ಬೆಂಗಳೂರು: ರಾಜ್ಯದಲ್ಲಿ ಬಹಳ ದಿನಗಳ ನಂತರ ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಸಾವಿರದಿಂದ ಕೆಳಗಿಳಿದಿದ್ದು, ಸೋಂಕಿನ ಆತಂಕ ಕಡಿಮೆಯಾಗಿದೆ. ಸೋಮವಾರ ಕೇವಲ 998 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.
ಅದಲ್ಲದೇ ಚೇತರಿಕೆ ಪ್ರಮಾಣವೂ ಸಹ ದುಪ್ಪಟ್ಟಾಗಿದ್ದು, ಕಳೆದ 24 ಗಂಟೆಯಲ್ಲಿ 2209 ಜನ ಗುಣಮುಖರಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 8,49,821ಕ್ಕೆ ತಲುಪಿದೆ. ಅದಲ್ಲದೇ ಸೋಮವಾರ 13 ಕೊರೊನಾ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 11,778ಕ್ಕೆ ಬಂದು ನಿಂತಿದೆ.
ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 8,84,897ಕ್ಕೆ ಏರಿದೆ. ಇನ್ನೂ 23,279 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. 349 ಜನ ಐಸಿಯನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಪಾಸಿಟಿವಿಟಿ ಪ್ರಮಾಣ ಶೇ.1.22ರಷ್ಟಿದೆ. ಇನ್ನು, ಮರಣ ಪ್ರಮಾಣ ಶೇ.1.30ಕ್ಕೆ ಏರಿದೆ. ಸೋಮವಾರ 7,543 ಆಂಟಿಜೆನ್ ನಡೆಸಿದ್ದರೆ, 73,790 ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲಾಗಿದೆ. ಇದುವರೆಗೂ ಎರಡು ಕೂಡಿ 1,11,01,633 ಪರೀಕ್ಷೆಗಳನ್ನು ನಡೆಸಲಾಗಿದೆ.
ಚಳಿ ನಡುವೆಯೂ ರಾಜ್ಯದಲ್ಲಿ ತಗ್ಗಿದ ಕೊರೊನಾತಂಕ..! ಸಾವಿರದ ಸಮೀಪಕ್ಕೆ ಹೊಸ ಕೇಸ್, ಚೇತರಿಕೆಯೂ ಏರಿಕೆ
ಸೋಮವಾರ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿದಿದ್ದು, 500ಕ್ಕಿಂತ ಕಡಿಮೆ ಕೇಸ್ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 444 ಹೊಸ ಪಾಸಿಟಿವ್ ಕೇಸ್ಗಳು ಸಿಲಿಕಾನ್ ಸಿಟಿಯಲ್ಲಿ ಕಂಡುಬಂದಿವೆ. ಇದರೊಂದಿಗೆ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,69,734ಕ್ಕೆ ಏರಿದೆ. ಇದರಲ್ಲಿ 3,48,348 ಜನ ಚೇತರಿಸಿಕೊಂಡಿದ್ದು, 17,248 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4137 ಜನ ಬೆಂಗಳೂರಿನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೊನಾ..! 1526 ಪಾಸಿಟಿವ್, 25 ಸಾವಿರಕ್ಕಿಂತ ಹೆಚ್ಚಾದ ಸಕ್ರಿಯ ಕೇಸ್
ಬೆಂಗಳೂರು ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ 03, ಬಳ್ಳಾರಿ 10, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 23, ಬೀದರ್ 02, ಚಾಮರಾಜನಗರ 04, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 14, ಚಿತ್ರದುರ್ಗ 01, ದಕ್ಷಿಣ ಕನ್ನಡ 27, ದಾವಣಗೆರೆ 11, ಧಾರವಾಡ 08 ಹಾಗೂ ಗದಗದಲ್ಲಿ 03 ಹೊಸ ಪ್ರಕರಣಗಳು ಕಂಡುಬಂದಿವೆ.
ಹಾಸನದಲ್ಲಿ 45, ಹಾವೇರಿ 123, ಕಲಬುರಗಿ 15, ಕೊಡಗು 04, ಕೋಲಾರ 12, ಕೊಪ್ಪಳ 10, ಮಂಡ್ಯ 30, ಮೈಸೂರು 43, ರಾಯಚೂರು 10, ರಾಮನಗರ 08, ಶಿವಮೊಗ್ಗ 14, ತುಮಕೂರು 43, ಉಡುಪಿ 14, ಉತ್ತರ ಕನ್ನಡ 21, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 04 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ ತಗ್ಗಿದ ಕೊರೊನಾ ಆತಂಕ..! 1,870 ಹೊಸ ಕೇಸ್; ಬೆಂಗಳೂರಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್
ಅದಲ್ಲದೇ ಚೇತರಿಕೆ ಪ್ರಮಾಣವೂ ಸಹ ದುಪ್ಪಟ್ಟಾಗಿದ್ದು, ಕಳೆದ 24 ಗಂಟೆಯಲ್ಲಿ 2209 ಜನ ಗುಣಮುಖರಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 8,49,821ಕ್ಕೆ ತಲುಪಿದೆ. ಅದಲ್ಲದೇ ಸೋಮವಾರ 13 ಕೊರೊನಾ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 11,778ಕ್ಕೆ ಬಂದು ನಿಂತಿದೆ.
ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 8,84,897ಕ್ಕೆ ಏರಿದೆ. ಇನ್ನೂ 23,279 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. 349 ಜನ ಐಸಿಯನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಪಾಸಿಟಿವಿಟಿ ಪ್ರಮಾಣ ಶೇ.1.22ರಷ್ಟಿದೆ. ಇನ್ನು, ಮರಣ ಪ್ರಮಾಣ ಶೇ.1.30ಕ್ಕೆ ಏರಿದೆ. ಸೋಮವಾರ 7,543 ಆಂಟಿಜೆನ್ ನಡೆಸಿದ್ದರೆ, 73,790 ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲಾಗಿದೆ. ಇದುವರೆಗೂ ಎರಡು ಕೂಡಿ 1,11,01,633 ಪರೀಕ್ಷೆಗಳನ್ನು ನಡೆಸಲಾಗಿದೆ.
ಚಳಿ ನಡುವೆಯೂ ರಾಜ್ಯದಲ್ಲಿ ತಗ್ಗಿದ ಕೊರೊನಾತಂಕ..! ಸಾವಿರದ ಸಮೀಪಕ್ಕೆ ಹೊಸ ಕೇಸ್, ಚೇತರಿಕೆಯೂ ಏರಿಕೆ
ಸೋಮವಾರ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿದಿದ್ದು, 500ಕ್ಕಿಂತ ಕಡಿಮೆ ಕೇಸ್ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 444 ಹೊಸ ಪಾಸಿಟಿವ್ ಕೇಸ್ಗಳು ಸಿಲಿಕಾನ್ ಸಿಟಿಯಲ್ಲಿ ಕಂಡುಬಂದಿವೆ. ಇದರೊಂದಿಗೆ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,69,734ಕ್ಕೆ ಏರಿದೆ. ಇದರಲ್ಲಿ 3,48,348 ಜನ ಚೇತರಿಸಿಕೊಂಡಿದ್ದು, 17,248 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 4137 ಜನ ಬೆಂಗಳೂರಿನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೊನಾ..! 1526 ಪಾಸಿಟಿವ್, 25 ಸಾವಿರಕ್ಕಿಂತ ಹೆಚ್ಚಾದ ಸಕ್ರಿಯ ಕೇಸ್
ಬೆಂಗಳೂರು ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ 03, ಬಳ್ಳಾರಿ 10, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 23, ಬೀದರ್ 02, ಚಾಮರಾಜನಗರ 04, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 14, ಚಿತ್ರದುರ್ಗ 01, ದಕ್ಷಿಣ ಕನ್ನಡ 27, ದಾವಣಗೆರೆ 11, ಧಾರವಾಡ 08 ಹಾಗೂ ಗದಗದಲ್ಲಿ 03 ಹೊಸ ಪ್ರಕರಣಗಳು ಕಂಡುಬಂದಿವೆ.
ಹಾಸನದಲ್ಲಿ 45, ಹಾವೇರಿ 123, ಕಲಬುರಗಿ 15, ಕೊಡಗು 04, ಕೋಲಾರ 12, ಕೊಪ್ಪಳ 10, ಮಂಡ್ಯ 30, ಮೈಸೂರು 43, ರಾಯಚೂರು 10, ರಾಮನಗರ 08, ಶಿವಮೊಗ್ಗ 14, ತುಮಕೂರು 43, ಉಡುಪಿ 14, ಉತ್ತರ ಕನ್ನಡ 21, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 04 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ ತಗ್ಗಿದ ಕೊರೊನಾ ಆತಂಕ..! 1,870 ಹೊಸ ಕೇಸ್; ಬೆಂಗಳೂರಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್