ಆ್ಯಪ್ನಗರ

ಹೋಮ್‌ ಕ್ವಾರಂಟೈನ್‌ ತಪ್ಪಿಸಿದರೆ ಮಾಸ್‌ ಕ್ವಾರಂಟೈನ್‌, ಅದಕ್ಕೂ ಬಗ್ಗದಿದ್ದರೆ ಜೈಲು: ಗೃಹ ಸಚಿವರ ಎಚ್ಚರಿಕೆ

ಸರಕಾರದ ಸೂಚನೆ ಉಲ್ಲಂಘಿಸಿದ 7 ಮಂದಿ ಮೇಲೆ ಈಗಾಗಲೇ ಕೇಸ್‌ ದಾಖಲಿಸಲಾಗಿದೆ. ಯಾವುದೇ ಜಿಲ್ಲೆಯ ಒಳಗೆ ಓಡಾಡಲು ಅಭ್ಯಂತರವಿಲ್ಲ. ಅಗತ್ಯ ಸೇವೆಯಲ್ಲಿ ಇರುವವರು ಮಾತ್ರ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Vijaya Karnataka 24 Mar 2020, 9:19 pm

ಬೆಂಗಳೂರು: ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಇನ್ನೂ ಸ್ವಲ್ಪ ದಿನ ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ಮಾರ್ಗಸೂಚಿ ಅನುಸಾರ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಬೇಕು. ಅದನ್ನು ಉಲ್ಲಂಘಿಸಿದವರಿಗೆ ಮಾಸ್‌ ಕ್ವಾರಂಟೈನ್‌ಗೆ ಹಾಕಲಾಗುವುದು. ಅದನ್ನೂ ಪಾಲಿಸದವರಿಗೆ ಐಪಿಸಿ ಸೆಕ್ಷ ನ್‌ 271 ಪ್ರಕಾರ ಜೈಲಿಗೆ ಹಾಕಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
Vijaya Karnataka Web basavaraj-bommai


ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ‘‘ಸರಕಾರದ ಸೂಚನೆ ಉಲ್ಲಂಘಿಸಿದ 7 ಮಂದಿ ಮೇಲೆ ಈಗಾಗಲೇ ಕೇಸ್‌ ದಾಖಲಿಸಲಾಗಿದೆ. ಯಾವುದೇ ಜಿಲ್ಲೆಯ ಒಳಗೆ ಓಡಾಡಲು ಅಭ್ಯಂತರವಿಲ್ಲ. ಅಗತ್ಯ ಸೇವೆಯಲ್ಲಿ ಇರುವವರು ಮಾತ್ರ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಬಹುದು,’’ ಎಂದರು.

ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರು ಹೊರ ಬಂದರೆ 6 ತಿಂಗಳು ಜೈಲು: ಬಸವರಾಜ್‌ ಬೊಮ್ಮಾಯಿ

ಸಮಯ ನಿಗದಿಗೆ ಚಿಂತನೆ

ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ ಮಾಡುವ ಚಿಂತನೆಯಿದೆ. ಇನ್ನೂ ತೀರ್ಮಾನವಾಗಿಲ್ಲ. ಅಗತ್ಯ ವಸ್ತುಗಳನ್ನು ಜನರು ಶಿಸ್ತುಬದ್ಧವಾಗಿ ನಿಂತು ಖರೀದಿಸಬೇಕು. ಪೊಲೀಸರು ಶಿಸ್ತು ಪಾಲನೆ ಮಾಡಿಸುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜನರು ಸಹಕರಿಸಬೇಕು. ಜನರಿಗೆ, ಬೈಕ್‌ ಸವಾರರಿಗೆ ಪೊಲೀಸರು ಹೊಡೆಯುತ್ತಿಲ್ಲ. ಈ ಸಂಬಂಧ ಒಂದು ಮಾಹಿತಿ ಬಂದಿದೆ. ಅದನ್ನೇ ದೊಡ್ಡದು ಮಾಡುವುದು ಬೇಡ. ಮಂಗಳೂರಿನಲ್ಲಿ ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡವರನ್ನು ಟ್ರೇಸ್‌ ಮಾಡಿ ತರಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಅಗತ್ಯ ಸೇವೆಯಡಿ ಬರುತ್ತವೆ. ಹಾಗಾಗಿ ಮಾಧ್ಯಮದವರಿಗೆ ನಿರ್ಬಂಧ ಹೇರಬಾರದು. ಅವರ ಕೆಲಸಕ್ಕೆ ಅಡ್ಡಿ ಪಡಿಸಬಾರದೆಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ