ಆ್ಯಪ್ನಗರ

ಎಲ್ಲ ಗೊತ್ತಿದ್ರೂ ಸಿಎಂ ಏನೂ ಮಾಡ್ಲಿಲ್ಲ: ಡಿಕೆಶಿ

ಮೈತ್ರಿ ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಡಿಕೆಶಿ ಪ್ರತಿ ಹಂತದಲ್ಲೂ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದರು. ಸರಕಾರದ ಭವಿಷ್ಯ ಆತಂಕದಲ್ಲಿ ಸಿಲುಕಿದಾಗ ಮುಂಚೂಣಿಯಲ್ಲಿ ನಿಂತು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದರು. ಆದರೆ ಈಗ ಎಚ್‌ಡಿಕೆ ವಿರುದ್ಧವೇ ಮುನಿಸಿಕೊಂಡಂತೆ ಕಾಣಿಸುತ್ತಿದೆ.

Vijaya Karnataka 16 Jan 2019, 7:52 am
ಬೆಂಗಳೂರು: ಆಪರೇಷನಲ್‌ ಕಮಲದ ಬಗ್ಗೆ ಮಾಹಿತಿಯಿದ್ದರೂ ಅದನ್ನು ತಡೆಯಲು ಸಿಎಂ ಮುಂದಾಗಲಿಲ್ಲವೆಂಬ ಧಾಟಿಯಲ್ಲಿ ಮಾತಾಡಿರುವ ದೋಸ್ತಿ ಸರಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web dks


ಮೈತ್ರಿ ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಡಿಕೆಶಿ ಪ್ರತಿ ಹಂತದಲ್ಲೂ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದರು. ಸರಕಾರದ ಭವಿಷ್ಯ ಆತಂಕದಲ್ಲಿ ಸಿಲುಕಿದಾಗ ಮುಂಚೂಣಿಯಲ್ಲಿ ನಿಂತು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದರು. ಆದರೆ ಈಗ ಎಚ್‌ಡಿಕೆ ವಿರುದ್ಧವೇ ಮುನಿಸಿಕೊಂಡಂತೆ ಕಾಣಿಸುತ್ತಿದೆ.

''ಬಿಜೆಪಿಯವರು ಏನೇನು ಮಾಡುತ್ತಿದ್ದಾರೆ. ಶಾಸಕರಿಗೆ ಏನೆಲ್ಲ ಆಮಿಷವೊಡ್ಡಿದ್ದಾರೆ ಎನ್ನುವುದು ಸಿಎಂಗೆ ಗೊತ್ತಿತ್ತು. ಶಾಸಕರೇ ಬಂದು ಈ ವಿಚಾರವನ್ನು ಅವರ ಬಳಿ ಹೇಳಿಕೊಂಡಿದ್ದಾರೆ. ಗುಪ್ತಚರ ಮಾಹಿತಿಯೂ ಇರುತ್ತದೆ. ಆದರೆ, ಅವರು ಏನೂ ಮಾಡಿಲ್ಲ. ಒಂದು ವೇಳೆ ನಾನಾಗಿದ್ದರೆ ಸರಕಾರ ಬೀಳಿಸಲು ಏನೆಲ್ಲ ಮಾಡಲಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸುತ್ತಿದ್ದೆ,'' ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ