ಬೆಂಗಳೂರು: ಹೋಮ್ ಕ್ವಾರಂಟೈನ್ನಲ್ಲಿರುವ ಕೊರೊನಾ ಶಂಕಿತರು ಮನೆಯಿಂದ ಹೊರ ಬರಕೂಡದು. ಒಂದು ವೇಳೆ ನಿಗದಿತ ಅವಧಿಯ ಒಳಗೆ ಅವರು ಹೊರ ಬಂದರೆ ಐಪಿಸಿ ಸೆಕ್ಷ ನ್ 271ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರು ಕನಿಷ್ಠ 6 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸರಕಾರದ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ. ಹೋಮ್ ಕ್ವಾರಂಟೈನ್ಗೆ ಒಳಗಾದವರನ್ನು ಗುರುತಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತಗಳು ಪೊಲೀಸರಿಗೆ ಸಹಕರಿಸುತ್ತಿವೆ. ಕೆಲವರು ಹೊರಗೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರನ್ನು ನಿಯಂತ್ರಿಸಲು ಕ್ವಾರಂಟೈನ್ಗೆ ಒಳಗಾದವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಾಗುವುದು,’’ ಎಂದು ಹೇಳಿದರು.
12 ಖಾಸಗಿ ಲ್ಯಾಬ್ನಲ್ಲಿ ಕೊರೊನಾ ಟೆಸ್ಟ್ಗೆ ಅನುಮತಿ, ಬೆಂಗಳೂರಿನಲ್ಲೂ ಇದೆ ಪ್ರೈವೆಟ್ ಲ್ಯಾಬ್
ಸೆಕ್ಷನ್ 144 ಮುಂದುವರಿಕೆ
‘‘ಈಗಾಗಲೇ ಲಾಕ್ಡೌನ್ ಆಗಿರುವ 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಮುಂದುವರಿಸಲಾಗುವುದು. ಜತೆಗೆ ಹೋಮ್ ಕ್ವಾರಂಟೈನ್ಗೆ ಒಳಗಾದವರನ್ನು ದಿನಕ್ಕೆ 2 ಬಾರಿ ತಪಾಸಣೆಗೆ ಒಳಪಡಿಸಲಾಗುವುದು. ಪೊಲೀಸರು ಅಂಥವರ ಮನೆಯ ಕಾವಲು ಕಾಯುವುದನ್ನು ಕಡ್ಡಾಯಗೊಳಿಸಲಾಗುವುದು. ಅಗತ್ಯ ಸೇವೆಯಿಂದ ಹೊರತಾದ ಅಂಗಡಿ, ಮುಂಗಟ್ಟು ಮುಚ್ಚುವಂತೆ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ,’’ ಎಂದರು.
ಕೊಡಗಿನಲ್ಲಿ ಕೊರೊನಾ ಭೀತಿ: ಮಾರ್ಚ್ 31ರವರೆಗೆ ಮಸೀದಿ, ಚರ್ಚ್ಗಳಲ್ಲಿ ಪ್ರಾರ್ಥನೆ ನಿಷೇಧ
ಮಾಸ್ಕ್ ತಯಾರಿಕೆ
ಜೈಲಿನಲ್ಲಿಇರುವವರು ಬೇರೆಯವರ ಸಂಪರ್ಕವಿಲ್ಲದ ಕಾರಣ ಸುರಕ್ಷಿತವಿದ್ದಾರೆ. ಈ ನಡುವೆಯೂ ಹೊಸದಾಗಿ ಬಂದ ಕೈದಿಗಳನ್ನು ಪರೀಕ್ಷಿಸಲಾಗುವುದು. ಆ ಬಳಿಕ ಪ್ರತ್ಯೇಕಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕೈದಿಗಳಿಗೆ ಮಾಸ್ಕ್ ತಯಾರಿಸುವ ಜವಾಬ್ದಾರಿ ನೀಡಲಾಗಿದೆ. ದಿನಕ್ಕೆ 5 ಸಾವಿರದಂತೆ ಈಗಾಗಲೇ 17 ಸಾವಿರ ಮಾಸ್ಕ್ ತಯಾರಿಸಿದ್ದಾರೆ. ಪ್ರತಿ ಮಾಸ್ಕ್ಗೆ 6 ರೂ. ದರ ವಿಧಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.
12 ಖಾಸಗಿ ಲ್ಯಾಬ್ನಲ್ಲಿ ಕೊರೊನಾ ಟೆಸ್ಟ್ಗೆ ಅನುಮತಿ, ಬೆಂಗಳೂರಿನಲ್ಲೂ ಇದೆ ಪ್ರೈವೆಟ್ ಲ್ಯಾಬ್
ಸೆಕ್ಷನ್ 144 ಮುಂದುವರಿಕೆ
‘‘ಈಗಾಗಲೇ ಲಾಕ್ಡೌನ್ ಆಗಿರುವ 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಮುಂದುವರಿಸಲಾಗುವುದು. ಜತೆಗೆ ಹೋಮ್ ಕ್ವಾರಂಟೈನ್ಗೆ ಒಳಗಾದವರನ್ನು ದಿನಕ್ಕೆ 2 ಬಾರಿ ತಪಾಸಣೆಗೆ ಒಳಪಡಿಸಲಾಗುವುದು. ಪೊಲೀಸರು ಅಂಥವರ ಮನೆಯ ಕಾವಲು ಕಾಯುವುದನ್ನು ಕಡ್ಡಾಯಗೊಳಿಸಲಾಗುವುದು. ಅಗತ್ಯ ಸೇವೆಯಿಂದ ಹೊರತಾದ ಅಂಗಡಿ, ಮುಂಗಟ್ಟು ಮುಚ್ಚುವಂತೆ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ,’’ ಎಂದರು.
ಕೊಡಗಿನಲ್ಲಿ ಕೊರೊನಾ ಭೀತಿ: ಮಾರ್ಚ್ 31ರವರೆಗೆ ಮಸೀದಿ, ಚರ್ಚ್ಗಳಲ್ಲಿ ಪ್ರಾರ್ಥನೆ ನಿಷೇಧ
ಮಾಸ್ಕ್ ತಯಾರಿಕೆ
ಜೈಲಿನಲ್ಲಿಇರುವವರು ಬೇರೆಯವರ ಸಂಪರ್ಕವಿಲ್ಲದ ಕಾರಣ ಸುರಕ್ಷಿತವಿದ್ದಾರೆ. ಈ ನಡುವೆಯೂ ಹೊಸದಾಗಿ ಬಂದ ಕೈದಿಗಳನ್ನು ಪರೀಕ್ಷಿಸಲಾಗುವುದು. ಆ ಬಳಿಕ ಪ್ರತ್ಯೇಕಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕೈದಿಗಳಿಗೆ ಮಾಸ್ಕ್ ತಯಾರಿಸುವ ಜವಾಬ್ದಾರಿ ನೀಡಲಾಗಿದೆ. ದಿನಕ್ಕೆ 5 ಸಾವಿರದಂತೆ ಈಗಾಗಲೇ 17 ಸಾವಿರ ಮಾಸ್ಕ್ ತಯಾರಿಸಿದ್ದಾರೆ. ಪ್ರತಿ ಮಾಸ್ಕ್ಗೆ 6 ರೂ. ದರ ವಿಧಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.