೇ ದಿನ 120 ಮಂದಿ ಕೊರೊನಾ ಸೋಂಕಿತರು ಜೀವಬಿಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 33,033ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 27,71,969ಕ್ಕೆ ಏರಿದೆ.
ಸೋಮವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿ 100 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ, ಇವರಲ್ಲಿ ಸರಾಸರಿ 5 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅಂದರೆ ಕೋವಿಡ್ ಸೋಂಕಿನ ಖಚಿತತೆ ಪ್ರಮಾಣ ರಾಜ್ಯದಲ್ಲಿ 4.56% ಇದೆ. ಇನ್ನು ಮರಣ ಪ್ರಮಾಣ 1.75% ಇದ್ದು, ಇನ್ನೂ ಆತಂಕಕಾರಿ ಸ್ಥಿತಿಯೇ ಮುಂದುವರೆದಿದೆ ಎನ್ನಬಹುದು.
ಜಿಲ್ಲಾವಾರು ಲೆಕ್ಕಾಚಾರ: ಸೋಮವಾರ ಜಿಲ್ಲೆಗಳಲ್ಲಿ ವರದಿಯಾದ ಕೋವಿಡ್ ಸೋಂಕು ಪ್ರಕರಣಗಳ ಲೆಕ್ಕಾಚಾರ ಗಮನಿಸಿದರೆ, ಎಂದಿನಂತೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗೆ ನೋಡಿದ್ರೆ ಭಾನುವಾರ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿತ್ತು. ಆದ್ರೆ, ಸೋಮವಾರ ಮತ್ತೆ ಬೆಂಗಳೂರು ನಗರವೇ ಪ್ರಥಮ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ಒಟ್ಟು 1,470 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನು ಮೈಸೂರ ನಗರವು 2ನೇ ಸ್ಥಾನದಲ್ಲಿದ್ದು, ಮೈಸೂರಿನಲ್ಲಿ 670 ಹೊಸ ಪ್ರಕರಣಗಳು ಸೋಮವಾರ ದೃಢಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯು 3ನೇ ಸ್ಥಾನ, ಹಾಸನ 4ನೇ ಸ್ಥಾನದಲ್ಲಿದೆ.
ಕೊರೊನಾ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಿದ ಜಿಲ್ಲೆಗಳ ಪೈಕಿ ಬೀದರ್ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಬೀದರ್ನಲ್ಲಿ ಸೋಮವಾರ ಕೇವಲ 14 ಪ್ರಕರಣಗಳು ದೃಢಪಟ್ಟಿವೆ. ಗದಗ 28, ರಾಮನಗರ 26, ಕಲಬುರಗಿ 31 ಹಾಗೂ ರಾಯಚೂರು ಜಿಲ್ಲೆಯಲ್ಲಿ 33 ಪ್ರಕರಣಗಳು ದೃಢಪಟ್ಟಿವೆ. ಇದೀಗ ರಾಜ್ಯ ಅನ್ಲಾಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆ ತಡೆಯುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಹೀಗಾಗಿ, ಜನರೂ ಮುನ್ನೆಚ್ಚರಿಕೆಯಿಂದ ಇರಬೇಕಾದ ಅಗತ್ಯತೆ ಇದೆ.
ಇನ್ನು ಸಾವಿನ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆ ಸತತ ಎರಡನೇ ದಿನವೂ ಬೆಂಗಳೂರನ್ನು ಹಿಂದಿಕ್ಕಿದೆ. ಸೋಮವಾರ ರಾಜಧಾನಿಯಲ್ಲಿ 12 ಜನರು ಮೃತರಾದರೆ, ಮೈಸೂರಿನಲ್ಲಿ 25 ಜನರು ಮೃತರಾಗಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ 23 ಹಾಗೂ ಮೈಸೂರಿನಲ್ಲಿ 25 ಜನರು ಮೃತರಾಗಿದ್ದರು. ಉಳಿದಂತೆ ಸೋಮವಾರ ಧಾರವಾಡ ಮತ್ತು ದಾವಣಗೆರೆಯಲ್ಲಿ ತಲಾ 10 ಜನರು ಮೃತರಾಗಿದ್ದು, ಒಂದೇ ದಿನ ಅತಿ ಹೆಚ್ಚು ಜನರು ಮೃತರಾದ ಜಿಲ್ಲೆಗಳ ಪೈಕಿ ಅಗ್ರಸ್ಥಾನದಲ್ಲಿವೆ.