ಆ್ಯಪ್ನಗರ

ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ: ವಿಧಾನಸೌಧದಲ್ಲಿ ಗೂಂಡಾಗಿರಿ ರಾಜಕೀಯ!

ವಿಧಾನಸೌಧದ ಜಾರ್ಜ್‌ ಕೊಠಡಿ ಮುಂದೆ ಹೈ ಡ್ರಾಮಾ ನಡೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ. ರಾಜ್ಯದ ಶಕ್ತಿಸೌಧದ ಘಟನೆ ಕುಂದುವಂತಹ ಘಟನೆ ಬುಧವಾರ ನಡೆದಿದ್ದು, ವಿಧಾನಸೌಧದಲ್ಲೇ ಶಾಸಕರ ನಡುವೆ ಜಟಾಪಟಿ, ನೂಕಾಟದಂತಹ ಪ್ರಕರಗಳು ವರದಿಯಾಗಿವೆ.

Vijaya Karnataka Web 10 Jul 2019, 6:17 pm
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ರಾಜ್ಯದ ಶಕ್ತಿಸೌಧದ ಘಟನೆ ಕುಂದುವಂತಹ ಘಟನೆ ಬುಧವಾರ ನಡೆದಿದ್ದು, ವಿಧಾನಸೌಧದಲ್ಲೇ ಶಾಸಕರ ನಡುವೆ ಜಟಾಪಟಿ, ನೂಕಾಟದಂತಹ ಪ್ರಕರಣಗಳು ವರದಿಯಾಗಿವೆ.
Vijaya Karnataka Web b21875ef-213c-4191-9e36-26130b5c71f8


ಕಾಂಗ್ರೆಸ್ ಶಾಸಕ ಸುಧಾಕರ್ ರಾಜೀನಾಮೆ ನೀಡುವ ವೇಳೆ ಕಾಂಗ್ರೆಸ್ ಮುಖಂಡರು ಅವರನ್ನು ಎಳೆದಾಡಿದ್ದಾರೆ. ಇದನ್ನು ಖಂಡಿಸಿ ವಿಧಾನಸೌಧದ ಆವರಣದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ವೇಳೆ, ವಿಧಾನಸೌಧ ಪ್ರವೇಶಿಸಲು ತೆರಳಿದ ಸಚಿವ ಯು.ಟಿ. ಖಾದರ್ ಹಾಗೂ ರೇಣುಕಾಚಾರ್ಯ ನಡುವೆ ಜಟಾಪಟಿ ನಡೆದಿದೆ.

ವಿಧಾನಸೌಧದ ಜಾರ್ಜ್‌ ಕೊಠಡಿ ಮುಂದೆ ಹೈ ಡ್ರಾಮಾ ನಡೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ. ವಿಧಾನಸೌಧದಲ್ಲೀ ಗೂಂಡಾಗಿರಿ ನಡೆದಿದೆ. ಈ ಹಿನ್ನೆಲೆ ಕೂಡಲೇ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಯಿತು. ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.

ಬುಧವಾರ (ಜುಲೈ 10, 2019) ಸಮ್ಮಿಶ್ರ ಸರಕಾರದ ಭಾಗವಾಗಿದ್ದ ಕಾಂಗ್ರೆಸ್‌ನ ಮತ್ತಿಬ್ಬರು ಶಾಸಕರಾದ ಎಂ.ಟಿ.ಬಿ. ನಾಗರಾಜ್‌ ಹಾಗೂ ಸುಧಾಕರ್ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಎಂಟಿಬಿ ನಾಗರಾಜ್ ಅವರನ್ನು ತಡೆಯಲು ಕಾಂಗ್ರೆಸ್ ಯತ್ನಿಸಿದ್ದು, ಆದರೆ ಅವರು ರಾಜೀನಾಮೆ ನೀಡಿ ಪೊಲೀಸ್ ರಕ್ಷಣೆಯೊಂದಿಗೆ ಹೊರಗೆ ತೆರಳಿದ್ದಾರೆ.

ಇನ್ನೊಂದೆಡೆ, ರಾಜೀನಾಮೆ ನೀಡಿದ ಸುಧಾಕರ್‌ರನ್ನು ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಅವರನ್ನು ಓಲೈಸಲು ಯತ್ನಿಸಿ ಎಳೆದಾಡಿದರು. ಜಾರ್ಜ್ ಕೊಠಡಿಗೆ ಕರೆದೊಯ್ಯಲು ಯತ್ನಿಸುವ ವೇಳೆ ಈ ಘಟನೆ ನಡೆದಿದೆ. ಈ ಎಲ್ಲ ಘಟನೆಗಳಿಂದ ಜನನಾಯಕರಿಗೆ ಮತ ಹಾಕಿದ ರಾಜ್ಯದ ಜನರೇ ತಲೆ ತಗ್ಗಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ