ಬೆಂಗಳೂರು: ರಾಜ್ಯ ಸರಕಾರದ ಲೆಕ್ಕಾಚಾರ ನಿಜವಾದಲ್ಲಿ ನೋಟು ನಿಷೇಧದ ಪರಿಣಾಮ ಕರ್ನಾಟಕಕ್ಕೆ ಕನಿಷ್ಠ 5,000 ಕೋಟಿ ರೂ ಆದಾಯ ನಷ್ಟವಾಗಲಿದೆ. ಪ್ರಮುಖವಾಗಿ ಮುದ್ರಾಂಕಗಳು ಮತ್ತು ನೋಂದಣಿ ಹಾಗೂ ವಾಣಿಜ್ಯ ತೆರಿಗೆ ಸೇರಿದಂತೆ ಹಲವು ಮೂಲಗಳಿಂದ ಬರಬೇಕಾದ ಆದಾಯಕ್ಕೆ ಕತ್ತರಿ ಬಿದ್ದಿದೆ.
ಏಪ್ರಿಲ್ 1ರಿಂದ ನವೆಂಬರ್8ರ ವರೆಗೆ ರಾಜ್ಯ ಸರಕಾರಕ್ಕೆ ಉತ್ತಮ ಆದಾಯ ಬಂದಿದೆ. ಮುಖ್ಯವಾಗಿ ಆಸ್ತಿಗಳ ನೋಂದಣಿ, ವಾಹನಗಳ ತೆರಿಗೆ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳಿಂದ ಉತ್ತಮ ಆದಾಯ ದೊರೆತಿದೆ ಎಂದು ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
''ಹಾಗಿದ್ದರೂ, ನೋಟು ನಿಷೇಧದ ಬಳಿಕ ಈ ವಲಯಗಳಿಂದ ಬರಬೇಕಾದ 1,000 ಕೋಟಿಗೂ ಹೆಚ್ಚಿನ ಆದಾಯ ಕುಸಿತವಾಗಿದೆ. ಮುಂದಿನ ಮೂರು ತಿಂಗಳು ಇನ್ನೂ ಕಠಿಣವಾಗಿರಲಿದೆ. ಬೇನಾಮಿ ಆಸ್ತಿಗಳ ಕಾಯ್ದೆ ರೂಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಖರೀದಿದಾರರು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಹೀಗಾಗಿ ರಾಜ್ಯದ ಪಾಲಿಗೆ ಈ ವಲಯಗಳಿಂದ ಬರಬೇಕಾದ ಆದಾಯಕ್ಕೆ ಇನ್ನಷ್ಟು ಕತ್ತರಿ ಬೀಳುವುದು ನಿಶ್ಚಿತ'' ಎಂದು ಅವರು ತಿಳಿಸಿದರು.
ಅಬಕಾರಿ, ಆಸ್ತಿಗಳ ನೋಂದಣಿ ಮತ್ತು ಮೌಲ್ಯವರ್ಧಿತ ತೆರಿಗೆಗಳಿಂದ ಬರಬೇಕಾದ ಆದಾಯ ಶೇ 10ರಿಂದ ಶೇ30ರಷ್ಟು ಕುಸಿತವಾಗಿದೆ. ಈ ನಾಲ್ಕು ವಲಯಗಳಿಂದ 2016-17ರ ಹಣಕಾಸು ವರ್ಷದಲ್ಲಿ 82,102 ಕೋಟಿ ರೂ ಆದಾಯ ಆದಾಯ ನಿರೀಕ್ಷಿಸಲಾಗಿತ್ತು. ನೋಟು ನಿಷೇಧದಿಂದ ಕನಿಷ್ಠ ಶೇ 10ರಷ್ಟು ನಷ್ಟವಾದರೆ ನೈಜ ಆದಾಯ 8,210 ಕೋಟಿ ರೂ.ಗಳಾಗಲಿದೆದ. ಅದರಲ್ಲೂ ಶೇ 50ರಷ್ಟು ಕೇಂದ್ರದ ಪಾಲಾಗಲಿದ್ದು, ರಾಜ್ಯ ಸರಕಾರಕ್ಕೆ ಒಟ್ಟು 4,000 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ ಎಂದು ಮೂಲವಂದು ತಿಳಿಸಿದೆ.
''ನಷ್ಟವನ್ನು ಶೇ10ಕ್ಕಿಂತ ಕಡಿಮೆ ಮಾಡಲು ಸಾಧ್ಯವಾದರೆ ಅದೇ ದೊಡ್ಡ ಸಾಧನೆಯಾಗಲಿದೆ. ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿಗಳಿಂದ ಬರಬೇಕಾದ ಆದಾಯ ಭಾರೀ ಪ್ರಮಾಣದಲ್ಲಿ ನಷ್ಟಗೊಂಡಿದೆ. ಈ ಎರಡು ಪ್ರಮುಖ ವಲಯಗಳಿಂದ ಸುಮಾರು 3,000 ಕೋಟಿ ರೂ ನಷ್ಟವನ್ನು ಅಂದಾಜಿಸಲಾಗಿದೆ'' ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ನಷ್ಟವನ್ನು ತುಂಬಿಕೊಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ನಿರೀಕ್ಷೆಯಿದೆ. ಇತರ ಹಲವು ರಾಜ್ಯಗಳು ಈಗಾಗಲೇ ತಮ್ಮ ಕಲ್ಯಾಣ ಯೋಜನೆಗಳಿಗೆ ಉಂಟಾದ ಹಣದ ಕೊರತೆಯನ್ನು ಭರ್ತಿ ಮಾಡಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿವೆ.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದವುಗಳು ನೋಟು ನಿಷೇಧದ ಬಳಿಕ ತೀವ್ರ ಮುಗ್ಗಟ್ಟು ಎದುರಿಸುತ್ತಿವೆ. ಅಲ್ಲದೆ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ. ಜನವರಿ 1ರಿಂದ ಇದು ಜಾರಿಗೆ ಬರಬೇಕಾಗಿದೆ.
ನೋಟು ನಿಷೇಧದ ಪರಿಣಾಮ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ. ಎಲ್ಲ ವಲಯಗಳಲ್ಲೂ ಆದಾಯದ ಕೊರತೆ ಕಾಡಲಿದೆ. ಮಾರ್ಚ್ ವೇಳೆಗೆ ಶೇ 10-15ರಷ್ಟು ಆದಾಯ ಕೊರತೆ ನಿರೀಕ್ಷಿಸಲಾಗಿದೆ ಎಂದು ಸಾರಿಗೆ ಸಚಿವ ಬಿ. ರಾಮಲಿಂಗಾರೆಡ್ಡಿ ಹೇಳುತ್ತಾರೆ.
Demonetisation effect: Karnataka could lose Rs 5,000 crore in revenue
BENGALURU: If the prediction of the state government comes true, then Karnataka could lose its annual revenue by a minimum of Rs 5,000 crore, due to the impact of demonetisation. The shortfall could come from various sources, largely stamps and registration and commercial taxes, this fiscal.
ಏಪ್ರಿಲ್ 1ರಿಂದ ನವೆಂಬರ್8ರ ವರೆಗೆ ರಾಜ್ಯ ಸರಕಾರಕ್ಕೆ ಉತ್ತಮ ಆದಾಯ ಬಂದಿದೆ. ಮುಖ್ಯವಾಗಿ ಆಸ್ತಿಗಳ ನೋಂದಣಿ, ವಾಹನಗಳ ತೆರಿಗೆ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳಿಂದ ಉತ್ತಮ ಆದಾಯ ದೊರೆತಿದೆ ಎಂದು ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
''ಹಾಗಿದ್ದರೂ, ನೋಟು ನಿಷೇಧದ ಬಳಿಕ ಈ ವಲಯಗಳಿಂದ ಬರಬೇಕಾದ 1,000 ಕೋಟಿಗೂ ಹೆಚ್ಚಿನ ಆದಾಯ ಕುಸಿತವಾಗಿದೆ. ಮುಂದಿನ ಮೂರು ತಿಂಗಳು ಇನ್ನೂ ಕಠಿಣವಾಗಿರಲಿದೆ. ಬೇನಾಮಿ ಆಸ್ತಿಗಳ ಕಾಯ್ದೆ ರೂಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಖರೀದಿದಾರರು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಹೀಗಾಗಿ ರಾಜ್ಯದ ಪಾಲಿಗೆ ಈ ವಲಯಗಳಿಂದ ಬರಬೇಕಾದ ಆದಾಯಕ್ಕೆ ಇನ್ನಷ್ಟು ಕತ್ತರಿ ಬೀಳುವುದು ನಿಶ್ಚಿತ'' ಎಂದು ಅವರು ತಿಳಿಸಿದರು.
ಅಬಕಾರಿ, ಆಸ್ತಿಗಳ ನೋಂದಣಿ ಮತ್ತು ಮೌಲ್ಯವರ್ಧಿತ ತೆರಿಗೆಗಳಿಂದ ಬರಬೇಕಾದ ಆದಾಯ ಶೇ 10ರಿಂದ ಶೇ30ರಷ್ಟು ಕುಸಿತವಾಗಿದೆ. ಈ ನಾಲ್ಕು ವಲಯಗಳಿಂದ 2016-17ರ ಹಣಕಾಸು ವರ್ಷದಲ್ಲಿ 82,102 ಕೋಟಿ ರೂ ಆದಾಯ ಆದಾಯ ನಿರೀಕ್ಷಿಸಲಾಗಿತ್ತು. ನೋಟು ನಿಷೇಧದಿಂದ ಕನಿಷ್ಠ ಶೇ 10ರಷ್ಟು ನಷ್ಟವಾದರೆ ನೈಜ ಆದಾಯ 8,210 ಕೋಟಿ ರೂ.ಗಳಾಗಲಿದೆದ. ಅದರಲ್ಲೂ ಶೇ 50ರಷ್ಟು ಕೇಂದ್ರದ ಪಾಲಾಗಲಿದ್ದು, ರಾಜ್ಯ ಸರಕಾರಕ್ಕೆ ಒಟ್ಟು 4,000 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ ಎಂದು ಮೂಲವಂದು ತಿಳಿಸಿದೆ.
''ನಷ್ಟವನ್ನು ಶೇ10ಕ್ಕಿಂತ ಕಡಿಮೆ ಮಾಡಲು ಸಾಧ್ಯವಾದರೆ ಅದೇ ದೊಡ್ಡ ಸಾಧನೆಯಾಗಲಿದೆ. ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿಗಳಿಂದ ಬರಬೇಕಾದ ಆದಾಯ ಭಾರೀ ಪ್ರಮಾಣದಲ್ಲಿ ನಷ್ಟಗೊಂಡಿದೆ. ಈ ಎರಡು ಪ್ರಮುಖ ವಲಯಗಳಿಂದ ಸುಮಾರು 3,000 ಕೋಟಿ ರೂ ನಷ್ಟವನ್ನು ಅಂದಾಜಿಸಲಾಗಿದೆ'' ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ನಷ್ಟವನ್ನು ತುಂಬಿಕೊಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ನಿರೀಕ್ಷೆಯಿದೆ. ಇತರ ಹಲವು ರಾಜ್ಯಗಳು ಈಗಾಗಲೇ ತಮ್ಮ ಕಲ್ಯಾಣ ಯೋಜನೆಗಳಿಗೆ ಉಂಟಾದ ಹಣದ ಕೊರತೆಯನ್ನು ಭರ್ತಿ ಮಾಡಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿವೆ.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದವುಗಳು ನೋಟು ನಿಷೇಧದ ಬಳಿಕ ತೀವ್ರ ಮುಗ್ಗಟ್ಟು ಎದುರಿಸುತ್ತಿವೆ. ಅಲ್ಲದೆ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ. ಜನವರಿ 1ರಿಂದ ಇದು ಜಾರಿಗೆ ಬರಬೇಕಾಗಿದೆ.
ನೋಟು ನಿಷೇಧದ ಪರಿಣಾಮ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ. ಎಲ್ಲ ವಲಯಗಳಲ್ಲೂ ಆದಾಯದ ಕೊರತೆ ಕಾಡಲಿದೆ. ಮಾರ್ಚ್ ವೇಳೆಗೆ ಶೇ 10-15ರಷ್ಟು ಆದಾಯ ಕೊರತೆ ನಿರೀಕ್ಷಿಸಲಾಗಿದೆ ಎಂದು ಸಾರಿಗೆ ಸಚಿವ ಬಿ. ರಾಮಲಿಂಗಾರೆಡ್ಡಿ ಹೇಳುತ್ತಾರೆ.
Demonetisation effect: Karnataka could lose Rs 5,000 crore in revenue
BENGALURU: If the prediction of the state government comes true, then Karnataka could lose its annual revenue by a minimum of Rs 5,000 crore, due to the impact of demonetisation. The shortfall could come from various sources, largely stamps and registration and commercial taxes, this fiscal.