ಆ್ಯಪ್ನಗರ

ಪಾಕ್‌ ಯುದ್ಧ ಗೆಲ್ಲಿಸಿದ ಡಕೋಟಾ ವಿಮಾನದ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ

ಭಾರತೀಯ ವಾಯುಸೇನೆ ಮತ್ತು ಫ್ಲ್ಯಾಗ್‌ ಆಫ್‌ ಹಾನರ್ಸ್‌ ಸಂಸ್ಥೆ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಾಯು ಸೇನೆಯ ಏರ್‌ ಮಾರ್ಷಲ್‌ ರಾಕೇಶ್‌ ಸಿಂಗ್‌ ಭದುರಿಯಾ ಅಂಚೆ ಲಕೋಟೆ ಲೋಕಾರ್ಪಣೆ ಮಾತನಾಡಿದರು.

Vijaya Karnataka 28 Oct 2018, 10:47 am
ಬೆಂಗಳೂರು: ಭಾರತ-ಪಾಕಿಸ್ತಾನ ಯುದ್ಧದಲ್ಲಿ ಬಳಕೆಯಾಗಿದ್ದ ಡಕೋಟಾ ಪಿವಿ-905 ವಿಮಾನದ ನೆನಪಿನ ಅಂಗವಾಗಿ ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.
Vijaya Karnataka Web gom


ಭಾರತೀಯ ವಾಯುಸೇನೆ ಮತ್ತು ಫ್ಲ್ಯಾಗ್‌ ಆಫ್‌ ಹಾನರ್ಸ್‌ ಸಂಸ್ಥೆ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಾಯು ಸೇನೆಯ ಏರ್‌ ಮಾರ್ಷಲ್‌ ರಾಕೇಶ್‌ ಸಿಂಗ್‌ ಭದುರಿಯಾ ಅಂಚೆ ಲಕೋಟೆ ಲೋಕಾರ್ಪಣೆ ಮಾತನಾಡಿದರು.

''ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಲೆಫ್ಟಿನೆಂಟ್‌ ಕರ್ನಲ್‌ ದಿವಾನ್‌ ರಂಜಿತ್‌ ರಾಯ್‌ ನೇತೃತ್ವದ ಸಿಖ್‌ ರೆಜಿಮೆಂಟ್‌ ಸೈನಿಕರ ತಂಡವನ್ನು ವಿಂಗ್‌ ಕಮಾಂಡರ್‌ ಕೆ.ಎಲ್‌.ಭಾಟಿಯಾ ಅವರು ಡಕೋಟಾ ವಿಮಾನದಲ್ಲಿ ಕರೆದೊಯ್ದು ಶ್ರೀನಗರದಲ್ಲಿ ಇಳಿಸಿದ್ದರು. ಇದರಿಂದ ಯುದ್ಧದಲ್ಲಿ ಗೆಲವು ಸಾಧಿಸಲು ಅನುಕೂಲವಾಯಿತು. ಯುದ್ಧ ಪರಿಕರ ಹಾಗೂ ಸೈನಿಕರನ್ನು ಸಾಗಿಸಲು ಮೊದಲ ಬಾರಿಗೆ ಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಈ ವಿಮಾನಕ್ಕೆ ಪರಶುರಾಮ ಎಂದು ಹೆಸರಿಡಲಾಗಿತ್ತು,'' ಎಂದು ಅವರು ಸ್ಮರಿಸಿದರು.

ಅಂಚೆ ಇಲಾಖೆ ಕರ್ನಾಟಕ ವಿಭಾಗದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಚಾರ್ಲ್ಸ್ ಲೋಬೋ, ಏರ್‌ ವೈಸ್‌ ಮಾರ್ಷಲ್‌ ವಿಜಯ್‌ ಪಾಲ್‌ ಸಿಂಗ್‌ ರಾಣಾ, ಸಂಸದ ರಾಜೀವ್‌ ಚಂದ್ರಶೇಖರ್‌ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ