ಆ್ಯಪ್ನಗರ

ಕೆಲಸಗಾರರಿಗೆ ವೇತನ ಕಡಿತ ಮಾಡಬೇಡಿ: ಉದ್ಯೋಗದಾತರಿಗೆ ಯಡಿಯೂರಪ್ಪ ಮನವಿ!

ಕೊರೊನಾ ವೈರಸ್‌ ಲಾಕ್‌ಡೌನಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಹಾಗೂ ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬಾರದು ಎಂದು ಯಡಿಯೂರಪ್ಪ ಅವರು ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Vijaya Karnataka Web 4 Apr 2020, 1:52 pm
ಬೆಂಗಳೂರು: ಕೊರೊನ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಹಾಗೂ ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬಾರದು. ಸಂಕಷ್ಟದ ಈ ಸಮಯದಲ್ಲಿ ಸಹಾನುಭೂತಿಯಿಂದ ನೆರವಾಗಲು ಕೋರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web yediyurappa new




ಕೊರೊನ ಸೋಂಕು ಹರಡುವಿಕೆ ಸಂಬಂಧ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಖಾಸಗಿ ನೌಕರರು, ಗುತ್ತಿಗೆ ಕೆಲಸಗಾರರು & ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದೇ, ಸಂಬಳ ಸಹಿತ ರಜೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆ ಎಲ್ಲ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಗಳ ಮಾಲೀಕರಿಗೆ ಮನವಿ ಮಾಡಿತ್ತು,

ಈ ಹಿಂದೆಯೇ ಈ ಕುರಿತ ಮನವಿ ಪತ್ರವನ್ನು ರಾಜ್ಯ ಸರಕಾರ (ರಾಜ್ಯ ವಾರ್ತೆ) ಟ್ವೀಟ್‌ ಮಾಡಿತ್ತು. ವಿಶ್ವವೇ ಕೊರೊನಾ ವೈರಸ್ ಸೋಂಕಿನಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಕೊಒರನಾ ವೈರಸ್‌ ಕಾರಣದಿಂದ ಅಥವಾ ಲಾಕ್‌ಡೌನ್ ಕಾರಣದಿಂದ ಕಚೇರಿಗೆ ಅಥವಾ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಂತಹ ನೌಕರರನ್ನು ಆನ್‌ ಡ್ಯೂಟಿ ಎಂದು ಪರಿಗಣಿಸಬೇಕು. ಅವರನ್ನು ಕೆಲಸದಿಂದ ವಜಾಗೊಳಿಸದೇ ಇರಲು ಮನವಿ ಮಾಡಲಾಗಿತ್ತು.

ಬ್ರೇಕಿಂಗ್‌ ನ್ಯೂಸ್‌: ಭಾರತ್ ಬಯೋಟೆಕ್‌ನಿಂದ ಕೊರೊನಾಗೆ ಲಸಿಕೆ! ಜುಲೈ ವೇಳೆಗೆ ಸಿದ್ಧ!

ಇದೀಗ ಮತ್ತೊಮ್ಮೆ ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗದಂತೆ, ಖಾಸಗಿ ಕಾರ್ಮಿಕರ ವೇತನ ನೀಡುವಂತೆ ಉದ್ಯೋಗದಾತರನ್ನು ಮನವಿ ಮಾಡಲಾಗಿದೆ.

ಮನೆಯಲ್ಲೇ ಕೊರೊನಾ ಪರೀಕ್ಷೆಗೆ ಬಂದಿದೆ ಕಿಟ್‌: 10 ನಿಮಿಷದಲ್ಲೇ ರಿಸಲ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ