ಬೆಂಗಳೂರು: ಕೋವಿಡ್ನಿಂದ ನಲುಗಿಸುವ ಹೋಟೆಲ್ ಉದ್ಯಮಕ್ಕೆ ಇನ್ನು ಮುಂದೆ ಕೈಗಾರಿಕಾ ಸ್ಥಾನಮಾನ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋವಿಡ್ ನಿಂದ ಪ್ರವಾಸೋದ್ಯಮ ನಲುಗಿಹೋಗಿದೆ. ಇದನ್ನೇ ನಂಬಿಕೊಂಡಿದ್ದ ಸಂಸ್ಥೆ ಆರ್ಥಿಕ ಹಿಂಜರಿತ ಕಂಡಿವೆ, ಈ ಸಂಸ್ಥೆಗಳಿಗೆ ಚೇತರಿಕೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲಾಗುತ್ತಿದೆ ಎಂದರು.
ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ, ಯಶಸ್ವಿಯಾಗುತ್ತಾ ಸರ್ಕಾರದ ಪ್ರಯತ್ನ?
ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದ್ದು, 73 ಸ್ಟಾರ್ ಹೋಟೆಲ್ಗಳನ್ನ ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ. ತೆರಿಗೆ ಶುಲ್ಕ ಎಲ್ಲವೂ ಕಡಿಮೆ ಮಾಡಲಾಗುತ್ತದೆ ಈ ಮೂಲಕ ಹೋಟೆಲ್ ಉದ್ಯಮ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಮರ್ಷಿಯಲ್ ದರದಲ್ಲಿ ಹೊಟೇಲ್ ನಿರ್ಮಾಣವಾಗುತ್ತಿತ್ತು. ಈಗ ಕೈಗಾರಿಕೆ ಸ್ಥಾನಮಾನ ನೀಡಲಾಗ್ತಿದೆ. ಇದರಿಂದ ತೆರಿಗೆ, ಶುಲ್ಕ ಕಡಿಮೆಯಾಗಲಿದೆ. ಪ್ರವಾಸೋದ್ಯಮಕ್ಕೂ ಉಪಯೋಗವಾಗಲಿದೆ. ಆದರೆ ಸಣ್ಣ ಪುಟ್ಟ ಹೋಟೆಲ್ಗಳು ಇದರಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸುಮಾರು 2 ಸ್ಟಾರ್ ಹೊಂದಿರುವ ಸಾವಿರ ಹೊಟೇಲ್ ಗಳಿವೆ ಹಾಗೂ ಸ್ಟಾರ್ ಹೊಟೇಲ್ ಗಳಿವೆ. ಹೆಚ್ಚು ತೆರಿಗೆ ಕಟ್ಟೋದ್ರಿಂದ ಇವೆರೆಲ್ಲಾ ಕೈಗಾರಿಕೆಗಳಡಿ ಬರುತ್ತಿರಲಿಲ್ಲ. ಆದರೆ ಇದೀಗ ಸಿಂಗಲ್ ಸ್ಟಾರ್ ನಿಂದ 5 ಸ್ಟಾರ್ ವರೆಗೆ ಕೈಗಾರಿಕಾ ಮಾನ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ 150 ಕೋಟಿ ಹೊರೆ ಬೀಳಲಿದೆ. ಆದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಕೇರಳ,ಗುಜರಾತ್ ನಲ್ಲಿ ಹೆಚ್ಚು ಸೌಲಭ್ಯಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಸೌಲಭ್ಯಗಳು ಕಡಿಮೆ. ಹಾಗಾಗಿ ಅನಾನುಕೂಲ ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ, ಯಶಸ್ವಿಯಾಗುತ್ತಾ ಸರ್ಕಾರದ ಪ್ರಯತ್ನ?
ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದ್ದು, 73 ಸ್ಟಾರ್ ಹೋಟೆಲ್ಗಳನ್ನ ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ. ತೆರಿಗೆ ಶುಲ್ಕ ಎಲ್ಲವೂ ಕಡಿಮೆ ಮಾಡಲಾಗುತ್ತದೆ ಈ ಮೂಲಕ ಹೋಟೆಲ್ ಉದ್ಯಮ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಮರ್ಷಿಯಲ್ ದರದಲ್ಲಿ ಹೊಟೇಲ್ ನಿರ್ಮಾಣವಾಗುತ್ತಿತ್ತು. ಈಗ ಕೈಗಾರಿಕೆ ಸ್ಥಾನಮಾನ ನೀಡಲಾಗ್ತಿದೆ. ಇದರಿಂದ ತೆರಿಗೆ, ಶುಲ್ಕ ಕಡಿಮೆಯಾಗಲಿದೆ. ಪ್ರವಾಸೋದ್ಯಮಕ್ಕೂ ಉಪಯೋಗವಾಗಲಿದೆ. ಆದರೆ ಸಣ್ಣ ಪುಟ್ಟ ಹೋಟೆಲ್ಗಳು ಇದರಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸುಮಾರು 2 ಸ್ಟಾರ್ ಹೊಂದಿರುವ ಸಾವಿರ ಹೊಟೇಲ್ ಗಳಿವೆ ಹಾಗೂ ಸ್ಟಾರ್ ಹೊಟೇಲ್ ಗಳಿವೆ. ಹೆಚ್ಚು ತೆರಿಗೆ ಕಟ್ಟೋದ್ರಿಂದ ಇವೆರೆಲ್ಲಾ ಕೈಗಾರಿಕೆಗಳಡಿ ಬರುತ್ತಿರಲಿಲ್ಲ. ಆದರೆ ಇದೀಗ ಸಿಂಗಲ್ ಸ್ಟಾರ್ ನಿಂದ 5 ಸ್ಟಾರ್ ವರೆಗೆ ಕೈಗಾರಿಕಾ ಮಾನ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ 150 ಕೋಟಿ ಹೊರೆ ಬೀಳಲಿದೆ. ಆದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಕೇರಳ,ಗುಜರಾತ್ ನಲ್ಲಿ ಹೆಚ್ಚು ಸೌಲಭ್ಯಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಸೌಲಭ್ಯಗಳು ಕಡಿಮೆ. ಹಾಗಾಗಿ ಅನಾನುಕೂಲ ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.