ಆ್ಯಪ್ನಗರ

ಅಖಾಡಕ್ಕಿಳಿದ ಸೈಬರ್‌ ಖದೀಮರು!

ಒಂದು ಕಡೆ ಐಎಂಎನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಹೂಡಿಕೆದಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ, ಮತ್ತೊಂದು ಕಡೆ ಸೈಬರ್‌ ಖದೀಮರು ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ.

Vijaya Karnataka 14 Jun 2019, 5:00 am
ಬೆಂಗಳೂರು: ಒಂದು ಕಡೆ ಐಎಂಎನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಹೂಡಿಕೆದಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ, ಮತ್ತೊಂದು ಕಡೆ ಸೈಬರ್‌ ಖದೀಮರು ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ.
Vijaya Karnataka Web cyber criminals activity
ಅಖಾಡಕ್ಕಿಳಿದ ಸೈಬರ್‌ ಖದೀಮರು!


ತಮ್ಮನ್ನು ತಾವು ಐಎಂಎ ಕಂಪನಿಯವರು ಎಂದು ಹೇಳಿಕೊಂಡು ಹೂಡಿಕೆದಾರರ ಮೊಬೈಲ್‌ಗೆ ಕರೆ ಮಾಡುತ್ತಿರುವ ಖದೀಮರು 'ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದೇವೆ. ನಿಮ್ಮ ಬ್ಯಾಂಕ್‌ ಖಾತೆ ನಂಬರ್‌ ಅದರ ಪಾಸ್‌ವರ್ಡ್‌, ಎಟಿಎಂ ಕಾರ್ಡ್‌ ನಂಬರ್‌, ಅದರ ಸಿವಿವಿ, ಪಾಸ್‌ವರ್ಡ್‌ ಇತ್ಯಾದಿಗಳನ್ನು ನೀಡಿ' ಎಂದು ಕೇಳಿ ಮಾಹಿತಿ ಪಡೆದುಕೊಳ್ಳುತ್ತಿರುವ ಬಗ್ಗೆ ಹಲವಾರು ಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಏನು ಎಚ್ಚರಿಕೆ?: ಸಾರ್ವಜನಿಕರು ಮತ್ತು ಹೂಡಿಕೆದಾರರು ಐಎಂಎ ಹೆಸರಿನಲ್ಲಿ ಬರುವ ಕರೆಗಳಿಗೆ ಕಿವಿಗೊಡಬಾರದು. ಈ ರೀತಿ ಯಾವುದೇ ಕರೆಗಳು ಬಂದರೆ ಆ ಬಗ್ಗೆ ತಕ್ಷಣ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಯಾರೇ ಕರೆ ಮಾಡಿದರೂ ಬ್ಯಾಂಕ್‌ನ ವಿವರಗಳನ್ನು ನೀಡಬಾರದು. ಈ ರೀತಿ ಕರೆಗಳ ಮೂಲಕ ಬ್ಯಾಂಕ್‌ನ ವಿವರ ಪಡೆದು ಖಾತೆಯಲ್ಲಿರುವ ಹಣವನ್ನೂ ಲಪಟಾಯಿಸುವ ಸಲುವಾಗಿಯೇ ಸೈಬರ್‌ ಖದೀಮರು ಇಂಥಾ ಕೃತ್ಯಗಳಿಗೆ ಇಳಿದಿರುವ ಸಾಧ್ಯತೆಗಳಿವೆ ಎಂದು ಪೋಲಿಸ್‌ ಇಲಾಖೆ ಎಚ್ಚರಿಕೆ ನೀಡಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ