ಆ್ಯಪ್ನಗರ

ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಲಾಕ್‌ಡೌನ್, ಕೆಎಸ್‌ಆರ್‌ಟಿಸಿ ಸಂಚಾರ ಇಲ್ಲ‌

ಭಾನುವಾರ ಲಾಕ್‌ಡೌನ್‌ ಇರುವುದರಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳ ಕಾರ್ಯಾಚರಣೆ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೂ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಬಿಎಂಟಿಸಿ ಬಸ್‌ಗಳೂ ಸಂಚಾರ ನಿಲ್ಲಿಸಲಿವೆ.

Vijaya Karnataka 3 Jul 2020, 9:26 pm
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ವೀಕೆಂಡ್‌ ಲಾಕ್‌ಡೌನ್‌ ಶನಿವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿದೆ. ರಾಜ್ಯಾದ್ಯಂತ ಕೂಡ ಭಾನುವಾರ ಇಡೀ ದಿನ ಲಾಕ್‌ಡೌನ್‌ ಇರಲಿದೆ.
Vijaya Karnataka Web Coronavirus 01


ಭಾನುವಾರ ಲಾಕ್‌ಡೌನ್‌ ಇರುವುದರಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳ ಕಾರ್ಯಾಚರಣೆ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೂ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಬಿಎಂಟಿಸಿ ಬಸ್‌ಗಳೂ ಸಂಚಾರ ನಿಲ್ಲಿಸಲಿವೆ.

ಲಾಕ್‌ಡೌನ್‌ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ ರಾವ್‌, "ಈ ಬಾರಿ ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ, ನಿಯಮಿತವಾಗಿ ಲಾಕ್‌ಡೌನ್‌ ನಿಯಮ ಜಾರಿ ಮಾಡಲಾಗುವುದು," ಎಂದಿದ್ದಾರೆ.

ಕಮಿಷನರ್‌ ಹೇಳಿಕೆ ಮುಖ್ಯಾಂಶಗಳು

* ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕಂಪ್ಲೀಟ್‌ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಕರ್ಫ್ಯೂ ಮಾದರಿ ಲಾಕ್‌ಡೌನ್‌ ಇದಾಗಿದ್ದು, ಜನತೆ ಸಹಕರಿಸಬೇಕು.

* ಸಾರ್ವಜನಿಕರು ಸುಖಾಸುಮ್ಮನೆ ಓಡಾಡದೆ ಸರಕಾರದ ಕ್ರಮಗಳನ್ನು ಪಾಲಿಸಬೇಕು.

* ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ.

* ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್ಸ್‌, ದಿನಸಿ ಅಂಗಡಿ, ತರಕಾರಿ, ಮಾಂಸದ ಅಂಗಡಿ ವ್ಯಾಪಾರ ನಡೆಸಬಹುದು.

* ಈ ಹಿಂದಿನ ಲಾಕ್‌ಡೌನ್‌ ನಿಯಮಗಳೇ ಈಗಲೂ ಅನ್ವಯವಾಗಲಿವೆ.

ಬನ್ನೇರುಘಟ್ಟ ಬಂದ್

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಜುಲೈ 5 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್‌ಡೌನ್‌ ಮಾಡಲು ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಉದ್ಯಾನವನಕ್ಕೆ ಭಾನುವಾರ ರಜೆ ಘೋಷಿಸಲಾಗಿದೆ.

ಉದ್ಯಾನಕ್ಕೆ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಈಗ ಮಂಗಳವಾರದಂದು ಪ್ರವಾಸಿಗರ ವೀಕ್ಷಣೆಗೆ ಉದ್ಯಾನ ತೆರೆಯಲು ಉದ್ದೇಶಿಸಲಾಗಿದೆ. ಹಾಗಾಗಿ ಜುಲೈ 5, 12, 19 ಮತ್ತು 26ರ ಭಾನುವಾರಗಳಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಬದಲಾಗಿ ಜು.7, 14, 21 ಮತ್ತು 28ರ ಮಂಗಳವಾರಗಳಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ