ಆ್ಯಪ್ನಗರ

ಸಂಕೋಲೆಗಳ ಗೋಡೆ ಕೆಡವಿದ ದಲಿತ ಸಾಹಿತ್ಯ

ದಲಿತ ಸಾಹಿತ್ಯ ತನ್ನ ಸುತ್ತ ಗೋಡೆಗಳನ್ನು ನಿರ್ಮಿಸಿಕೊಂಡಿಲ್ಲ. ಬದಲಿಗೆ ಸಂಕೋಲೆಯ ಗೋಡೆಗಳನ್ನು ಉರುಳಿಸಿದೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಹೇಳಿದರು.

Vijaya Karnataka 19 Aug 2019, 5:00 am
ಕೋಲಾರ : ದಲಿತ ಸಾಹಿತ್ಯ ತನ್ನ ಸುತ್ತ ಗೋಡೆಗಳನ್ನು ನಿರ್ಮಿಸಿಕೊಂಡಿಲ್ಲ. ಬದಲಿಗೆ ಸಂಕೋಲೆಯ ಗೋಡೆಗಳನ್ನು ಉರುಳಿಸಿದೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಹೇಳಿದರು.
Vijaya Karnataka Web dalita sahitya smmelana closing function
ಸಂಕೋಲೆಗಳ ಗೋಡೆ ಕೆಡವಿದ ದಲಿತ ಸಾಹಿತ್ಯ


ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು,''ಸಾಹಿತ್ಯಲೋಕ ಎಂಬ ಮಹಾನದಿಗೆ ಹಲವಾರು ಉಪನದಿಗಳು ಸೇರುತ್ತವೆ. ಅದರಲ್ಲಿ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ ಸೇರಿದಂತೆ ಹಲವಾರು ಸಾಹಿತ್ಯಗಳು ಉಪನದಿಗಳ ರೀತಿಯಲ್ಲಿ ಸೇರುತ್ತವೆ. ದಲಿತ ಸಾಹಿತ್ಯ ಉಪನದಿಯಾಗಿದ್ದರೂ, ತನ್ನ ವ್ಯಾಪ್ತಿಯನ್ನು ಮೀರಿ ಹರಿಯುತ್ತಿದೆ,'' ಎಂದು ಸಂತಸ ವ್ಯಕ್ತಪಡಿಸಿದರು.

ಛಾಪು ಮೂಡಿಸಬೇಕು:

''ದಲಿತ ಸಾಹಿತ್ಯವು ವಚನಗಳು, ತತ್ವಪದಗಳಿಂದ ಪ್ರೇರೇಪಿತವಾಗಿದ್ದು, 50 ವರ್ಷಗಳ ಚರಿತ್ರೆ ಹೊಂದಿದೆ. ಕಡಿಮೆ ಅವಧಿಯಲ್ಲಿಯೇ ಗಟ್ಟಿಯಾದ ಸಾಹಿತ್ಯ ಹೊಂದುವ ಮೂಲಕ ಭದ್ರ ಬುನಾದಿ ಹಾಕಿಕೊಂಡಿದೆ. ಉಳಿದ ಮೀಮಾಂಸೆಗಳಲ್ಲಿಯೂ ತನ್ನ ಛಾಪು ಮೂಡಿಸಬೇಕಿದೆ ಎಂದು,''ಎಂದು ಮಲ್ಲೇಪುರಂ ನುಡಿದರು.

ಸಮ್ಮೇಳನಾಧ್ಯಕ್ಷ ಎಲ್‌.ಹನುಮಂತಯ್ಯ,'' ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ಜೀವಂತವಾಗಿರಿಸಿಕೊಂಡು ನವಭಾರತ ನಿರ್ಮಿಸಲು ನಾವಿಂದು ಮುಂದಾಗಿದ್ದೇವೆ. ಆಧುನಿಕ ಯುಗದಲ್ಲಿ ಹಲವಾರು ತಂತ್ರಜ್ಞಾನಗಳು ಬಂದರೂ, ದೇಶದಾದ್ಯಂತ ಮಲಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುತ್ತಿದ್ದರೂ, ಮ್ಯಾನ್‌ಹೋಲ್‌ಗಳಿಗೆ ಜನರನ್ನು ಬಳಸಲಾಗುತ್ತಿದ್ದು, ಇಂತಹ ವಿಚಾರಗಳನ್ನು ಸಮಾಜದ ಗಮನಕ್ಕೆ ತರಬೇಕಿದೆ,'' ಎಂದು ಹೇಳಿದರು.

ಸಮ್ಮೇಳನದಲ್ಲಿ ಬಾನಂದೂರು ಕೆಂಪಯ್ಯ, ಡಾ.ಎಂ.ವೆಂಕಟಸ್ವಾಮಿ, ಮಾವಳ್ಳಿ ಶಂಕರ್‌, ಪ್ರೊ.ಬಿ.ಸುಕನ್ಯಾ, ಮದನ್‌ ಪಟೇಲ್‌, ಸಿ.ಮುನಿಯಪ್ಪ ಸೇರಿದಂತೆ ದಲಿತ ಮುಖಂಡರನ್ನು ಸನ್ಮಾನ ಮಾಡಲಾಯಿತು. ಈ ವೇಳೆ ವಿಧಾನಪರಿಷತ್‌ ಸದಸ್ಯ ತೂಪಲ್ಲಿ ಆರ್‌.ಚೌಡರೆಡ್ಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ ಕುಮಾರ್‌ ಹೊಸಮನಿ, ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮತ್ತಿತರರಿದ್ದರು.

ಅದ್ಧೂರಿ ತೆರೆ :

ಸಾಹಿತ್ಯ ಪರಿಷತ್ತಿನಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿತು. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ದಲಿತ ಚಳವಳಿಗಾರರನ್ನು ಗೌರವಿಸಲಾಯಿತು. ಸಮ್ಮೇಳನದ ಚರ್ಚೆ,ವಿಚಾರ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ