ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಇರಬೇಕಾದ್ರೆ ಕುಮಾರಸ್ವಾಮಿ ಅವರು ವಿಷ ಕಾರುತ್ತಿದ್ದರು. ನಾನು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಆದರೆ ನನ್ನನ್ನು ಮುಗಿಸಬೇಕು ಅಂದುಕೊಂಡಿದ್ದರೆ ಸಿದ್ದರಾಮಯ್ಯ ಅವರು ನನಗೆ ಅವರ ಸಂಪುಟದಲ್ಲಿ ಅಹಾರ ಖಾತೆ ಕೊಡಿಸುತ್ತಿರಲಿಲ್ಲ. ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಸುತ್ತಾರೆ ಹೊರತು ರಾಜಕೀಯವಾಗಿ ಯಾರನ್ನೂ ಮುಗಿಸಲ್ಲ ಎಂದರು.
ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು. ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ? ನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ಟರು ಎಂದು ನೆನಪಿಸಿಕೊಂಡರು.
ಜಾಫರ್ ಷರಿಫ್ ಮೊಮ್ಮಗನನ್ನು ಮುಗಿಸಿದ್ದು ಕುಮಾರಸ್ವಾಮಿ.ನಾನು ಮುಸ್ಲಿಮರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ, ದೇವೇಗೌಡರ ಬಳಿಯೂ ಕೇಳಿಕೊಂಡೆ. ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ. ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು.ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದರೂ ಹಾಕಿದ್ರು, ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ ಎಂದು ಜಮೀರ್ ಪ್ರಶ್ನಿಸಿದರು.
ಅಂದು ಬೈರತಿ ಸುರೇಶ್ ಗೆ ಮತಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ರೀ? ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ನೀವು ದೆಹಲಿಗೆ ಹೋಗಬೇಕಿಲ್ಲ, ನಮ್ಮಲ್ಲಾದರೆ ಹೈಕಮಾಂಡ್ ಕೇಳಬೇಕು, ನೀವು ಪದ್ಮನಾಭ ನಗರದಲ್ಲಿ ಅನೌನ್ಸ್ ಮಾಡಬಹುದು, ಮಾಡಿ ಎಂದು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಂಚಲಿಲ್ಲ. ಅದಕ್ಕೆ ಪ್ರಮುಖ ಕಾರಣ ಎಚ್.ಡಿ ರೇವಣ್ಣ ಅಧಿಕಾರ ಕೊಡಬಾರದು ಅನ್ನೋದು. ಎಚ್.ಡಿ ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ ಕಾರಣಕ್ಕೆ ಅಂದು ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ.ಸ್ವತಃ ಅವರ ಅಣ್ಣ ಬೆಳೆಯೊದನ್ನು ಕುಮಾರಸ್ವಾಮಿ ಸಹಿಸಲಿಲ್ಲ. ಅಲ್ಪಸಂಖ್ಯಾತರು ಬೆಳೆಯೊದನ್ನ ಕುಮಾರಸ್ವಾಮಿ ಸಹಿಸ್ತಾರಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫಾರೂಕ್ ಅವರನ್ನು ಮಂತ್ರಿ ಮಾಡಲಿಲ್ಲ. ಫಾರೂಕ್ ಅವರನ್ನು ಡಿಸಿಎಂ ಮಾಡಿ ಹೋಮ್ ಮಿನಿಸ್ಟರ್ ಮಾಡ್ತೇನೆ ಎಂದಿದ್ರು ಆದರೆ ಅವರನ್ನ ಮಂತ್ರಿ ಮಾಡಿದ್ರಾ ಕುಮಾರಸ್ವಾಮಿ ಅವರೇ.? ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಜಾತ್ಯತೀತ ನಾಯಕ ಆದರೆ ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ. ನಾನು 2002 ರಿಂದ ಜೆಡಿಎಸ್ ಪಕ್ಷದಲ್ಲೇ ಇದ್ದವನು, ದೇವೇಗೌಡರು, ಕುಮಾರಸ್ವಾಮಿಯವರ ಜೊತೆ ಇದ್ದವನು. ಆಗ ಸಿದ್ದರಾಮಯ್ಯನವರಿಗೂ ಕುಮಾರಸ್ವಾಮಿಗೂ ಹೀಗೆ ಆಗ್ತಿರಲಿಲ್ಲ. ಕುಮಾರಸ್ವಾಮಿಗೂ ಸಿದ್ದರಾಮಯ್ಯಗೂ ಆಗಲ್ಲ ಅನ್ನೋ ಕಾರಣಕ್ಕೆ ನಾನೂ ಸಿದ್ದರಾಮಯ್ಯ ವಿರುದ್ಧ ಆಗ ನಿಲ್ಲುತ್ತಿದ್ದೆ, ಕುಮಾರಸ್ವಾಮಿ ಪರ ನಿಲ್ಲುತ್ತಿದ್ದೆ.
ಅದನ್ನು ನೆನಪಿಸಿಕೊಂಡು ನಾವು ಕಾಂಗ್ರೆಸ್ ಗೆ ಬಂದ ಮೇಲೆ ಸಿದ್ದರಾಮಯ್ಯ ನಮ್ಮನ್ನು ಮುಗಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ನಮ್ಮನ್ನು ಬೆಳೆಸಿದರು. ನನಗೆ ನಾಲ್ಕು ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ. ಆದರೆ, ಕುಮಾರಸ್ವಾಮಿ ನನಗೆ ಕೇವಲ ವಕ್ಫ್ ಮತ್ತು ಹಜ್ ಖಾತೆ ಮಾತ್ರ ಕೊಟ್ಟಿದ್ದು. ನನಗೆ ಮಿನಿಸ್ಟರ್ ಮಾಡಿ ಆಹಾರ ಖಾತೆ, ನಾಗರಿಕ ವ್ಯವಹಾರಗಳ ಖಾತೆ, ವಕ್ಫ್ ಹಾಗೂ ಹಜ್ ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ಪರ ದನಿ ಎತ್ತಿದರು.
ರಾಮನಗರ ಮುಸ್ಲಿಂ ಅಭ್ಯರ್ಥಿ ಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ಬೈ ಎಲೆಕ್ಷನ್ ನಲ್ಲೂ ಅದ್ರೂ ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು ಈ ಮೂಲಕ ಮುಸ್ಲಿಂ ಪರ ಕಾಳಜಿ ತೋರಿಸಬೇಕಿತ್ತು ಎಂದು ಸವಾಲು ಹಾಕಿದರು.
ಇದೇ ಸಂದರ್ಭದಲ್ಲಿ ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಿ, ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು. ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್ ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದ್ರು ಎಂದು ಹೇಳಿದ್ದಾರೆ. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ? ಎಂದು ಇಬ್ರಾಹಿಂ ವಿರುದ್ಧ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು. ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ? ನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ಟರು ಎಂದು ನೆನಪಿಸಿಕೊಂಡರು.
ಜಾಫರ್ ಷರಿಫ್ ಮೊಮ್ಮಗನನ್ನು ಮುಗಿಸಿದ್ದು ಕುಮಾರಸ್ವಾಮಿ.ನಾನು ಮುಸ್ಲಿಮರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ, ದೇವೇಗೌಡರ ಬಳಿಯೂ ಕೇಳಿಕೊಂಡೆ. ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ. ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು.ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದರೂ ಹಾಕಿದ್ರು, ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ ಎಂದು ಜಮೀರ್ ಪ್ರಶ್ನಿಸಿದರು.
ಅಂದು ಬೈರತಿ ಸುರೇಶ್ ಗೆ ಮತಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ರೀ? ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ನೀವು ದೆಹಲಿಗೆ ಹೋಗಬೇಕಿಲ್ಲ, ನಮ್ಮಲ್ಲಾದರೆ ಹೈಕಮಾಂಡ್ ಕೇಳಬೇಕು, ನೀವು ಪದ್ಮನಾಭ ನಗರದಲ್ಲಿ ಅನೌನ್ಸ್ ಮಾಡಬಹುದು, ಮಾಡಿ ಎಂದು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಂಚಲಿಲ್ಲ. ಅದಕ್ಕೆ ಪ್ರಮುಖ ಕಾರಣ ಎಚ್.ಡಿ ರೇವಣ್ಣ ಅಧಿಕಾರ ಕೊಡಬಾರದು ಅನ್ನೋದು. ಎಚ್.ಡಿ ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ ಕಾರಣಕ್ಕೆ ಅಂದು ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ.ಸ್ವತಃ ಅವರ ಅಣ್ಣ ಬೆಳೆಯೊದನ್ನು ಕುಮಾರಸ್ವಾಮಿ ಸಹಿಸಲಿಲ್ಲ. ಅಲ್ಪಸಂಖ್ಯಾತರು ಬೆಳೆಯೊದನ್ನ ಕುಮಾರಸ್ವಾಮಿ ಸಹಿಸ್ತಾರಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫಾರೂಕ್ ಅವರನ್ನು ಮಂತ್ರಿ ಮಾಡಲಿಲ್ಲ. ಫಾರೂಕ್ ಅವರನ್ನು ಡಿಸಿಎಂ ಮಾಡಿ ಹೋಮ್ ಮಿನಿಸ್ಟರ್ ಮಾಡ್ತೇನೆ ಎಂದಿದ್ರು ಆದರೆ ಅವರನ್ನ ಮಂತ್ರಿ ಮಾಡಿದ್ರಾ ಕುಮಾರಸ್ವಾಮಿ ಅವರೇ.? ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಜಾತ್ಯತೀತ ನಾಯಕ ಆದರೆ ಕುಮಾರಸ್ವಾಮಿ ದೇವೇಗೌಡರಲ್ಲಿ ಒಂದು ಪರ್ಸೆಂಟ್ ಸಹ ಇಲ್ಲ. ನಾನು 2002 ರಿಂದ ಜೆಡಿಎಸ್ ಪಕ್ಷದಲ್ಲೇ ಇದ್ದವನು, ದೇವೇಗೌಡರು, ಕುಮಾರಸ್ವಾಮಿಯವರ ಜೊತೆ ಇದ್ದವನು. ಆಗ ಸಿದ್ದರಾಮಯ್ಯನವರಿಗೂ ಕುಮಾರಸ್ವಾಮಿಗೂ ಹೀಗೆ ಆಗ್ತಿರಲಿಲ್ಲ. ಕುಮಾರಸ್ವಾಮಿಗೂ ಸಿದ್ದರಾಮಯ್ಯಗೂ ಆಗಲ್ಲ ಅನ್ನೋ ಕಾರಣಕ್ಕೆ ನಾನೂ ಸಿದ್ದರಾಮಯ್ಯ ವಿರುದ್ಧ ಆಗ ನಿಲ್ಲುತ್ತಿದ್ದೆ, ಕುಮಾರಸ್ವಾಮಿ ಪರ ನಿಲ್ಲುತ್ತಿದ್ದೆ.
ಅದನ್ನು ನೆನಪಿಸಿಕೊಂಡು ನಾವು ಕಾಂಗ್ರೆಸ್ ಗೆ ಬಂದ ಮೇಲೆ ಸಿದ್ದರಾಮಯ್ಯ ನಮ್ಮನ್ನು ಮುಗಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ನಮ್ಮನ್ನು ಬೆಳೆಸಿದರು. ನನಗೆ ನಾಲ್ಕು ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ. ಆದರೆ, ಕುಮಾರಸ್ವಾಮಿ ನನಗೆ ಕೇವಲ ವಕ್ಫ್ ಮತ್ತು ಹಜ್ ಖಾತೆ ಮಾತ್ರ ಕೊಟ್ಟಿದ್ದು. ನನಗೆ ಮಿನಿಸ್ಟರ್ ಮಾಡಿ ಆಹಾರ ಖಾತೆ, ನಾಗರಿಕ ವ್ಯವಹಾರಗಳ ಖಾತೆ, ವಕ್ಫ್ ಹಾಗೂ ಹಜ್ ನಾಲ್ಕು ಖಾತೆ ಕೊಡಿಸಿದ್ದು ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ಪರ ದನಿ ಎತ್ತಿದರು.
ರಾಮನಗರ ಮುಸ್ಲಿಂ ಅಭ್ಯರ್ಥಿ ಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು? ಬೈ ಎಲೆಕ್ಷನ್ ನಲ್ಲೂ ಅದ್ರೂ ಹೇಳಬೇಕಿತ್ತು. ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಈ ಹಿಂದೆ ಗೆದ್ದಿದ್ರು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅವರಿಗೆ ಕೊಡಬೇಕಿತ್ತು ಈ ಮೂಲಕ ಮುಸ್ಲಿಂ ಪರ ಕಾಳಜಿ ತೋರಿಸಬೇಕಿತ್ತು ಎಂದು ಸವಾಲು ಹಾಕಿದರು.
ಇದೇ ಸಂದರ್ಭದಲ್ಲಿ ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಿ, ಸಿಎಂ ಇಬ್ರಾಹಿಂ ಒಳ್ಳೆಯ ಭಾಷಣಕಾರ. ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು. ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್ ಲ್ಲಿ ಇಟ್ಟಿದ್ದಾರೆ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ವಿರೋಧ ಮಾಡಿದ್ರು ಎಂದು ಹೇಳಿದ್ದಾರೆ. ಹಾಗಾದ್ರೆ ಟಿಪ್ಪು ಜಯಂತಿಯಲ್ಲಿ ಯಾಕೆ ಭಾಗವಹಿಸಿದ್ರು ? ಎಂದು ಇಬ್ರಾಹಿಂ ವಿರುದ್ಧ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.