ಆ್ಯಪ್ನಗರ

ವಿಧಾನಸಭೆ ಅಧಿವೇಶನದಲ್ಲಿಯೇ ಬಂತು ಕೊರೊನಾ; ಹಲವರಿಗೆ ಸೋಂಕು

ಶನಿವಾರ ಮುಕ್ತಾಯಗೊಂಡ ಆರು ದಿನಗಳ ಕಲಾಪದಲ್ಲಿ ಸಚಿವರು, ಶಾಸಕರು ಸಕ್ರಿಯವಾಗಿ ಭಾಗವಹಿಸಿದ್ದರು. ಭಾನುವಾರ ಇವರೆಲ್ಲ ಸ್ವಯಂ ತಪಾಸಣೆ ಮಾಡಿಸಿಕೊಂಡಾಗ ಪಾಸಿಟಿವ್‌ ಬಂದಿದೆ. ಕಲಾಪದ ಸಮಯದಲ್ಲಿ ಇವರನ್ನು ನಿರಂತರ ಮಾಡಿದ ಶಾಸಕರು ಅನೇಕರಿದ್ದಾರೆ.

Vijaya Karnataka Web 28 Sep 2020, 10:09 pm
ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ವಿಧಾನ ಮಂಡಲ ಕಲಾಪದಲ್ಲಿಭಾಗಿಯಾದವರಲ್ಲಿ ಈಗ ಕೊರೊನಾ ಸ್ಫೋಟಗೊಂಡಿದೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ್‌, ದಿನೇಶ್‌ ಗುಂಡೂರಾವ್‌, ವಿಧಾನಸಭೆ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಸೋಂಕು ದೃಢಪಟ್ಟಿದೆ. ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಚಿವ ಮಾಧುಸ್ವಾಮಿಯವರ ಆಪ್ತ, ಕಾರುಚಾಲಕರಿಗೂ ಸೋಂಕು ಕಾಣಿಸಿಕೊಂಡಿದೆ.

ಶನಿವಾರ ಮುಕ್ತಾಯಗೊಂಡ ಆರು ದಿನಗಳ ಕಲಾಪದಲ್ಲಿ ಸಚಿವರು, ಶಾಸಕರು ಸಕ್ರಿಯವಾಗಿ ಭಾಗವಹಿಸಿದ್ದರು. ಭಾನುವಾರ ಇವರೆಲ್ಲ ಸ್ವಯಂ ತಪಾಸಣೆ ಮಾಡಿಸಿಕೊಂಡಾಗ ಪಾಸಿಟಿವ್‌ ಬಂದಿದೆ. ಕಲಾಪದ ಸಮಯದಲ್ಲಿ ಇವರನ್ನು ನಿರಂತರ ಮಾಡಿದ ಶಾಸಕರು ಅನೇಕರಿದ್ದಾರೆ. ಅವರಲ್ಲಿಯೂ ಈಗ ಆತಂಕ ಶುರುವಾಗಿದೆ. ವಿಧಾನಸಭೆಯ ಸ್ಪೀಕರ್‌ ಸಲಹೆಗಾರರಿಗೂ ಪಾಸಿಟಿವ್‌ ಬಂದಿದೆ.

ಕಲಾಪ ಆರಂಭಕ್ಕೂ ಮುನ್ನ ನಡೆಸಿದ ಪರೀಕ್ಷೆಯಲ್ಲಿ 120 ಜನರಿಗೆ ಸೋಂಕು ದೃಢಪಟ್ಟಿತ್ತು. 28 ಶಾಸಕರು ಸೋಂಕಿನ ಹಿನ್ನೆಲೆಯಲ್ಲಿ ಕಲಾಪಕ್ಕೆ ಬಂದಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ