ಆ್ಯಪ್ನಗರ

ಸೋಮವಾರ ಖಾಸಗಿ ಬಸ್‌ ಸಂಚಾರ..! ಸಾರಿಗೆ ನೌಕರರು ಕೆಲಸಕ್ಕೆ ಬರ್ತಾರೆ: ಲಕ್ಷ್ಮಣ ಸವದಿ ವಿಶ್ವಾಸ

ಸಂಧಾನದ ಬಳಿಕ ಕಾರ್ಮಿಕರು ಉಲ್ಟಾ ಹೊಡೆದ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನಿವಾಸದಲ್ಲಿ ಸಚಿವರ ಸಭೆ ನಡೆಯಿತು. ಬೆಳಗ್ಗೆವರೆಗೂ ಕಾದು ನೋಡುತ್ತೇವೆ. ಸೋಮವಾರ ಖಾಸಗಿ ಬಸ್‌ ಸಂಚಾರ ನಡೆಸಲಾಗುತ್ತದೆ. ಸಾರಿಗೆ ನೌಕರರು ಕೆಲಸಕ್ಕೆ ಬರ್ತಾರೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vijaya Karnataka Web 14 Dec 2020, 12:18 am
ಬೆಂಗಳೂರು: ಬೆಳಗ್ಗೆವರೆಗೂ ಕಾದು ನೋಡುತ್ತೇವೆ. ಖಾಸಗಿ ಬಸ್‌ ನೀಡಲು ಹಲವರು ಒಪ್ಪಿಕೊಂಡಿದ್ದಾರೆ. ಸಾರಿಗೆ ನೌಕರರಿಗೆ ಈಗಲೂ ಫೋನ್‌ ಮಾಡಿ ಮಾತಿಗೆ ತಕ್ಕಂತೆ ನಡೆಯಬೇಕು ಎಂದು ಹೇಳಿದ್ದೇವೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
Vijaya Karnataka Web laxman savadi
ಲಕ್ಷ್ಮಣ ಸವದಿ, ಡಿಸಿಎಂ ಹಾಗೂ ಸಾರಿಗೆ ಸಚಿವ


ಸಾರಿಗೆ ನೌಕರರು ಮುಷ್ಕರ ಹಿಂಪಡೆಯದ ಹಿನ್ನೆಲೆ ನಡೆದ ಸಿಎಂ ಜೊತೆ ನಡೆದ ಸಭೆ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿಯವರು ಸ್ವಯಂ ಪ್ರೇರಿತರಾಗಿ ಬಂದು ಸೇವೆ ನೀಡಬಹುದು. ಎಲ್ಲವನ್ನೂ ಒಪ್ಪಿಕೊಂಡು ಹೋಗಿ ಹೀಗೆ ಮಾಡುವುದು ಸರಿಯಲ್ಲ. ಇದು ಸಾರಿಗೆ ಇಲಾಖೆಗೆ ಮಾಡುವ ಅಪಚಾರ ಎಂದು ತಿಳಿಸಿದರು.

ನಾಳೆ ಜನರು ಬಸ್‌ ನಿಲ್ದಾಣಗಳಿಗೆ ಬರಬಹುದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇವೆ. ಯಾರಾದ್ರೂ ಅಡ್ಡಿಪಡಿಸಿದರೆ ಸೂಕ್ರ ಕ್ರಮ ತೆಗೆದುಕೊಳ್ಳುತ್ತೇವೆ. ಮಾಧ್ಯಮದವರ ಮುಂದೆಯೇ ಎಲ್ಲದಕ್ಕೂ ಒಪ್ಪಿಕೊಂಡು. ಬಳಿಕ ಯಾರದೋ ವೈಯಕ್ತಿಕ ಪ್ರತಿಷ್ಠೆಗಾಗಿ ಸಾರಿಗೆ ನೌಕರರು ಹೀಗೆ ಮಾಡಬಾರದು ಎಂದು ಹೇಳಿದರು.

ಕಾರ್ಮಿಕರ ದಿಕ್ಕು ತಪ್ಪಿಸಲಾಗುತ್ತಿದೆ..! ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ ಎಂದ ಅಶ್ವತ್ಥನಾರಾಯಣ

ಬಳಿಕ ಮಾತನಾಡಿದ ‌ಗೃಹಸಚಿವ ಬಸವರಾಜ್ ಬೊಮ್ಮಾಯಿ, ಸಾರ್ವಜನಿಕರ ಹಿತದೃಷ್ಟಿಯಿಂದ ಹಲವರು ಕೆಲಸ ಮಾಡಲು ತಯಾರಿದ್ದಾರೆ. ಖಾಸಗಿಯವರು ಬಂದರೆ ಸಹಕಾರ ನೀಡುತ್ತೇವೆ. ಅಡ್ಡಿಪಡಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇಲ್ಲೊಂದು ಹೇಳೋದು.. ಅಲ್ಲೊಂದು ಹೇಳೋದು..: ಸಾರಿಗೆ ನೌಕರರ ವಿರುದ್ಧ ಬೊಮ್ಮಾಯಿ ಕಿಡಿ

ಡಬಲ್‌ ಗೇಮ್‌ ಆಡುವ ಒಕ್ಕೂಟದಿಂದ ಸಾರಿಗೆ ನೌಕರರಿಗೆ ಭರವಸೆ ಇರಲ್ಲ. ಎಸ್ಮಾ ಜಾರಿ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ಸಭೆ ನಡೆಸಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ಮುಷ್ಕರ ಕೈಬಿಡಲು ಸಾರಿಗೆ ನೌಕರರಿಗೆ ಸಿಎಂ ಕರೆ..! ಕೋಡಿಹಳ್ಳಿ ವಿರುದ್ಧ ಹರಿಹಾಯ್ದ ಯಡಿಯೂರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ