ಆ್ಯಪ್ನಗರ

ಫಲಿತಾಂಶ ಬಂದ್ಮೇಲೂ ಬುದ್ಧಿ ಕಲೀದಿದ್ರೆ ಜನ ಕಲಿಸ್ತಾರೆ: ಮೈತ್ರಿಗೆ ಚೆಲುವರಾಯಸ್ವಾಮಿ ಕಿಡಿ

ಈ ಪಕ್ಷವನ್ನು ಈ ಸ್ಥಿತಿಗೆ ಬರದೇ ಇರೋತರ ನೋಡಿಕೊಳ್ಳುವ ಜವಾಬ್ದಾರಿ ಪಕ್ಷದ ಎಲ್ಲಾ ಮುಖಂಡರ ಜವಾಬ್ದಾರಿ ಆಗಿರುತ್ತದೆ. ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡೋಕೆ ಹೋಗಲ್ಲ. ಆದ್ರೆ ಇದುವರೆಗಿನ ನಡವಳಿಕೆ ನೋಡ್ತಿದ್ರೆ ಪಕ್ಷಕ್ಕೆ ಒಳ್ಳೆ ಭವಿಷ್ಯ ಕಾಣ್ತಿಲ್ಲ ಎಂದು ಹೇಳಿದರು.

Vijaya Karnataka Web 7 Jun 2019, 4:16 pm
ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ಜತೆ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಇದನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ವರಿಷ್ಠ ನಾಯಕರು ತೀರ್ಮಾನ ಕೈಗೊಳ್ಳಲಿ ಎಂದು ಕಾಂಗ್ರೆಸ್‌ ನಾಯಕ ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.
Vijaya Karnataka Web ಚಲುವರಾಯಸ್ವಾಮಿ
ಚಲುವರಾಯಸ್ವಾಮಿ


ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ದ. ಆದ್ರೆ ಇದೇ ತರ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತೆ. ನಮ್ಮ ನಾಯಕರು ಇದನ್ನ ಸರಿಪಡಿಸಬೇಕು. ಇಲ್ಲ ಒಂದು ಫೂರ್ಣ ಪ್ರಮಾಣದ ತೀರ್ಮಾನ ತೆಗೋಬೇಕು ಎಂದು ಪರೋಕ್ಷವಾಗಿ ಮೈತ್ರಿ ಕಡಿತ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸ್ಪಷ್ಟ ನಿರ್ಧಾರ ಆಗ್ಲಿಲ್ಲ ಅಂದ್ರೆ ಮುಂದೆ ಈ ಪಕ್ಷವನ್ನು ಈ ಸ್ಥಿತಿಗೆ ಬರದೇ ಇರೋತರ ನೋಡಿಕೊಳ್ಳುವ ಜವಾಬ್ದಾರಿ ಪಕ್ಷದ ಎಲ್ಲಾ ಮುಖಂಡರ ಜವಾಬ್ದಾರಿ ಆಗಿರುತ್ತದೆ.
ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡೋಕೆ ಹೋಗಲ್ಲ. ಆದ್ರೆ ಇದುವರೆಗಿನ ನಡವಳಿಕೆ ನೋಡ್ತಿದ್ರೆ ಪಕ್ಷಕ್ಕೆ ಒಳ್ಳೆ ಭವಿಷ್ಯ ಕಾಣ್ತಿಲ್ಲ ಎಂದು ಹೇಳಿದರು.

ನನ್ನೊಬ್ಬನ ಕೈಲಿ ಏನೂ ಇಲ್ಲ ಕೆಲವರಿಗೆ ಮನವರಿಕೆಯಾಗಿದೆ, ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಜನ ಒಂದ್ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೆ ಮಾಡಿದ್ರೆ ಜನ ತೀರ್ಮಾನ ಮಾಡಿ ಪಾಠ ಕಲಿಸುತ್ತಾರೆ ಬಿಡಿ ಎಂದು ಮಂಡ್ಯ ಕಾಂಗ್ರೆಸ್‌ ನಾಯಕರು ಭವಿಷ್ಯ ನುಡಿದರು.

ಈ ತರದನ್ನ ಇನ್ನೂ ಮುಂದುವರಿಸಿದ್ರೆ, ಎಲ್ಲರಿಗೂ ಕಷ್ಟ. ಇನ್ನೂನು ಬುದ್ದಿ ಕಲಿತ್ತಿಲ್ಲ ನಾವು. 23ರ ಫಲಿತಾಂಶ ಬಂದ್ಮೇಲು ಬುದ್ದಿ ಕಲೀದೆ ಇದ್ರೆ. ಜತೆಯಲ್ಲಿ ಇದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತೆ. ಜೆಡಿಎಸ್‌ನವರಿಗೂ ಜನ ಬುದ್ದಿ ಕಲಿಸುತ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ