ಆ್ಯಪ್ನಗರ

ಕೌನ್ಸೆಲಿಂಗ್‌ಗೆ ಮೂಲ ದಾಖಲೆ ಕಡ್ಡಾಯ: ಪೋಷಕರ ಆಕ್ಷೇಪ

ಕೃಷಿ-ತೋಟಗಾರಿಕೆ ವಿವಿಗಳಲ್ಲಿಸ್ನಾತಕ ಪದವಿಗಳಿಗೆ ಕೆಸಿಇಟಿ ಹಾಗೂ ಐಸಿಎಆರ್‌ ಕೋಟಾದಡಿ ಭರ್ತಿಯಾಗದ ಉಳಿಕೆ ಸೀಟುಗಳ ಹಂಚಿಕೆ ವೇಳೆ ಅಭ್ಯರ್ಥಿಗಳ ಮೂಲ ...

Vijaya Karnataka 16 Sep 2019, 5:00 am
ಬೆಂಗಳೂರು: ಕೃಷಿ-ತೋಟಗಾರಿಕೆ ವಿವಿಗಳಲ್ಲಿಸ್ನಾತಕ ಪದವಿಗಳಿಗೆ ಕೆಸಿಇಟಿ ಹಾಗೂ ಐಸಿಎಆರ್‌ ಕೋಟಾದಡಿ ಭರ್ತಿಯಾಗದ ಉಳಿಕೆ ಸೀಟುಗಳ ಹಂಚಿಕೆ ವೇಳೆ ಅಭ್ಯರ್ಥಿಗಳ ಮೂಲ ದಾಖಲೆಸಲ್ಲಿಕೆ ಕಡ್ಡಾಯ ಮಾಡಿದ್ದರಿಂದ ಭಾನುವಾರ ನೆಡೆದ ಕೌನ್ಸೆಲಿಂಗ್‌ಗೆ ಕೆಲ ಪೋಷಕರು ತಗಾದೆ ಎತ್ತಿದ ಪ್ರಸಂಗ ಭಾನುವಾರ ನಡೆಯಿತು.
Vijaya Karnataka Web counseling orginal document
ಕೌನ್ಸೆಲಿಂಗ್‌ಗೆ ಮೂಲ ದಾಖಲೆ ಕಡ್ಡಾಯ: ಪೋಷಕರ ಆಕ್ಷೇಪ


ಬೆಂಗಳೂರು ಕೃಷಿ ವಿವಿ ಕ್ಯಾಂಪಸ್‌ ಜಿಕೆವಿಕೆಯಲ್ಲಿಬೆಳಗ್ಗೆ ಕೌನ್ಸೆಲಿಂಗ್‌ ಆರಂಭವಾಗುತ್ತಿದ್ದಂತೆ ಮೂಲ ದಾಖಲೆ ಕಡ್ಡಾಯವಾಗಿ ಸಲ್ಲಿಸುವ ವಿಚಾರಕ್ಕೆ ಪೋಷಕರು ವಿವಿ ಪ್ರತಿನಿಧಿಗಳನ್ನು ಪ್ರಶ್ನಿಸಿದರು. ಈ ವೇಳೆ ಕೆಲ ಕಾಲ ಕೌನ್ಸೆಲಿಂಗ್‌ ಪ್ರಕ್ರಿಯೆ ನಿಧಾನಗೊಂಡಿತು. ಗದ್ದಲ ಹೆಚ್ಚಾದ ಕಾರಣ ಪೊಲೀಸರ ಮಧ್ಯಪ್ರವೇಶದಿಂದ ಕೌನ್ಸೆಲಿಂಗ್‌ ಮುಂದುವರಿಸಲಾಯಿತು. ಆದರೆ, ಮೂಲ ದಾಖಲೆ ಸಲ್ಲಿಸದವರು ಬರಿಗೈಲಿ ವಾಪಸ್ಸಾಗಬೇಕಾಯಿತು.

ರಾಜ್ಯದ ಕೃಷಿ, ತೋಟಗಾರಿಕೆ ಹಾಗೂ ಪಶುವೈದ್ಯ ಕಾಲೇಜುಗಳಲ್ಲಿಉಳಿದಿದ್ದ ಸುಮಾರು 250 ಸೀಟುಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಯಿತು. ಈ ಪ್ರಕ್ರಿಯೆ ರಾತ್ರಿವರೆಗೂ ನಡೆಯಿತು. ಆಯಾ ಕಾಲೇಜುಗಳ ರಿಜಿಸ್ಟ್ರಾರ್‌ಗಳು ಖುದ್ದು ಹಾಜರಿದ್ದು, ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಕೌನ್ಸೆಲಿಂಗ್‌ ಕುರಿತು 'ವಿಕ'ದೊಂದಿಗೆ ಮಾತನಾಡಿದ ಬೆಂಗಳೂರು ಕೃಷಿ ವಿವಿ ರಿಜಿಸ್ಟ್ರಾರ್‌ ಡಾ.ಮಹಾಬಲೇಶ್ವರ ಹೆಗಡೆ ''ರಾಜ್ಯದ ಕೃಷಿ ಸಂಬಂಧಿತ ಸ್ನಾತಕ ಪದವಿಗಳಿಗೆ ಸಿಇಟಿ ನಿಯಮಗಳ ಪ್ರಕಾರವೇ ಕೌನ್ಸೆಲಿಂಗ್‌ ನಡೆಸಲಾಯಿತು,'' ಎಂದು ಸ್ಪಷ್ಟಪಡಿಸಿದರು.

''ಉಳಿಕೆ ಸೀಟುಗಳನ್ನು ಭರ್ತಿ ಮಾಡಿಕೊಳ್ಳುವ ಮುನ್ನವೇ ವಿವಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ಜತೆಗೆ ಕೌನ್ಸೆಲಿಂಗ್‌ಗೆ ಬರುವಾಗ ಜತೆಯಲ್ಲೇ ಮೂಲ ದಾಖಲಾತಿ ತರುವಂತೆ ತಿಳಿಸಲಾಗಿತ್ತು. ಹೀಗೆ ಮಾಡದೆ ಕೆಲ ಅಭ್ಯರ್ಥಿಗಳು ನಕಲು ಪತ್ರಗಳನ್ನು ಆಧರಿಸಿ ಸೀಟು ಹಂಚಿಕೆಗೆ ಪಟ್ಟು ಹಿಡಿದಿದ್ದರು. ವಿವಿ ನಿಯಮಾವಳಿಗಳನ್ನು ಪೋಷಕರಿಗೆ ತಿಳಿಸಿದ ಬಳಿಕ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು,'' ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ